ಭಾರತ ಬಂದ್ : 1 ದಿನದಲ್ಲಿ ಕೆಎಸ್ಆರ್ಟಿಸಿಗೆ ಆದ ನಷ್ಟ ಎಷ್ಟು?
ಬೆಂಗಳೂರು, ಜನವರಿ 9:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್ನಿಂದಾಗಿ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಲಕ್ಷ ಲಕ್ಷಗಟ್ಟಲೆ ನಷ್ಟ ಉಂಟಾಗಿದೆ.
ಭಾರತ್ ಬಂದ್ LIVE: ಬಿಎಂಟಿಸಿ ಬಸ್ ಸಂಪೂರ್ಣ ಸ್ಥಗಿತ
ಕೇವಲ ಒಂದು ದಿನದಲ್ಲಿ ರಾಮನಗರ 30 ಲಕ್ಷ ರೂ., ಹಾವೇರಿ ವಿಭಾಗದಿಂದ 40 ಲಕ್ಷ ರೂ., ಉತ್ತರ ಕನ್ನಡದಿಂದ 50 ಲಕ್ಷ ರೂ., ಹಾಸನ 26 ಲಕ್ಷ ರೂ., ಚಿಕ್ಕಮಗಳೂರು 25 ಲಕ್ಷ ರೂ., ಕೋಲಾರ 34 ಲಕ್ಷ ರೂ., ಮಂಗಳೂರು 50 ಲಕ್ಷ ರೂ., ಕೊಪ್ಪಳ 20 ಲಕ್ಷ ರೂ., ಉತ್ತರ ಕನ್ನಡ 40 ಲಕ್ಷ ರೂ. ಬೆಳಗಾವಿ 65 ಲಕ್ಷ ರೂ., ದಾವಣಗೆರೆ 30 ಲಕ್ಷ ರೂ. ಹಾಗೂ ರಾಯಚೂರಿನಿಂದ 70 ಲಕ್ಷ ರೂ. ನಷ್ಟ ಉಂಟಾಗಿದೆ. ಇನ್ನು ಒಂದೇ ದಿನ ಈಶಾನ್ಯ ಸಾರಿಗೆ ಸಂಸ್ಥೆಗೆ 9 ಕೋಟಿ ರೂ. ನಷ್ಟ ಉಂಟಾಗಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ, ಸಂಚಾರ ಸ್ಥಗಿತ
ಪ್ರತಿದಿನ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದ ಪ್ರತಿ ಜಿಲ್ಲೆಯ ಸಾರಿಗೆ ಇಲಾಖೆ ನಿನ್ನೆ ನಡೆದ ರಾಷ್ಟ್ರವ್ಯಾಪಿ ಮುಷ್ಕರ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಭಾರಿ ನಷ್ಟ ಅನುಭವಿಸಿದೆ.
ಬೆಂಗಳೂರಿನ ಚಿಕ್ಕಜಾಲದ ಸಮೀಪ ಆರು ಬಸ್ಗಳ ಮೇಲೆ ತೂರಾಟ ನಡೆಸಿದ ಕಾರಣ ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಬುಧವಾರ ಕೂಡ ಸಾರಿಗೆ ಸಂಸ್ಥೆಗಳು ಸಾಕಷ್ಟು ನಷ್ಟವನ್ನು ಅನುಭವಿಸಲಿವೆ.
ಆಯಾ ವಿಭಾಗಗಳಲ್ಲಿನ ಸಾರಿಗೆ ಸಂಸ್ಥೆಯ ನಷ್ಟದ ಬಗ್ಗೆ ಅಲ್ಲಿನ ವಿಭಾಗೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.