ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಆಹ್ವಾನ
ಬೆಂಗಳೂರು, ಜ.18 : ಕರ್ನಾಟಕ ವಾರ್ತಾ ಇಲಾಖೆಯು ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಪರ್ತಕರ್ತರನ್ನು ಪ್ರತಿ ವರ್ಷ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಸದ್ಯ, 2012 ಮತ್ತು 2013ರನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮುದ್ರಣ
ಮತ್ತು
ವಿದ್ಯುನ್ಮಾನ
ಮಾಧ್ಯಮದ
ಪ್ರತಿನಿಧಿಗಳಿಂದ
2012
ಮತ್ತು
2013
ಸಾಲಿನ
ಪ್ರಶಸ್ತಿಗಾಗಿ
ಅರ್ಜಿ
ಆಹ್ವಾನಿಸಲಾಗಿದೆ.
ಅಭಿವೃದ್ಧಿ
ಪತ್ರಿಕೋದ್ಯಮ
ಪ್ರಶಸ್ತಿ
ಮತ್ತು
ಪರಿಸರ
ಪತ್ರಿಕೋದ್ಯಮ
ಪ್ರಶಸ್ತಿಗಾಗಿ
ಅರ್ಹರು
ಅರ್ಜಿ
ಸಲ್ಲಿಸಬಹುದಾಗಿದೆ.
ವಾರ್ತಾ
ಇಲಾಖೆಯ
ನಿರ್ದೇಶಕರ
ಅಧ್ಯಕ್ಷತೆಯಲ್ಲಿನ
ತ್ರಿಸದಸ್ಯ
ಸಮಿತಿಯು
ಅರ್ಹರನ್ನು
ಪ್ರಶಸ್ತಿಗಾಗಿ
ಆಯ್ಕೆ
ಮಾಡಲಿದೆ.
ಪ್ರಶಸ್ತಿಗಾಗಿ ನಾಮ ನಿರ್ದೇಶನ ಸಲ್ಲಿಸುವವರು ಕನಿಷ್ಠ 10ವರ್ಷ ಪತ್ರಿಕೋದ್ಯಮ, ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರಬೇಕು ಹಾಗೂ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮಕ್ಕೆ ವಿಶೇಷ ಕೊಡುಗೆ ನೀಡಿರಬೇಕು. ನ್ಯಾಯಾಲಯ ಅಥವಾ ಭಾರತೀಯ ಪತ್ರಿಕಾ ಮಂಡಳಿಯಿಂದ ಛೀಮಾರಿ ಅಥವ ದಂಡ ಹಾಕಿಸಿಕೊಂಡಿರುವುದು ಮತ್ತು ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾದವರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇರವಾಗಿ ಅಥವಾ ಜಿಲ್ಲಾ ವಾರ್ತಾಧಿಕಾರಿಗಳ ಮುಖಾಂತರ ಅಥವಾ ಪತ್ರಿಕಾ ಸಂಘ ಸಂಸ್ಥೆಗಳ ಮುಖಾಂತರ ನಾಮ ನಿರ್ದೇಶನವನ್ನು ಸಲ್ಲಿಸಬಹುದಾಗಿದೆ. ಬಿಳಿಹಾಳೆಯಲ್ಲಿ ಸಂಪೂರ್ಣ ಸ್ವವಿವರ, ಸಂಪರ್ಕ ವಿಳಾಸ, ಮೊಬೈಲ್ ಸಂಖ್ಯೆ ಬರೆದು, ಲಕೋಟೆಯಮೇಲೆ ಪ್ರಶಸ್ತಿಯ ಹೆಸರನ್ನು ನಮೂದಿಸಿ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಜನವರಿ 31, 2014 ಕಡೆಯ ದಿನಾಂಕವಾಗಿರುತ್ತದೆ. ಅರ್ಜಿಯೊಂದಿಗೆ ತಮ್ಮ ಸಾಧನೆಯನ್ನು ಸಮರ್ಥಿಸಲು ತಮ್ಮ ಪ್ರಕಟಿತ ವಿಶೇಷ ಲೇಖನಗಳು, ಲೇಖನ ಮಾಲೆಗಳ ಪತ್ರಿಕಾ ತುಣುಕುಗಳು/ಪ್ರಕಟಿತ ಪುಸ್ತಕಗಳ ಪ್ರತಿಗಳು, ಪಡೆದಿರುವ ಗೌರವ ಪ್ರಶಸ್ತಿಗಳ ದಾಖಲೆಗಳನ್ನು ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಇಲಾಖೆಯ 080-22028034 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಅರ್ಜಿಗಳನ್ನು ಕಳಿಸಲು ವಿಳಾಸ : ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು -560001.