ಆರೇಳು ತಿಂಗಳಲ್ಲಿ ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 14: ಇನ್ನೂ 6-7 ತಿಂಗಳಲ್ಲಿ ನಿಮ್ಮ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ ಪಕ್ಷವು ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಿ ರಾಜ್ಯದಲ್ಲಿ ಅಧಿಕಾರ ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಮತಗಟ್ಟೆ ಮಟ್ಟದ ಜೆಡಿಎಸ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, " ರಾಷ್ಟ್ರೀಯ ಪಕ್ಷಗಳು ನಮ್ಮ ಪಕ್ಷವನ್ನು ಲಘುವಾಗಿ ಕಾಣುತ್ತಿವೆ. ನಮ್ಮ ಶಕ್ತಿ ಏನೆಂದು ವಿಧಾನಸಭೆ ಚುನಾವಣೆ ನಡೆದ ನಂತರ ಗೊತ್ತಾಗಲಿದೆ. ಗುಪ್ತಗಾಮಿನಿಯಂತೆ ಪಕ್ಷದ ಪರವಾಗಿ ಜನರ ಒಲವು ವ್ಯಕ್ತವಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ರಾಜಕೀಯ ಚೇಷ್ಟೆಗಳನ್ನು ನೋಡಿ ಕನ್ನಡಿಗರು ರೋಸಿ ಹೋಗಿದ್ದಾರೆ" ಎಂದರು.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಅಪ್ತ ಬಿಜೆಪಿ ತೆಕ್ಕೆಗೆ!
ನಿಮ್ಮಿಂದ ನಿಮ್ಮ ಶಾಸಕರಿಗೆ ಬಲ ತುಂಬುವ ಕೆಲಸ ಆಗಬೇಕಿದೆ ಎಂದು ಕಾರ್ಯಕರ್ತರಿಗೆ ತಿಳಿ ಹೇಳಿದ ಮಾಜಿ ಮುಖ್ಯಮಂತ್ರಿ, ಬಿಬಿಎಂಪಿ ವಾರ್ಡ್ ಮೀಸಲಾತಿಯನ್ನು ಬಿಜೆಪಿ ಸರಕಾರ ತನಗೆ ಬೇಕಾದ ರೀತಿಯಲ್ಲಿ ಮಾಡಿಕೊಂಡಿದೆ. ಅದು ಏನೇ ಆದರೂ ನಾವು ದಾಸರಹಳ್ಳಿ ಕ್ಷೇತ್ರದಲ್ಲಿ 10 ವಾರ್ಡ್ ಆದರೂ ಗೆಲ್ಲಲೇಬೇಕು ಎಂದು ಒತ್ತಿ ಹೇಳಿದರು.
ಜೆಡಿಎಸ್ಗೆ
ಒಂದು
ಅವಕಾಶ
ಕೊಟ್ಟು
ನೋಡಿ
ಬಿಜೆಪಿ
ಸರಕಾರ
ಎಲ್ಲ
ಕ್ಷೇತ್ರಗಳಲ್ಲೂ
ವಿಫಲವಾಗಿದೆ.
ಕೊವಿಡ್
ನಿಂದ
ಮೃತಪಟ್ಟವರಿಗೆ
ಪರಿಹಾರ
ಹಣ
ಕೊಡುತ್ತೇವೆ
ಎಂದು
ಹೇಳಿ
ನಂತರ
ಕೊಡಲಿಲ್ಲ.
ಬೆಂಗಳೂರಿನಲ್ಲಿ
ಯಾವುದೇ
ಕೆಲಸ
ಮಾಡದೇ
ಹಣವನ್ನು
ಲೂಟಿ
ಮಾಡುತ್ತಿದ್ದಾರೆ
ಎಂದು
ಅವರು
ವಾಗ್ದಾಳಿ
ನಡೆಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆಡಳಿತ ನಡೆಸಿ ಹೇಗೆ ನಡೆದುಕೊಂಡಿವೆ ಎನ್ನುವುದನ್ನು ಜನ ನೋಡಿದ್ದಾರೆ. ನಮಗೂ ಒಂದು ಅವಕಾಶ ಕೊಡಿ. ದಾಸರಹಳ್ಳಿಯನ್ನು ಮಾದರಿ ವಿಧಾನಸಭಾ ಕ್ಷೇತ್ರವಾಗಿ ಮಾಡುತ್ತೇವೆ. ನಿಮ್ಮ ದುಡಿಮೆಯ ಋಣದ ಭಾರವನ್ನು ಇಟ್ಟಿದ್ದೀರಾ. ಅದಕ್ಕೆ ಗೌರವ ಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಅನುದಾನ
ತಾರತಮ್ಯ
ದಾಸರಹಳ್ಳಿ
ಶಾಸಕ
ಮಂಜುನಾಥ್
ಅವರು
ಮಾತನಾಡಿ,
"ಕ್ಷೇತ್ರದ
ಪ್ರಗತಿಗೆ
ಹಗಲಿರುಳು
ಕೆಲಸ
ಮಾಡಿದ್ದೇನೆ.
ಬಿಜೆಪಿ
ಸರಕಾರ
ಹೆಜ್ಜೆಹೆಜ್ಜೆಗೂ
ಕಿರುಕುಳ
ನೀಡಿದರೂ
ಎದೆಗುಂದದೆ
ಜನರ
ಸೇವೆ
ಮಾಡಿದ್ದೇನೆ
.
ಅಂಗೈ
ಹುಣ್ಣಿಗೆ
ಕನ್ನಡಿ
ಬೇಕಿಲ್ಲ
ಎನ್ನುವಂತೆ
ನಾನು
ಮಾಡಿರುವ
ಕೆಲಸಗಳು
ಕಣ್ಮುಂದೆಯೇ
ಕಾಣುತ್ತಿವೆ.
ಸರಕಾರ
ಅನುದಾನ
ನೀಡಿಕೆಯಲ್ಲಿ
ತಾರತಮ್ಯ
ಎಸಗಿದರೂ
ಕೂಡ
ಮಾಜಿ
ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ
ಅವರ
ಸಹಕಾರದೊಂದಿಗೆ
ಉತ್ತಮ
ಕೆಲಸ
ಮಾಡಿದ್ದೇನೆ"
ಎಂದು
ಶಾಸಕರು
ಹೇಳಿದರು.