ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಕರೆದರೂ ಮೋದಿ ಭೇಟಿಗೆ ಬಾರದ ರಾಜ್ಯ ಬಿಜೆಪಿ ಸಂಸದರು

By Manjunatha
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ನೇತೃತ್ವದ ನಿಯೋಗವು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಕೊಡಗಿಗೆ ನೆರವು ನೀಡುವಂತೆ ಮನವಿ ಮಾಡಿದರು.

ವಿವಿಧ ಸಚಿವರು ಇದ್ದ ನಿಯೋಗದಲ್ಲಿ ಒಬ್ಬ ಬಿಜೆಪಿ ಸಂಸದರೂ, ಮುಖಂಡರೂ ಇಲ್ಲದೇ ಇದ್ದದು ಆಶ್ಚರ್ಯ. ಸರ್ಕಾರದ ಪರವಾಗಿ ಬಿಜೆಪಿಯ ಸಂಸದರನ್ನು ಕರೆದಿದ್ದರೂ ಸಹಿತ ಹಲವು ಸಂಸದರು ಕಾರಣ ಸಹ ನೀಡದೆ ಗೈರಾಗಿದ್ದಾರೆ.

ಕರ್ನಾಟಕದ ಅತಿವೃಷ್ಟಿ, ಬರ ಪರಿಸ್ಥಿತಿಗೆ ನೆರವು: ಮೋದಿ ಭರವಸೆಕರ್ನಾಟಕದ ಅತಿವೃಷ್ಟಿ, ಬರ ಪರಿಸ್ಥಿತಿಗೆ ನೆರವು: ಮೋದಿ ಭರವಸೆ

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಹ ರಾಜ್ಯದ ನಿಯೋಗದೊಂದಿಗೆ ಮೋದಿ ಭೇಟಿಗೆ ತೆರಳಿಲ್ಲದಿರುವುದು ವಿಶೇಷ. ಮೊನ್ನೆಯಷ್ಟೆ ತಾವು ಕೊಡಗಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪಟ್ಟಿ ನೀಡಿದ್ದ ಪ್ರತಾಪ್ ಸಿಂಹ ಅದರಲ್ಲಿ ಸಿಎಂ ಜೊತೆಗೆ ಮೋದಿ ಭೇಟಿಯನ್ನೂ ಸೇರಿ ಹೇಳಿದ್ದರು ಆದರೆ ಇಂದು ಕರೆದರೂ ಸಹ ಅವರು ಹೋಗಿಲ್ಲ.

No any Karnataka BJP MPs visited Modi to ask help for Kodagu

ಪ್ರಧಾನಿ ಮೋದಿಗೆ ಸಿಎಂ ಎಚ್ಡಿಕೆ ನೀಡಿದ ಉಡುಗೊರೆ ಏನು ಗೊತ್ತಾ?ಪ್ರಧಾನಿ ಮೋದಿಗೆ ಸಿಎಂ ಎಚ್ಡಿಕೆ ನೀಡಿದ ಉಡುಗೊರೆ ಏನು ಗೊತ್ತಾ?

ದೇವೇಗೌಡ, ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಆರ್‌.ವಿ.ದೇಶಪಾಂಡೆ, ಕೃಷ್ಣಬೈರೇಗೌಡ, ಎಚ್‌.ಡಿ.ರೇವಣ್ಣ ಅವರುಗಳು ಮೋದಿ ಅವರನ್ನು ಇಂದು ಭೇಟಿಯಾಗಿ ಕೊಡಗಿಗೆ ನೆರವು ನೀಡುವಂತೆ ಕೋರಿದರು.

No any Karnataka BJP MPs visited Modi to ask help for Kodagu

ಸರ್ಕಾರವು ಕರೆದರೂ ಕೊಡಗಿಗೆ ನೆರವು ಕೇಳಲು ಬಿಜೆಪಿಯ ಯಾವೊಬ್ಬ ಸಂಸದರೂ ಹೋಗದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ವತಿಯಿಂದ ಆಹ್ವಾನ ಹೋಗಿದ್ದ ಕೇವಲ ಇಬ್ಬರು ಬಿಜೆಪಿಯ ಸಂಸದರು ಮಾತ್ರ ಕಾರಣ ತಿಳಿಸಿ ಗೈರಾಗಿದ್ದರು. ಪ್ರತಾಪ್ ಸಿಂಹ ಸೇರಿದಂತೆ ಇನ್ನುಳಿದವರಾರೂ ಕಾರಣ ಸಹ ನೀಡದೆ ಗೈರಾಗಿದ್ದರು.

English summary
Today CM Kumaraswamy took delegation to meet Modi and ask help to flood affected Kodagu. But not single BJP MPs were present in the delegation. government invited many BJP MPs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X