ನಿಪಾಹ್ ವೈರಸ್ನಿಂದ ಬಚಾವಾಗಲು ಏನು ಮಾಡಬೇಕು ? ಏನು ಮಾಡಬಾರದು?
ಬೆಂಗಳೂರು, ಜೂನ್ 7: ಕೇರಳದಲ್ಲಿ ಈ ವರ್ಷ ನಿಪಾಹ್ ಒಂದು ಪ್ರಕರಣ ದೃಢಪಟ್ಟಿದ್ದು, ಕರ್ನಾಟಕದಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ.
ಹಾಗಾದರೆ ನಿಪಾಹ್ ವೈರಸ್ನಿಂದ ಬಚಾವಾಗಲು ಏನನ್ನು ಮಾಡಬೇಕು, ಏನು ಮಾಡಬಾರದು ಎನ್ನುವುದನ್ನು ಆರೋಗ್ಯ ಇಲಾಖೆ ತಿಳಿಸಿದೆ.ಕರ್ನಾಟಕದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ನಿಪಾಹ್ ವೈರಸ್ ಭೀತಿ, ಕರ್ನಾಟಕದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಈ ನಿಪಾಹ್ ವೈರಾಣು 1998ರಲ್ಲೇ ಪತ್ತೆಯಾಗಿದ್ದರೂ, ಈ ವೈರಾಣುವಿಗೆ ಈ ವರೆಗೂ ಲಸಿಕೆಯನ್ನೇ ಕಂಡು ಹಿಡಿಯಲಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ ಎನ್ನಲಾಗಿದೆ.
ಮಾರಣಾಂತಿಕ ಕಾಯಿಲೆಗಳನ್ನು ತರಬಲ್ಲ ನಿಪಾಹ್ ವೈರಾಣುವಿಗೆ ಲಸಿಕೆ ತಯಾರಿಸಲು ಸಾಕಷ್ಟು ವೈದ್ಯಕೀಯ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆಯಾದರೂ ಲಸಿಕೆ ಮಾತ್ರ ಇನ್ನೂ ಕಂಡುಹಿಡಿಯಲಾಗಿಲ್ಲ.
ನಿಪಾಹ್ ವೈರಸ್ ಎಂದರೇನು?
ನಿಪಾಹ್ ಜ್ವರವು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸಿ ಜೀವಕ್ಕೆ ಕುತ್ತು ತರುವ ಅಪಾಯಕಾರಿ ಸೋಂಕಾಗಿದೆ.ಮೊದಲು 1998ರಲ್ಲಿ ಮಲೇಷ್ಯಾದಲ್ಲಿ ನಿಪಾಹ್ ವೈರಸ್ ಕಾಣಿಸಿಕೊಂಡಿತ್ತು.2011ರಲ್ಲಿ ಬಾಂಗ್ಲಾದೇಶದಲ್ಲೂ ಈ ಸೋಂಕು ಹರಡಿತ್ತು. ಈಗ ವೈರಸ್ ಮಲೇಷ್ಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಡಿದೆ.
ನಿಪಾಹ್ ರೋಗದ ಲಕ್ಷಣಗಳೇನು?
ಜ್ವರ, ತಲೆನೋವು, ಮೈಕೈನೋವು, ವಾಂತಿ, ನಡುಕ, ನಿದ್ರಾಲಸ್ಯ, ತೊದಲುವಿಕೆ, ಪ್ರಜ್ಞಾಹೀನತೆ.
ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಒಂದು ಪ್ರಕರಣ ದೃಢ
ನಿಪಾಹ್ ವೈರಸ್ನಿಂದ ದೂರವಿರಲು ಹೀಗೆ ಮಾಡಿ
-ಹಂದಿ,
ಕುದುರೆ,
ನಾಯಿ
ಮತ್ತು
ಬೆಕ್ಕುಗಳಂತಹ
ಸೋಮಕಿತ
ಜಾನುವಾರುಗಳು
ಮಧ್ಯಂತರ
ಮೂಲಗಳಾಗಿರುವುದರಿಂದ
ಇವುಗಳನ್ನು
ಪ್ರತ್ಯೇಕವಾಗಿಡಿ.
-ಶಂಕಿತ
ಸೋಂಕಿತರು
ಮನೆಯಲ್ಲಿದ್ದರೆ
ಅವರನ್ನು
ಪ್ರತ್ಯಕವಾಗಿರಿಸಿ
-ರೋಗಿಗಳು
ಬಳಸುವ
ವಸ್ತುಗಳನ್ನು
ಪ್ರತ್ಯೇಕವಾಗಿ
ಸಾಬೂನು,
ನೀರು
ಬಳಸಿ
ಶುಚಿಗೊಳಿಸಿ
-ಕೈಕುಲುಕುವುದನ್ನು
ತಪ್ಪಿಸಿ
ಹಾಗೂ
ಸೋಂಕಿತ
ಜನರ
ಸಂಪರ್ಕಕ್ಕೆ
ಬಂದ
ನಂತರ
ಕೈಗಳನ್ನು
ತೊಳೆದುಕೊಳ್ಳಿ.
-ಎಲ್ಲಾ
ರೀತಿಯ
ಹಣ್ಣುಗಳನ್ನು
ಚೆನ್ನಾಗಿ
ತೊಳೆದು,
ಸಿಪ್ಪೆ
ಸುಲಿದು
ಅಥವಾ
ಬೇಯಿಸಿ
ತಿನ್ನಿ
-ರೋಗಿಗಳನ್ನು
ಉಪಚರಿಸುವಾಗ
ಮಾಸ್ಕ್
ಮತ್ತು
ಗ್ಲೌಸ್
ತಪ್ಪದೇ
ಬಳಸಿ
-ಜ್ವರದ
ಲಕ್ಷಣಗಳು
ಕಂಡುಬಂದರೆ
ಹತ್ತಿರದ
ಆಸ್ಪತ್ರೆಗೆ
ಭೇಟಿ
ನೀಡಿ
-ನೆರವಿಗಾಗಿ
104ಕ್ಕೆ
ಕರೆ
ಮಾಡಿ
ನಿಪಾಹ್ ವೈರಸ್ನಿಂದ ದೂರವಿರಬೇಕಾದರೆ ಇದನ್ನು ಮಾಡಬೇಡಿ
-ಪ್ರಾಣಿಗಳು
ಮತ್ತು
ಪಕ್ಷಿಗಳು
ಕಚ್ಚಿರುವ
ಹಣ್ಣುಗಳನ್ನು
ತನ್ನಬೇಡಿ.
-ಬಾವುಲಿಗಳು
ಅತಿ
ಹೆಚ್ಚಾಗಿ
ಕಂಡು
ಬರುವ
ಪ್ರದೇಶಗಳಿಂದ
ಸಂಗ್ರಹಿಸಿದ
ನೀರಾ
ಕುಡಿಯಬೇಡಿ.
-ಸೋಂಕಿತ
ಪ್ರದೇಶಗಳಿಗೆ
ಭೇಟಿ
ನೀಡುವಾಗ
ಪ್ರತಿಬಂಧಕ
ಉಪಾಯಗಳನ್ನು
ಕೈಗೊಳ್ಳುವುದು
-ರೋಗಿಯ
ಶರೀರ
ಸ್ರಾವ(ಜೊಲ್ಲು,
ಮೂತ್ರ,
ಬೆವರು)
ಸಂಪರ್ಕ
ತಪ್ಪಿಸಿ.