ಉತ್ತರ ಪ್ರದೇಶದ ಬಾಂಬ್ ಸ್ಫೋಟಕ್ಕೆ ಕರ್ನಾಟಕದ ನಂಟು
ಬೆಂಗಳೂರು, ಮಾರ್ಚ್ 08 : ರಾಷ್ಟ್ರೀಯ ತನಿಖಾ ದಳದ ತಂಡ ಕರ್ನಾಟಕಕ್ಕೆ ಆಗಮಿಸಿದ್ದು, ಉತ್ತರ ಪ್ರದೇಶದ ಬಿಜನೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದೆ. ಈ ಬಾಂಬ್ ಸ್ಫೋಟದ ಆರೋಪಿಗಳು ಕರ್ನಾಟಕದಲ್ಲಿ ವಾಸ್ತವ್ಯ ಹೂಡಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
2013ರಲ್ಲಿ
ಮಧ್ಯಪ್ರದೇಶದ
ಜೈಲಿನಿಂದ
ಪರಾರಿಯಾದ
ನಿಷೇಧಿತ
ಸಿಮಿ
ಸಂಘಟನೆಯ
ಐವರು
ಸದಸ್ಯರು
ಈ
ಸ್ಫೋಟದ
ಆರೋಪಿಗಳಾಗಿದ್ದಾರೆ.
ಜೈಲಿನಿಂದ
ಪರಾರಿಯಾದವರಲ್ಲಿ
ಇಬ್ಬರನ್ನು
ತೆಲಂಗಾಣದಲ್ಲಿ
ನಡೆದ
ಎನ್ಕೌಂಟರ್ನಲ್ಲಿ
ಹತ್ಯೆ
ಮಾಡಲಾಗಿತ್ತು.
ಉಳಿದ
ಮೂವರು
ಆರೋಪಿಗಳನ್ನು
ಕೆಲವು
ದಿನಗಳ
ಹಿಂದೆ
ಒರಿಸ್ಸಾದಲ್ಲಿ
ಬಂಧಿಸಲಾಗಿತ್ತು.
[ಒರಿಸ್ಸಾದಲ್ಲಿ
ನಾಲ್ವರು
ಸಿಮಿ
ಉಗ್ರರ
ಬಂಧನ]
ಮೂವರು ಆರೋಪಿಗಳ ವಿಚಾರಣೆ ನಡೆಸಿದ ಎನ್ಐಎ ಅವರು ಕರ್ನಾಟಕದಲ್ಲಿ ನೆಲೆಸಿದ್ದರು ಎಂಬ ಮಾಹಿತಿ ಸಂಗ್ರಹಣೆ ಮಾಡಿತ್ತು. ಈ ಉಗ್ರರು ಯಾದಗಿರಿ, ಧಾರವಾಡ, ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಿದ್ದರು. ಕರೀಂನಗರ ಮತ್ತು ತೆಲಂಗಾಣದಲ್ಲಿ ದರೋಡೆ ನಡೆಸುವ ಸಂಚನ್ನು ಕರ್ನಾಟದಲ್ಲಿಯೇ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. [ಸಿಮಿ ಉಗ್ರರು ಧಾರವಾಡದಲ್ಲಿ 10 ತಿಂಗಳಿದ್ದರೂ ತಿಳಿಯಲಿಲ್ಲ ಏಕೆ?]
ಕರ್ನಾಟಕದಲ್ಲಿ ಈ ಉಗ್ರರಿಗೆ ಯಾರ ಜೊತೆ ಸಂಪರ್ಕವಿತ್ತು ಎಂದು ಎನ್ಐಎ ತಂಡ ತನಿಖೆ ನಡೆಸಲು ಆಗಮಿಸಿದೆ. ಚೆನ್ನೈನಲ್ಲಿ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಈ ಉಗ್ರರ ಪಾತ್ರವಿದೆಯೇ?, ಅಲ್ಲಿನ ಕೆಲವರು ಇವರನ್ನು ಸಂಪರ್ಕಿಸಿದ್ದರೆ ಎಂದು ಮಾಹಿತಿ ಸಂಗ್ರಹಣೆ ಮಾಡಲಿದೆ. [ಗೊತ್ತೇ... ಸಿಮಿ ಉಗ್ರವಾದ ತಳೆದಿದ್ದೇ ಕರ್ನಾಟಕದಲ್ಲಿ..!]
ಈ ಮೂವರು ಉಗ್ರರ ವಿರುದ್ಧ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಕರೀಂ ನಗರದಲ್ಲಿ ದರೋಡೆ ಮಾಡಿರುವ ಪ್ರಕರಣಗಳಿವೆ. ಬಿಜನೂರು ಮತ್ತು ಚೆನ್ನೈನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಆರೋಪಗಳಿವೆ.