ಕರ್ನಾಟಕ ಸರ್ಕಾರ: ಎಸ್ಸಿ, ಎಸ್ಟಿ ಆಯುಷ್ಮಾನ್ ಫಲಾನುಭವಿಗಳಿಗೆ ಕೊಡುಗೆ
ಬೆಂಗಳೂರು, ಸೆಪ್ಟೆಂಬರ್ 8: 'ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ'ಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚ ಭರಿಸಲು ರಾಜ್ಯ ಸರ್ಕಾರ ಕ್ರಮವಹಿಸಿದೆ.
ಗುರುವಾರ ಈ ಕುರಿತು ಮಾತನಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಆಯುಷ್ಮಾನ್ ಯೋಜನೆಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ. ಎಸ್ಸಿ,ಎಸ್ಟಿ ಫಲಾನುಭವಿಗಳಿಗೆ ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ವಹಿಸಿದ್ದು, ಈ ಮೂಲಕ ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ವರ್ಗಕ್ಕೆ ಕೊಡುಗೆ ನೀಡಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್
ಇದರೊಂದಿಗೆ ಹೆಚ್ಚು ಚಿಕಿತ್ಸಾ ವೆಚ್ಚ ತಗುಲುವ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ. ಅಂದರೆ ಸರ್ಕಾರವೇ ಅದರ ವೆಚ್ಚದ ಭರಿಸುವ ಮೂಲಕ ಬಡ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿದೆ ಎಂದರು.
ಸುವರ್ಣ
ಆರೋಗ್ಯ
ಸುರಕ್ಷಾ
ಟ್ರಸ್ಟ್ನಿಂದ
ಪ್ರಸ್ತಾವನೆ
ಸಲ್ಲಿಕೆ
ಆಯುಷ್ಮಾನ್
ಭಾರತ್-ಆರೋಗ್ಯ
ಕರ್ನಾಟಕ
ಯೋಜನೆಯಡಿ
ಈಗಾಗಲೇ
ವಿವಿಧ
ಕಾಯಿಲೆಗಳಿಗೆ
ಸುವರ್ಣ
ಆರೋಗ್ಯ
ಸುರಕ್ಷಾ
ಟ್ರಸ್ಟ್ನಿಂದ
ಚಿಕಿತ್ಸಾ
ವೆಚ್ಚ
ಭರಿಸಲಾಗುತ್ತಿದೆ.
ಆದರೆ
ಕೆಲ
ವಿರಳ
ಕಾಯಿಲೆಗಳನ್ನು
ಈ
ಯೋಜನೆಯಡಿ
ಸೇರಿಸಲಾಗಿರಲಿಲ್ಲ.
ಅಲ್ಲದೆ
ಇಂತಹ
ರೋಗಗಳಿಗೆ
ಸರ್ಕಾರಿ
ಆಸ್ಪತ್ರೆಗಳಲ್ಲಿ
ಚಿಕಿತ್ಸೆಯ
ಸೌಲಭ್ಯಗಳು
ಇರುವುದಿಲ್ಲ.
ಇಂತಹ
ಸಂದರ್ಭದಲ್ಲಿ
ಖಾಸಗಿ
ಆಸ್ಪತ್ರೆಗಳಲ್ಲಿ
ಚಿಕಿತ್ಸೆ
ನೀಡಿ
ಆ
ವೆಚ್ಚವನ್ನು
ಭರಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಳು ಹಾಗೂ ವೆಚ್ಚದ ಪಟ್ಟಿಯನ್ನು ಸಿದ್ಧಪಡಿಸಿದ್ದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ. ಇದರ ಜೊತೆಗೆ, ಹೆಚ್ಚು ವೆಚ್ಚ ತಗುಲುವ ಕಾಯಿಲೆಗಳ ಚಿಕಿತ್ಸಾ ವಿಧಾನ ಗುರುತಿಸಿ, ಅವುಗಳಿಗೂ ಎಷ್ಟು ತಗಲುತ್ತದೆ ಎಂಬ ವೆಚ್ಚ ನಿಗದಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಅವರು ವಿವರಿಸಿದರು.
ಕೋಟ್ಯಂತರ
ಹಣ
ಬಿಡುಗಡೆ
ಇದಕ್ಕಾಗಿ
ಗಿರಿಜನ
ಉಪಯೋಜನೆಯಡಿ
7.39
ಕೋಟಿ
ರೂ.,
ಪರಿಶಿಷ್ಟ
ಜಾತಿ
ಉಪಯೋಜನೆಯಡಿ
15.79
ಕೋಟಿ
ಸೇರಿ
ಒಟ್ಟು
23.18
ಕೋಟಿ
ರೂ.
ಅನುದಾನವನ್ನು
ಪುನರ್
ವಿನಿಯೋಗದ
ಮೂಲಕ
ಬಿಡುಗಡೆ
ಮಾಡಿ
ಆದೇಶಿಸಲಾಗಿದೆ.
ಪಿಇಟಿ
ಸ್ಕ್ಯಾನ್ಗೆ
10,000
ರೂ.,
ಅಸ್ತಿ
ಮಜ್ಜೆ
ಕಸಿಗೆ
ಎರಡು
ವಿಧಾನಗಳಿಗೆ
ಕ್ರಮವಾಗಿ
7ಲಕ್ಷ
ರೂ.
ಹಾಗೂ
21
ಲಕ್ಷ
ರೂ.,
ರೋಬೋಟಿಕ್
ಸರ್ಜರಿಗೆ
1.50
ಲಕ್ಷ
ರೂ.
ಸೇರಿದಂತೆ
ವಿವಿಧ
ಚಿಕಿತ್ಸೆಗಳಿಗೆ
ವೆಚ್ಚ
ನಿಗದಿ
ಮಾಡಲಾಗಿದೆ.
ಕೇಂದ್ರ ಸರ್ಕಾರದ ಬಡ ಜನರ ಆರೋಗ್ಯ ರಕ್ಷಣೆಗಾಗಿ ಜಾರಿ ಮಾಡಿದ ಆಯುಷ್ಮಾನ್ ಯೋಜನೆಯನ್ನು ಕರ್ನಾಟಕ ವಿಸ್ತರಿಸುವ ಕೆಲಸ ಮಾಡಿದೆ. ಇದರಿಂದ ಬಡ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಹೇಳಿದರು.