ದೀಪಾವಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ: ಹಸಿರು ಪಟಾಕಿಗೆ ಮಾತ್ರ ಅವಕಾಶ
ಬೆಂಗಳೂರು ಅಕ್ಟೋಬರ್ 30: ದೀಪದಿಂದ ದೀಪ ಹಚ್ಚೋ ದೀಪಾವಳಿ ಹಬ್ಬ ಬಂದೇ ಬಿಡ್ತು. ಕೊರೊನಾ ಕಾರಣದಿಂದ ಸುಮಾರು ಎರಡು ವರ್ಷವೂ ದೀಪಾವಳಿ ಹಬ್ಬವನ್ನು ಬಹುತೇಕ ಜನರು ಆಚರಿಸಲಾಗಲಿಲ್ಲ. ಆದರೀಗ ಅಧಿಕ ಜನ ದೀಪಾವಳಿ ಹಬ್ಬವನ್ನು ಆಚರಿಸಲು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಈ ಬಾರಿ ದೀಪಾವಳಿ ಹಬ್ಬ ಅತ್ಯಂತ ಸಡಗರ ಸಂಭ್ರಮದಿಂದ ಕೂಡಿರುವುದರಲ್ಲಿ ಯಾವ ಅನುಮಾನವೇ ಇಲ್ಲ.
ಆದರೆ ಹಬ್ಬದ ಆಚರಣೆಯಲ್ಲಿ ಮೈಮರೆತು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕೊರೊನಾ ಮಾಹಾಮಾರಿ ರಾಜ್ಯದಲ್ಲಿ ಸೃಷ್ಟಿಸಿದ ಅವಾಂತರಗಳಿಂದ ಜನ ಈಗಿನ್ನು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಒಂದು ದಿನ ಹಬ್ಬದ ಸಡಗರದಲ್ಲಿ ಮೈಮರೆತು ಅಪತ್ತಿಗೆ ಸಿಲುಕಿಕೊಳ್ಳದಿರಲು ರಾಜ್ಯ ಸರ್ಕಾರ ದೀಪಾವಳಿ ಹಬ್ಬಕ್ಕೂ ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.
ದೀಪಾವಳಿ ಅಂದರೆ ಪಟಾಕಿ ಸಿಡಿಸಿ ಆಚರಿಸುವುದು ಎಲ್ಲೆಡೆ ರೂಢಿಯಲ್ಲಿದೆ. ಆದರೆ ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಾತ್ರವಲ್ಲದೇ ಮಾರಾಟಗಾರರೂ ಸಹ ಬೇರೆ ಯಾವ ಪಟಾಕಿಯನ್ನೂ ಮಾರುವಂತಿಲ್ಲ ಎಂದು ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ. ನವೆಂಬರ್ 1 ರಿಂದ 10 ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ಇದೆ. ಪರವಾನಗಿ ಪಡೆದವರು ಮಾತ್ರ ಪಟಾಕಿ ಮಾರಾಟ ಮಾಡಬೇಕು ಎಂದು ರಾಜ್ಯ ಸರ್ಕಾರದಿಂದ ದೀಪಾವಳಿಗೆ ಗೈಡ್ಲೈನ್ಸ್ ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿ ಬೇರೆ ಪಟಾಕಿ ಮಾರಾಟ ಮಾಡುವುದಕ್ಕೆ ಅಥವಾ ಬೇರೆ ಪಟಾಕಿ ಹಚ್ಚಲು ಅವಕಾಶ ಇಲ್ಲ. ಹಸಿರು ಪಟಾಕಿ ಹೊರತುಪಡಿಸಿ ಉಳಿದ ಪಟಾಕಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಬೇರೆ ಪಟಾಕಿಗಳನ್ನು ಹಚ್ಚಲೂ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲದೆ, ನವೆಂಬರ್ ಒಂದರಿಂದ ಹತ್ತನೇ ತಾರೀಕಿನವರೆಗೆ ಮಾತ್ರ ಹಸಿರು ಪಟಾಕಿ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಅಧಿಕೃತ ಪರವಾನಗಿ ಪಡೆದವರಿಗೆ ಮಾತ್ರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ದೀಪಾವಳಿ ಹಬ್ಬಕ್ಕೆ ಮನೆಮಂದಿಯಲ್ಲ ಸೇರಿ ಸಂಬಂಧಿಗಳೊಂದಿಗೆ ಸ್ನೇಹಿತರೊಂದಿಗೆ ಒಗ್ಗಟ್ಟಿನಿಂದ ದೀಪ ಹಚ್ಚುತ್ತಾರೆ. ಆದರೆ ಕೊರೊನಾ ಹಾವಳಿ ಮರುಕಳಿಸುವ ಆತಂಕ ಇರುವುದರಿಂದ ಇದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿದ್ದು ಹೆಚ್ಚಿನ ಜನ ಸೇರದಿರಲು ಮನವಿ ಮಾಡಿಕೊಂಡಿದೆ. ನವೆಂಬರ್ 1 ರಿಂದ ನವೆಂಬರ್ 10 ರವರೆಗೆ ಪಟಾಕಿ ಮಾರಾಟಕ್ಕೆ ಅನುಮತಿ ಪಡೆದ ವಿತರಕರು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಅಂಗಡಿಗಳನ್ನು ಸ್ಥಾಪಿಸಲು ಅನುಮತಿಸಲಾಗುವುದು ಎಂದು ಮಾರ್ಗಸೂಚಿಗಳು ನಿರ್ದಿಷ್ಟಪಡಿಸುತ್ತವೆ.
ಕನ್ನಡ ರಾಜ್ಯೋತ್ಸವ ಆಚರಣೆಗೆ 500 ಜನರಿಗೆ ಮಾತ್ರ ಅವಕಾಶ ನೀಡಿದೆ. ಕನ್ನಡ ರಾಜ್ಯೋತ್ಸವ, ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕನ್ನಡ ರಾಜ್ಯೋತ್ಸವದ ವೇಳೆ 500 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ದೈಹಿಕ ಅಂತರವಿಲ್ಲದ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗುವುದು.
ಸಂಬಂಧಪಟ್ಟ
ಇಲಾಖೆಗಳಿಂದ
ಅನುಮತಿ
ಕಡ್ಡಾಯ
ಎಂದು
ಕನ್ನಡ
ರಾಜ್ಯೋತ್ಸವ
ಆಚರಣೆಯ
ಬಗ್ಗೆ
ಮಾರ್ಗಸೂಚಿ
ಬಿಡುಗಡೆ
ಮಾಡಲಾಗಿದೆ.
ರಾಜ್ಯಾದ್ಯಂತ
ಕನ್ನಡ
ರಾಜ್ಯೋತ್ಸವ
ಆಚರಣೆಗೆ
500
ಜನರಿಗೆ
ಮಾತ್ರ
ಅವಕಾಶ
ಇರುತ್ತದೆ.
ಇದು
ಬೆಂಗಳೂರಿಗೆ
ಮಾತ್ರ
ಸೀಮಿತವಲ್ಲ.
ಸಾಮಾಜಿಕ
ಅಂತರವಿಲ್ಲದೇ
ನಡೆಸುವ
ಕಾರ್ಯಕ್ರಮಗಳಿಗೆ
ನಿಷೇಧ
ಹೇರಲಾಗುತ್ತದೆ
ಎಂದು
ತಿಳಿಸಲಾಗಿದೆ.
ಪ್ರಸ್ತುತ
ಇರುವ
ಕೊರೊನಾವೈರಸ್
ಪರಿಸ್ಥಿತಿ
ಮತ್ತು
ದೇಶದ
ವಿವಿಧ
ಭಾಗಗಳಲ್ಲಿ
ಹೆಚ್ಚುತ್ತಿರುವ
ಮಾಲಿನ್ಯ
ಮಟ್ಟಗಳಿಂದಾಗಿ
ಈ
ಹಬ್ಬದಂದು
ರಾಜಿ
ಮಾಡಿಕೊಳ್ಳಬೇಕಾಗಿದೆ.
ಹೀಗಾಗಿ
ದೀಪಾವಳಿ
ಆಚರಿಸುವ
ವೇಳೆ
ಜನರ
ಮಧ್ಯ
ಇರುವಾಗ
ಮಾಸ್ಕ್
ಹಾಕಿಕೊಳ್ಳುವುದು,
ಆಗಾಗ
ಹ್ಯಾಂಡ್
ಸ್ಯಾನಿಟೈಸರ್
ಮಾಡಿಕೊಳ್ಳುವುದು,
ಸಾಮಾಜಿಕ
ಅಂತರ
ಕಾಯ್ದುಕೊಳ್ಳುವಂತೆ
ಮನವಿ
ಮಾಡಲಾಗಿದೆ.