ಸಂಪುಟ ಸೇರಿದ 7 ಸಚಿವರಿಗೆ ವಿಧಾನಸೌಧದಲ್ಲಿ ಯಾವ ಕೊಠಡಿ ಸಿಕ್ತು?
ರಾಜಭವನದಲ್ಲಿ ಬುಧವಾರದಂದು 7 ಮಂದಿ ಶಾಸಕರಿಗೆ ರಾಜ್ಯಪಾಲ ವಜುಭಾಯಿವಾಲ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಏಳು ಮಂದಿ ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಸೇರಿದ್ದಾರೆ.
ಕರ್ನಾಟಕ ಸರ್ಕಾರದ ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಬಹುತೇಕ ಎಲ್ಲಾ ಸಚಿವರುಗಳು ಸಾಂಪ್ರದಾಯಿಕ ಪೂಜೆ ಪುನಸ್ಕಾರ ನಡೆಸಿ ನಂತರ ತಮ್ಮ ಕುರ್ಚಿ ಏರಲಿದ್ದಾರೆ.
ಸಚಿವರು-ಕೊಠಡಿಗಳ ಸಂಖ್ಯೆ:
* ಉಮೇಶ್ ಕತ್ತಿ- 329/329 ಎ ಕೊಠಡಿ
* ಅರವಿಂದ ಲಿಂಬಾವಳಿ-344/344 ಎ ಕೊಠಡಿ
* ಎಂಟಿಬಿ ನಾಗರಾಜು- 330/ 330 ಎ
* ಮುರುಗೇಶ್ ನಿರಾಣಿ- 307/307 ಎ
* ಸಿ.ಪಿ ಯೋಗೇಶ್ವರ್- 336/336 ಎ
* ಎಸ್.ಅಂಗಾರ- 252/253 ಎ
Recommended Video
* ಆರ್.ಶಂಕರ್- 305/305 ಎ ಕೊಠಡಿ ಹಂಚಿಕೆಯಾಗಿದೆ.
ಸಚಿವರ ಮುಂದೆ ಕುಂದು ಕೊರತೆ ಹೇಳಿಕೊಂಡು ಹೋಗುವ ಸಾರ್ವಜನಿಕರು ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಕಾಲಿಡುವ ಮುನ್ನ ಸಚಿವರ ಕಚೇರಿ ಕಟ್ಟಡದ ಯಾವ ಕೊಠಡಿಯಲ್ಲಿದೆ ಎಂದು ತಿಳಿದರೆ ಉತ್ತಮ ಎಲ್ಲರಿಗೂ ವಿಧಾನಸೌಧದಲ್ಲೇ ಕೊಠಡಿ ಹಂಚಿಕೆಯಾಗಿರುವುದು ವಿಶೇಷ. ಈ ಹಿಂದೆ ಕೆಲವರಿಗೆ ವಿಕಾಸಸೌಧದಲ್ಲಿ ಕೊಠಡಿ ನೀಡಲಾಗಿತ್ತು. ಕ್ಯಾಬಿನೆಟ್ ಸಚಿವರುಗಳ ಖಾತೆ ಹಂಚಿಕೆ ಕ್ಯಾತೆ ಹಾಗೂ ಜಿಲ್ಲಾ ಉಸ್ತುವಾರಿ ಗೊಂದಲ ಇನ್ನು ಮುಂದುವರೆಯಲಿದೆ.