ನವವೃಂದಾವನ ವಿವಾದ: ಸತ್ಯಾತ್ಮತೀರ್ಥ ಸ್ವಾಮೀಜಿಗೆ ಪೊಲೀಸ್ ರಕ್ಷಣೆ
ಕೊಪ್ಪಳ, ಡಿಸೆಂಬರ್, 11: ನವವೃಂದಾವನ ಜಾಗ ಮತ್ತು ಪೂಜೆ ಗೊಂದಲ ಹುಟ್ಟುಹಾಕಿರುವುದರ ಮಧ್ಯೆಯೇ ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಅವರಿಗೆ ಪೊಲೀಸ್ ರಕ್ಷಣೆ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ನವವೃಂದಾವನ ಜಾಗ ಉತ್ತರಾದಿಮಠಕ್ಕೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದ್ದರೂ ಪೂಜೆಗೆ ಸಂಬಂಧಿಸಿದ ಗೊಂದಲಗಳು ಬಗೆಹರಿದಿಲ್ಲ. ಅಲ್ಲದೆ ನವವೃಂದಾವನಕ್ಕೆ ಪೊಲೀಸ್ ಭದ್ರತೆಯನ್ನು ನೀಡಲು ಸೂಚಿಸಲಾಗಿದ್ದು ಅತಿಕ್ರಮಣ ಅಥವಾ ಇನ್ನಿತರ ಯಾವುದೇ ಬಗೆಯ ಕಾನೂನು ವಿರೋಧಿ ಕ್ರಮಗಳಿಗೆ ಅವಕಾಶವಾಗದಂತೆ ತಡೆಯಲು ನ್ಯಾಯಾಲಯ ಆದೇಶ ನೀಡಿದೆ.[ನವವೃಂದಾವನ ಒಂದು ಮಠದ ಆಸ್ತಿಯಾಗಲು ಸಾಧ್ಯವೇ?]
ಗಂಗಾವತಿಯ ಹೆಚ್ಚುವರಿ ನ್ಯಾಯಾಧೀಶರು ಡಿಸೆಂಬರ್ 10 ರಂದು ಆದೇಶ ನೀಡಿದ್ದಾರೆ. ಅಲ್ಲದೇ ಡಿವೈಎಸ್ ಪಿ ಅವರಿಗೆ ಸಕಲ ರಕ್ಷಣಾ ಕ್ರಮ ತೆಗೆದುಕೊಳ್ಳುವಂತೆ ಸ್ಪಷ್ಟ ಆದೇಶ ನೀಡಲಾಗಿದೆ.[ಪತ್ರ : ಮನನೊಂದ ಮಾಧ್ವನ ಮನದಾಳದ ಮಾತುಗಳು]
ನವಬೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಆರಾಧನೆ ಸಮಯದಲ್ಲಿ ರಕ್ಷಣೆ ನೀಡಬೇಕು ಎಂದು ಕೋರಿ ಉತ್ತರಾದಿಮಠದವರು ಗಂಗಾವತಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೋರ್ಟ್ ಮಾನ್ಯ ಮಾಡಿದೆ.