ನ್ಯಾಷನಲ್ ಹೆರಾಲ್ಡ್ ಕೇಸ್ : ಬಿಜೆಪಿ ವಿರುದ್ಧ ಬೀದಿಗಿಳಿದ ಕಾಂಗ್ರೆಸ್
ಮೈಸೂರು, ಡಿಸೆಂಬರ್ 19 : ನ್ಯಾಷನಲ್ ಹೆರಾಲ್ಡ್ ಆಸ್ತಿಯ ಅಕ್ರಮ ಪರಭಾರೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಕೋರ್ಟ್ಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದೆ.
ಮೈಸೂರು,
ಮಂಗಳೂರು,
ಬೆಂಗಳೂರು
ಮುಂತಾದ
ಕಡೆ
ಕಾಂಗ್ರೆಸ್
ನಾಯಕರು
ಪ್ರತಿಭಟನೆ
ನಡೆಸುತ್ತಿದ್ದು,
ಕೇಂದ್ರದ
ಬಿಜೆಪಿ
ಸರ್ಕಾರದ
ವಿರುದ್ಧ
ಘೋಷಣೆಗಳನ್ನು
ಕೂಗುತ್ತಿದ್ದಾರೆ.
ಈ
ಪ್ರಕರಣದಲ್ಲಿ
ಬಿಜೆಪಿ
ರಾಜಕೀಯ
ಮಾಡುತ್ತಿದೆ
ಎಂದು
ಕಾಂಗ್ರೆಸ್
ಆರೋಪಿಸುತ್ತಿದೆ.
[ಹೆರಾಲ್ಡ್
:
ಒಂದಿಷ್ಟು
ತಮಾಷೆಯ,
ಕೆಣಕುವ
ಟ್ವೀಟುಗಳು]
ಮೈಸೂರಿನಲ್ಲಿ ನಡೆದ ಪ್ರತಿಭಟನೆ ವೇಳೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆಲವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ನೆಹರೂ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಕಾನೂನು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿತರು ದೂರಿದರು. [ಸೋನಿಯಾ, ರಾಹುಲ್ ಗಾಂಧಿಗೆ ಜೈಲೋ..ಜಾಮೀನೋ?]
ಮಂಗಳೂರು
:
ದಕ್ಷಿಣ
ಕನ್ನಡ
ಜಿಲ್ಲಾ
ಕಾಂಗ್ರೆಸ್
ಮಂಗಳೂರಿನಲ್ಲಿ
ಬಿಜೆಪಿ
ಸರ್ಕಾರದ
ವಿರುದ್ಧ
ಶನಿವಾರ
ಪ್ರತಿಭಟನೆ
ಹಮ್ಮಿಕೊಂಡಿತ್ತು.
ಪ್ರತಿಭಟನೆ
ಉದ್ದೇಶಿಸಿ
ಮಾತನಾಡಿದ
ವಿಧಾನಪರಿಷತ್
ಸದಸ್ಯ
ಐವಾನ್
ಡಿಸೋಜಾ
ಅವರು,
'ವಿಪಕ್ಷಗಳ
ದ್ವೇಷದ
ರಾಜಕಾರಣಕ್ಕೆ
ನಾವು
ಹೆದರುವುದಿಲ್ಲ.
ನ್ಯಾಯಾಂಗ
ವ್ಯವಸ್ಥೆಯಲ್ಲಿ
ನಮಗೆ
ನಂಬಿಕೆ
ಇದ್ದು,
ಸತ್ಯಕ್ಕಾಗಿ
ನಾವು
ಹೋರಾಟ
ನಡೆಸುತ್ತಿದ್ದೇವೆ.
'ಸುಬ್ರಮಣ್ಯ
ಸ್ವಾಮಿ
ಬಿಜೆಪಿಯ
ಸಾಕು
ನಾಯಿ'
ಎಂದು
ಟೀಕಿಸಿದರು.
ಅಂದಹಾಗೆ ನ್ಯಾಷನಲ್ ಹೆರಾಲ್ಡ್ ಆಸ್ತಿಯ ಅಕ್ರಮ ಪರಭಾರೆ ಬಗ್ಗೆ ದೂರು ನೀಡಿರುವುದು ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ. ಆದ್ದರಿಂದ, ಈ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಮರಕ್ಕೂ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಪ್ರಕರಣದ ವಿಚಾರಣೆಗೆ ಸೋನಿಯಾ ಮತ್ತು ರಾಹುಲ್ ಕೋರ್ಟ್ಗೆ ಹಾಜರಾಗುತ್ತಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ವಿಚಾರಣೆ ಆರಂಭವಾಗಲಿದೆ.