ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ನಾಡಿನ ಶಕ್ತಿ ಕ್ಷೇತ್ರ ಯಕ್ಷಿ ಚೌಡೇಶ್ವರಿ ಸನ್ನಿಧಾನದಲ್ಲಿ ಬಂದ ಸೂಚನೆ

|
Google Oneindia Kannada News

ಸಂಕಟ ಬಂದಾಗ ವೆಂಕಟರಮಣ ಎಂದು ಜನ ಕಷ್ಟದಲ್ಲಿದ್ದಾಗ ದೇವರು ಮೊರೆ ಹೋಗುವುದು ಸಾಮಾನ್ಯ. ಹಾಗೇ, ದೇವರಿಗೆ ವಿಶೇಷ ಪೂಜೆ, ಹೋಮ ಹವನಾದಿಗಳೂ ಇಂತಹ ಕಾಲದಲ್ಲಿ ಹೆಚ್ಚಾಗಿ ನಡೆಯುವುದನ್ನು ನೋಡಿದ್ದೇವೆ.

ಕೊರೊನಾ ವಿಶ್ವದೆಲ್ಲಡೆ ಮರಣ ಮೃದಂಗ ಭಾರಿಸುತ್ತಿರುವ ಈ ಸಮಯದಲ್ಲಿ ಐತಿಹಾಸಿಕ ಮುರುಡೇಶ್ವರ ದೇವಾಲಾಯದಲ್ಲೂ ಹೂವನ್ನು ಇಟ್ಟು ದೇವರಿಗೆ ಪೂಜೆಯನ್ನು ಸಲ್ಲಿಸಲಾಗಿತ್ತು.

ಕೊರೊನಾ ನಿಯಂತ್ರಿಸಲು ಕನ್ನಡಿಗ ಐಎಎಸ್ ಅಧಿಕಾರಿಯೇ ಸರಿ ಎಂದ ಯೋಗಿ ಆದಿತ್ಯನಾಥ್ಕೊರೊನಾ ನಿಯಂತ್ರಿಸಲು ಕನ್ನಡಿಗ ಐಎಎಸ್ ಅಧಿಕಾರಿಯೇ ಸರಿ ಎಂದ ಯೋಗಿ ಆದಿತ್ಯನಾಥ್

ಇನ್ನು, ಹಲವು ಜ್ಯೋತಿಷಿಗಳು, ವಾಸ್ತು ಪಂಡಿತರೂ, ಕೊರೊನಾ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಕೆಲವರು ಏಪ್ರಿಲ್ ಮಧ್ಯಭಾಗದಲ್ಲಿ ಈ ವೈರಾಣು ತೊಲಗುತ್ತದೆ ಎಂದು ಹೇಳಿದ್ದರೆ, ಇನ್ನು ಕೆಲವರು ಮೇ ಅಂತ್ಯದಲ್ಲಿ ಈ ಸಂಕಷ್ಟ ದೂರವಾಗಲಿದೆ ಎಂದು ಹೇಳಿದ್ದಾರೆ.

ಕೊರೊನಾ: ಇದುವರೆಗಿನ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತೇ?ಕೊರೊನಾ: ಇದುವರೆಗಿನ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತೇ?

ಮುರುಡೇಶ್ವರ ದೇವಾಲಯದಲ್ಲಿ ಅರ್ಚಕರು ಹೂವನ್ನು ಇಟ್ಟು ಪ್ರಾರ್ಥಿಸಿದಂತೆ, ಶ್ರೀ ಕ್ಷೇತ್ರ ನೀಲಗೋಡಿನ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲೂ, ಕೊರೊನಾ ಬಗ್ಗೆ ಪ್ರಾರ್ಥನೆ ಸಲ್ಲಿಸಲಾಗಿತ್ತು.

ಬಳ್ಕೂರು ಗ್ರಾಮದ ಶ್ರೀ ಕ್ಷೇತ್ರ ನೀಲಗೋಡಿನ ಯಕ್ಷಿ ಚೌಡೇಶ್ವರಿ ದೇವಸ್ಥಾನ

ಬಳ್ಕೂರು ಗ್ರಾಮದ ಶ್ರೀ ಕ್ಷೇತ್ರ ನೀಲಗೋಡಿನ ಯಕ್ಷಿ ಚೌಡೇಶ್ವರಿ ದೇವಸ್ಥಾನ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಳ್ಕೂರು ಗ್ರಾಮದ ಶ್ರೀ ಕ್ಷೇತ್ರ ನೀಲಗೋಡಿನ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶ್ವದಾದ್ಯಂತ ಹರಡಿರುವ ಕೊರೋನಾ ವೈರಸ್ ನಿರ್ಮೂಲನೆ ಬಗ್ಗೆ, ದೇವಿಯ ಎರಡೂ ಬದಿ ಹೂವು (ಪಿಂಗಾರ) ಇಟ್ಟು, ಪ್ರಾರ್ಥನೆ ಸಲ್ಲಿಸಲಾಗಿತ್ತು.

ಮಹಾಮಾರಿ ಕೊರೊನಾ

ಮಹಾಮಾರಿ ಕೊರೊನಾ

ಕ್ಷೇತ್ರದ ಪ್ರಧಾನ ಅರ್ಚಕರು, "ಇಡೀ ವಿಶ್ವವೇ ಮಹಾಮಾರಿ ಕೊರೊನಾದಿಂದ ತತ್ತರಿಸಿ ಹೋಗಿದೆ. ಆದಿಶಕ್ತಿ, ಪರಮಶಕ್ತಿಯಾದ ನೀನು, ನಿನ್ನ ಮಕ್ಕಳನ್ನು ಕಾಪಾಡಬೇಕು. ಮಹಾತಾಯಿಯಾದ ನೀನು ಎಲ್ಲರನ್ನೂ ಕಾಪಾಡುತ್ತೇನೆ ಎನ್ನುವ ಅಭಯವನ್ನು ನೀಡಬೇಕು" ಎಂದು ಪ್ರಾರ್ಥಿಸಿದ್ದಾರೆ.

ನಿನ್ನ ರಕ್ಷಣೆಯಿದೆ ಎನ್ನುವ ಸೂಚನೆ ನಮಗೆ ಬೇಕಿದೆ

ನಿನ್ನ ರಕ್ಷಣೆಯಿದೆ ಎನ್ನುವ ಸೂಚನೆ ನಮಗೆ ಬೇಕಿದೆ

ಭಕ್ತರು ಸಂಪೂರ್ಣವಾಗಿ ನಿನ್ನನ್ನೇ ನಂಬಿದ್ದಾರೆ. ನಿನ್ನ ರಕ್ಷಣೆಯಿದೆ ಎನ್ನುವ ಸೂಚನೆ ನಮಗೆ ಬೇಕಿದೆ. ನಾವೆಲ್ಲರೂ, ನಮ್ಮ ಶಕ್ತ್ಯಾನುಸಾರ ನಿನ್ನ ಸೇವೆಯನ್ನು ನಂಬಿಕೊಂಡು ಬಂದಿದ್ದೇವೆ. ಕೊರೊನಾ ಮಾರಿಯನ್ನು ನೀನು ದೂರ ಮಾಡಬೇಕು" ಎಂದು ಅರ್ಚಕರು ಪ್ರಾರ್ಥಿಸಿದಾಗ, ದೇವಿಯ ಬಲಭಾಗದಿಂದ ಹೂವು ಬೀಳುವ ಮೂಲಕ ಶುಭ ಸೂಚನೆ ಸಿಕ್ಕಿದೆ.

ಮುರುಡೇಶ್ವರ ದೇವಾಲಯ

ಮುರುಡೇಶ್ವರ ದೇವಾಲಯ

ಕರಾವಳಿ ಭಾಗದ ದೇವಾಲಯಗಳಲ್ಲಿ ದೇವರ ಮೇಲೆ ಹೂವು ಇಟ್ಟು, ಪ್ರಾರ್ಥನೆ ಸಲ್ಲಿಸುವ ಪದ್ದತಿ ಹಿಂದಿನಿಂದಲೂ ಇದೆ. ಇದೇ ರೀತಿ, ಕೊರೊನಾದಿಂದ ದೇಶವನ್ನು ಕಾಪಾಡು ಎನ್ನುವ ಪ್ರಶ್ನೆಯನ್ನು ಮುರುಡೇಶ್ವರ ದೇವಾಲಯದಲ್ಲೂ ಕೇಳಲಾಗಿತ್ತು. "ಇಡೀ ವಿಶ್ವ ಕೊರೊನಾ ಎನ್ನುವ ಮಹಾಮಾರಿಯಿಂದ ಬಳಲುತ್ತಿದೆ. ಇದರಿಂದ ವಿಶ್ವವನ್ನು ರಕ್ಷಿಸು" ಎಂದು ಅರ್ಚಕರು ಪ್ರಾರ್ಥಿಸಿದಾಗ, ಶಿವಲಿಂಗದ ಬಲಭಾಗದಿಂದ ಹೂವು ಬಿದ್ದಿತ್ತು.

English summary
Nation Should Come Out From Coronavirus Problem: Prayer In Balkooru Chowdeshwari Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X