ಮೇ 29ರಂದು ದಾವಣಗೆರೆಯಲ್ಲಿ ಮೋದಿ ಸಮಾವೇಶ
ದಾವಣಗೆರೆ, ಮೇ 23 : ಬಿಜೆಪಿ ದೇಶಾದ್ಯಂತ ಜನಪರ್ವ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 29ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಕೇಂದ್ರ
ಬೃಹತ್
ಕೈಗಾರಿಕೆ
ಮತ್ತು
ಸಾರ್ವಜನಿಕ
ಉದ್ದಿಮೆ
ರಾಜ್ಯ
ಸಚಿವ
ಮತ್ತು
ದಾವಣಗೆರೆ
ಸಂಸದ
ಜಿ.ಎಂ.ಸಿದ್ದೇಶ್ವರ
ಅವರು
ಈ
ಕುರಿತು
ಮಾಹಿತಿ
ನೀಡಿದ್ದು,
'ಮೇ
29ರಂದು
ಸಮಾವೇಶ
ನಡೆಯಲಿದೆ.
ಬಿಪಿಎಲ್
ಕುಟುಂಬಗಳಿಗೆ
ಉಚಿತ
ಎಲ್ಪಿಜಿ
ಸಂಪರ್ಕ
ಕಲ್ಪಿಸುವ
ಪ್ರಧಾನಮಂತ್ರಿ
ಉಜ್ವಲ
ಯೋಜನೆಗೂ
ಮೋದಿ
ಚಾಲನೆ
ನೀಡಲಿದ್ದಾರೆ'
ಎಂದು
ಹೇಳಿದ್ದಾರೆ.
[ಮೋದಿ
ಕನಸುಗಳು:
ಸ್ವಚ್ಛಭಾರತದಿಂದ
ಡಿಜಿಟಲ್
ಇಂಡಿಯಾ
ತನಕ]
ಮೇ 26ರಂದು ಕೇಂದ್ರ ಸರ್ಕಾರ ಎರಡು ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಘಟಕ ದೇಶಾದ್ಯಂತ ಜನಪರ್ವ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರ ಅಂಗವಾಗಿ 63 ಸಚಿವರು ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲಿದ್ದಾರೆ. [ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?]
ಈ ಜನಪರ್ವ ಕಲ್ಯಾಣ ಕಾರ್ಯಕ್ರಮದ ಅಂಗವಾಗಿಯೇ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸುಮಾರು 1 ಲಕ್ಷ ಜನರು ಕಾರ್ಯಕ್ರಮದಲ್ಲಿ ಪಾಳ್ಗೊಳ್ಳುವ ಸಾಧ್ಯತೆ ಇದ್ದು, ಪ್ರಧಾನಿ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ : ಅಡುಗೆ ಅನಿಲದ ಸಬ್ಸಿಡಿಯನ್ನು ಸ್ವಯಂ ಪ್ರೇರಿತವಾಗಿ ನಿರಾಕರಿಸಿ ಎಂದು ಪ್ರಧಾನಿ ಮೋದಿ ಕಳೆದ ವರ್ಷ ಕರೆ ನೀಡಿದ್ದರು. 1.13 ಕೋಟಿ ಜನರು ಸಬ್ಸಿಡಿ ತ್ಯಜಿಸಿದ್ದು ಇದರಿಂದ 5 ಸಾವಿರ ಕೋಟಿ ಹಣ ಉಳಿತಾಯವಾಗಿದೆ.
ಆ ಹಣಕ್ಕೆ 3 ಸಾವಿರ ಕೋಟಿ ಹಣ ಸೇರಿಸಿ 5 ಕೋಟಿ ಬಡವರಿಗೆ ಉಚಿತ ಎಲ್ಪಿಜಿ ಸಂಪರ್ಕ ನೀಡುವ ಯೋಜನೆಯೇ ಪ್ರಧಾನಮಂತ್ರಿ ಉಜ್ವಲ ಯೋಜನೆ. ಮೇ 1ರಂದು ಉತ್ತರ ಪ್ರದೇಶದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ದಾವಣಗೆರೆಯಲ್ಲೂ ಅದೇ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.