ಕುದುರೆಯ ವೇಗ ಮೀರಿಸಿದ ಮುಧೋಳದ ಎತ್ತುಗಳು
ಮುಧೋಳ,ಅ. 31 : ಅವುಗಳ ಓಟ ಯಾವ ಪಳಗಿದ ಕುದುರೆಗೂ ಕಡಿಮೆ ಇರಲಿಲ್ಲ. ಕತ್ತಿಗೆ ಕಟ್ಟಿದ ಘಂಟೆ ಶಬ್ದ, ಜನರ ಚಪ್ಪಾಳೆಗಳ ನಡುವೆ ಎತ್ತುಗಳು ಚಕ್ಕಡಿ ಬಂಡಿ ಹೊತ್ತು ಜೋಡಿ ಎತ್ತುಗಳು ಮುಂದೆ ನುಗ್ಗಿದವು. ಸಾವಿರಾರು ಜನ ಸಂಭ್ರಮವನ್ನು ಕಣ್ಣು ತುಂಬಿಸಿಕೊಂಡರು.
ರಾಜ್ಯಾದ್ಯಂತ ಕನ್ನಡ ಹಬ್ಬದ ಸಡಗರ ಆರಂಭವಾಗಿರುವ ಬೆನ್ನಲ್ಲೇ ಮುಧೋಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು 'ರನ್ನ ಕೆಸರಿ' ಎಂಬ ಹೆಸರಿನಲ್ಲಿ ಎತ್ತಿನ ಬಂಡಿ ಸ್ಪರ್ಧೆ ಏರ್ಪಡಿಸಿದ್ದರು.[ರಾಜ್ಯೋತ್ಸವ : ಯಾವ್ಯಾವ ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಪ್ರಶಸ್ತಿ?]
ಉತ್ತರ ಕರ್ನಾಟಕದ ವಿಶೇಷವೇ ಹಾಗೆ. ಪಳಗಿದ ಕುದುರೆಗಳಿಗಿಂತಲೂ ವೇಗವಾಗಿ ಓಡಿದ ಎತ್ತುಗಳು ಗುರಿಯತ್ತ ಸಾಗಿದ ಕ್ಷಣವೇ ಅಪರೂಪ. ದಿನಪ್ರತಿಯ ಜಂಟಾಟಗಳಿಂದ ಬೇಸತ್ತಿದ್ದ ಗ್ರಾಮೀಣ ಜನ ಸಂಭ್ರಮದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. [ಚಿತ್ರ : ಜಗದೀಶ ಜೀರಗಾಳ ]
ಸುಡುವ ಬಿರುಬಿಸಿಲು, ಓಟದ ಸ್ಪರ್ಧೆಯಿಂದ ಬಯಲಿನಿಂದ ಮೇಲೇಳುತ್ತಿದ್ದ ಧೂಳನ್ನೂ ಲೆಕ್ಕಿಸದ ಸಾವಿರಾರು ಮಂದಿ ಪ್ರೇಕ್ಷಕರು ಮರಗಿಡ, ಮನೆಗಳ ಮಹಡಿಯ ಮೇಲೆ ನಿಂತು ವೀಕ್ಷಿಸಿದರು. ಕನ್ನಡ ನೆಲದ ಕಲೆ ಸಂಸ್ಕೃತಿ ಸಾರುವ ಜಾನಪದ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದ ಪ್ರಮುಖರೆಲ್ಲ ಭಾಗವಹಿಸಿದ್ದರು.[ಮುಜರಾಯಿ ದೇವಾಲಯದಲ್ಲಿ ವಿಶೇಷ ಪೂಜೆ]