ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತವರಿಗೆ ಮರಳಿದ ಹರಪನಹಳ್ಳಿ ಶಾಸಕ ಎಂಪಿ ರವೀಂದ್ರ

By ಜಿಎಂಆರ್, ಬಳ್ಳಾರಿ
|
Google Oneindia Kannada News

Recommended Video

ತವರಿಗೆ ಮರಳಿದ ಹರಪನಹಳ್ಳಿ ಶಾಸಕ ಎಂಪಿ ರವೀಂದ್ರ | Oneindia Kannada

ಬಳ್ಳಾರಿ, ಫೆಬ್ರವರಿ 06: ದಿವಂಗತ ಎಂ.ಪಿ. ಪ್ರಕಾಶ್ ಅವರ ಏಕೈಕ ಪುತ್ರ, ಹರಪನಹಳ್ಳಿಯ ಕಾಂಗ್ರೆಸ್ ಶಾಸಕ ಎಂ.ಪಿ. ರವೀಂದ್ರ ಅವರ ಆರೋಗ್ಯ ಸುಧಾರಣೆಗೊಂಡಿದ್ದು, ಶೀಘ್ರದಲ್ಲೇ ತವರಿಗೆ ಮರಳಿದ್ದಾರೆ.

ಎಂ.ಪಿ. ರವೀಂದ್ರ ಅವರ ಆಪ್ತರ ಪ್ರಕಾರ, ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂ.ಪಿ. ರವೀಂದ್ರ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡಿದೆ. ಶೀಘ್ರದಲ್ಲೇ ಭಾರತಕ್ಕೆ ಆಗಮಿಸಿ, ಚುನಾವಣಾ ಪ್ರಕ್ರಿಯೆಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದಾರೆ.

M P Ravindra, Congress MLA from Harapanahalli Constituency retuns home

ಎಂ.ಪಿ. ರವೀಂದ್ರ ಅವರು ಕೂಡ, 'ಅನೇಕರ ಮಾತಿಗೆ ಬೆಲೆ ನೀಡಬೇಡಿ. ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದೆ. ಆರೋಗ್ಯ ಸುಧಾರಿಸಿದೆ. ಶೀಘ್ರದಲ್ಲೇ ಊರಿಗೆ ಬಂದು, ತಮ್ಮೆಲ್ಲರ ಜೊತೆಯಲ್ಲಿರುವೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವೆ. ನಿಮ್ಮೆಲ್ಲರ ಆಶೀರ್ವಾದ, ಹಾರೈಕಗಳು ನನಗಿರಲಿ' ಎಂದು ಹೇಳಿದ್ದಾರೆ.

ಎಂ.ಪಿ. ರವೀಂದ್ರ ಅವರು ಜೆಎಸ್‍ಎಸ್ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ, ಭಾಷಣದ ನಂತರ ವೇದಿಕೆಯಲ್ಲಿ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು. ಮೈಸೂರಿನಲ್ಲಿ ಶ್ರೀಗಳ ನೇತೃತ್ವದಲ್ಲಿಯೇ ಚಿಕಿತ್ಸೆ ನಡೆದಿತ್ತು. ಆ ನಂತರ ಅವರು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದರು.

English summary
M P Ravindra, Congress MLA from Harapanahalli Constituency retuns home. He is the son of former minister late MP Prakash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X