ಕರ್ನಾಟಕಕ್ಕೆ ಮೇ ತಿಂಗಳಾಂತ್ಯಕ್ಕೆ ಮುಂಗಾರು ಮಳೆ ಆಗಮನ
ಬೇಸಿಗೆಯ ಬಿಸಿಲಿನಿಂದ ಬಳಲಿರುವ ಕರ್ನಾಟಕಕ್ಕೆ ಮೇ ತಿಂಗಳಾಂತ್ಯಕ್ಕೆ ಮುಂಗಾರು ಮಳೆ ಆಗಮನವಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರ ತಿಳಿಸಿದೆ.
ಬೆಂಗಳೂರು, ಮೇ 11: ಬೇಸಿಗೆಯ ಬಿಸಿಲಿನಿಂದ ಬಳಲಿರುವ ಕರ್ನಾಟಕಕ್ಕೆ ಮೇ ತಿಂಗಳಾಂತ್ಯಕ್ಕೆ ಮುಂಗಾರು ಮಳೆ ಆಗಮನವಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರ ತಿಳಿಸಿದೆ.
ನೈರುತ್ಯ ಮುಂಗಾರು ಈ ವರ್ಷ ಒಂದು ವಾರ ಮುಂಚಿತವಾಗಿಯೇ ರಾಜ್ಯವನ್ನು ಪ್ರವೇಶಿಸಲಿದೆ.ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸುತ್ತದೆ. [ವಾಡಿಕೆಗಿಂತ ಕಡಿಮೆ ಮಳೆ, ಮುಂಗಾರು ಕ್ಷೀಣ: ಹವಾಮಾನ ಮುನ್ಸೂಚನೆ]
ನಂತರ ಚಾಮರಾಜನಗರದ ಮೂಲಕ ರಾಜ್ಯವನ್ನು ಪ್ರವೇಶಿಸುವುದು ವಾಡಿಕೆ. ಸದ್ಯದ ಮುನ್ಸೂಚನೆ ಪ್ರಕಾರ ಮೇ 25ರ ವೇಳೆಗೆ ಕೇರಳ ಕರಾವಳಿಯಲ್ಲಿ ಉತ್ತಮ ಮಳೆಯಾಗಲಿದೆ'.ಕರ್ನಾಟಕದಲ್ಲಿ ಮೇ 29ರಂದು ಮೊದಲ ಮಳೆಯ ಸಿಂಚನ ಕಾಣಬಹುದು ಎಂದು ಕೇಂದ್ರದ ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದರು.
ಮುಂಗಾರು ಶೀಘ್ರವೇ ಪ್ರವೇಶಿಸುವ ಮುನ್ಸೂಚನೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕೂಡಾ ಹೇಳಿದೆ
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸುತ್ತದೆ. ನಂತರ ಅದು ಚಾಮರಾಜನಗರದ ಮೂಲಕ ರಾಜ್ಯವನ್ನು ಪ್ರವೇಶಿಸುವುದು ವಾಡಿಕೆ