ಕೂಡಲ ಸಂಗಮನ ಆಣೆ ತಪ್ಪೇ ಮಾಡಿಲ್ಲ:ಕಾಶಪ್ಪನವರ್
ಬೆಂಗಳೂರು, ಜು.6: ರೌಡಿ ಶೀಟರ್ ಸೋಮೇಗೌಡ ಜತೆ ಸೇರಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಸಂಬಂಧ ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಶನಿವಾರ ರಾತ್ರಿ ನಗರಕ್ಕೆ ಹಿಂದಿರುಗಿದ್ದಾರೆ.
ಪ್ರಕರಣ
ಸಂಬಂಧ
ಮಾಧ್ಯಮಗಳಿಗೆ
ಸಂದರ್ಶನ
ನೀಡಿದ
ಅವರು
ಕುಡಿಯುವ
ಅಭ್ಯಾಸವೇ
ನನಗಿಲ್ಲ.
ಅಂದೂ
ನಾನು
ಕುಡಿದಿರಲಿಲ್ಲ.
ಸೋಮಶೇಖರ
ಗೌಡ
ರೌಡಿ
ಎನ್ನುವುದು
ಗೊತ್ತೆ
ಇರಲಿಲ್ಲ.
ಸ್ಕೈ
ಬಾರ್ನಲ್ಲಿ
ಪೊಲೀಸರ
ಮೇಲೆ
ಹಲ್ಲೆ
ಮಾಡಿಲ್ಲ.
ಪೊಲೀಸರೇ
ಸುಳ್ಳು
ಹೇಳುತ್ತಿದ್ದಾರೆ.
ಕೂಡಲ
ಸಂಗಮನ
ಆಣೆ
ನಾನು
ತಪ್ಪೇ
ಮಾಡಿಲ್ಲ
ಎಂದು
ಅಲವತ್ತುಕೊಂಡಿದ್ದಾರೆ.[ಪೊಲೀಸರಿಂದ
ಪತ್ನಿ
ಮೇಲೆ
ಹಲ್ಲೆ,
ಕಾಶಪ್ಪ
ಆರೋಪ]
ನಾನು ಎಲ್ಲಿಯೂ ತಲೆಮರೆಸಿಕೊಂಡಿರಲಿಲ್ಲ. ತಿರುಪತಿಗೆ ಹೋಗಿದ್ದೆ ಅಷ್ಟೇ. ವಿರೋಧ ಪಕ್ಷಗಳ ವಿನಾಕಾರಣ ಈ ಪ್ರಕರಣವನ್ನು ದೊಡ್ಡದು ಮಾಡುತ್ತಿವೆ. ಸದನದ ವೇಳೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. [ರೌಡಿಶೀಟರ್ ಸೋಮೇಗೌಡ ಯಾರು?]
ಸೋಮವಾರ ಮಂದೂಡಿಕೆ: ವಿಜಯಾನಂದ ಕಾಶಪ್ಪನವರ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.