ಎಚ್ಎಎಲ್ ಬಳಿ ವಿಮಾನ ಪತನ : ಸುಪ್ರೀಂಗೆ ಪಿಐಎಲ್
ಬೆಂಗಳೂರು, ಫೆಬ್ರವರಿ 06 : ಲಘು ವಿಮಾನ ಪತನದಂತಹ ಘಟನೆಗಳು ಭವಿಷ್ಯದಲ್ಲಿ ನಡೆಯಂತೆ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಕೆಯಾಗಿದೆ. ಫೆ.1ರಂದು ಬೆಂಗಳೂರಿನಲ್ಲಿ ವಿಮಾನ ಪತನಗೊಂಡು ಇಬ್ಬರು ಮೃತಪಟ್ಟಿದ್ದರು.
ವಕೀಲ ಅಲೋಕ್ ಶ್ರೀವಾಸ್ತವ್ ಎನ್ನುವವರು ಬುಧವಾರ ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನ ಎಚ್ಎಎಲ್ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಬೆಂಗಳೂರಿನ ಎಚ್ಎಎಲ್ ಸಮೀಪ ಮಿರಾಜ್ 2000 ಲಘು ವಿಮಾನ ಫೆ.1ರಂದು ಪತನಗೊಂಡಿತ್ತು. ವಿಮಾನದಲ್ಲಿದ್ದ ಇಬ್ಬರು ಪೈಲೆಟ್ಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆದ್ದರಿಂದ, ಪಿಐಎಲ್ ಸಲ್ಲಿಕೆ ಮಾಡಲಾಗಿದೆ.
ಮಿರಾಜ್ ಯುದ್ಧ ವಿಮಾನ ಅವಘಡ ಹೊಸದೇನಲ್ಲ
ಎಚ್ಎಎಲ್ ಸಮೀಪ ನಡೆದ ವಿಮಾನ ದುರಂತಕ್ಕೆ ಕಾರಣವೇನು? ಎಂಬುದು ಇನ್ನೂ ನಿಗೂಢವಾಗಿದೆ. ವಿಮಾನದ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ಇನ್ನೂ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.
ಎಚ್ಎಎಲ್ ವಿಮಾನ ದುರಂತ ; ವಾಯುಪಡೆಯಿಂದ ತನಿಖೆ ಆರಂಭ
ವಿಮಾನ ಅಪಘಾತಕ್ಕೆ ಕಾರಣ ಏನು ಎಂದು ತಿಳಿಯಲು ಭಾರತೀಯ ವಾಯುಪಡೆಯೂ ತನಿಖೆಯನ್ನು ನಡೆಸುತ್ತಿದೆ. 2012ರಲ್ಲಿ 10 ದಿನಗಳ ಅಂತರದಲ್ಲಿ ಎರಡು ಮಿರಾಜ್ ಲಘು ವಿಮಾನಗಳು ಪತನಗೊಂಡಿದ್ದವು.