ಮಾಲೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ರೇಪ್
ಕೋಲಾರ, ಜು.3: ಜಿಲ್ಲೆಯ ಮಾಲೂರು ತಾಲೂಕಿನ ಕುಪ್ಪೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿ ಮೇಲೆ 4 ಮಂದಿ ಯುವಕರು ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೋಲಾರದ ಹಸಂಡಹಳ್ಳಿ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಜೂ.28 ಶನಿವಾರ ಶಾಲೆ ಮುಗಿಸಿ ಮಧ್ಯಾಹ್ನ ಕುಪ್ಪೂರಿನ ಮನೆಗೆ ಬರುತ್ತಿದ್ದಾಗ ನಾಲ್ವರು ಯುವಕರು ನೀಲಗಿರಿ ತೋಪಿಗೆ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಮಾಸ್ತಿ ಪೊಲೀಸರು ತಿಳಿಸಿದ್ದಾರೆ.
ಕುಪ್ಪೂರು ಗ್ರಾಮದ ನಾರಾಯಣ ಸ್ವಾಮಿ , ಮುನಿಕೃಷ್ಣ, ಅನಿಲ್ ಕುಮಾರ್ ಮತ್ತು ಕೃಷ್ಣ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದಾರೆ. ಮಾಸ್ತಿ ಠಾಣೆಯಲ್ಲಿ ನಾಲ್ವರ ಕೇಸ್ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.[ಅತ್ಯಾಚಾರ, ಪಿಜಿ ನಿಯಂತ್ರಣಕ್ಕೆ ತಜ್ಞ ಸಮಿತಿ ರಚನೆ]
ಅತ್ಯಾಚಾರ ವಿಷಯವನ್ನು ಬಹಿರಂಗಗೊಳಿಸಿದರೆ ಕೊಲೆ ಮಾಡುವುದಾಗಿ ಮುನಿಕೃಷ್ಣ ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ಆಕೆ ಮನೆಯವರಿಗೆ ವಿಷಯ ತಿಳಿಸಿರಲಿಲ್ಲ. ಆದರೆ ಅತ್ಯಾಚಾರದ ಆಘಾತದಿಂದಾಗಿ ಬಾಲಕಿಗೆ ಜ್ವರ ಬಂದಿದೆ. ಬುಧವಾರ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.[ಪ್ರೀತಿಸಿ, ಅತ್ಯಾಚಾರವೆಸಗಿ ಓಡಿಹೋದ ಎಸ್ಐ!]
ವಿದ್ಯಾರ್ಥಿನಿಗೆ ಈಗ ಮಾಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಲಿತ ಸಮುದಾಯಕ್ಕೆ ಸೇರಿದ ಈ ವಿದ್ಯಾರ್ಥಿನಿಯ ತಂದೆ ನಿಧನರಾಗಿದ್ದು, ತಾಯಿ ಕೂಲಿ ಮಾಡಿ ಈಕೆಯನ್ನು ಓದಿಸುತ್ತಿದ್ದಾರೆ.