ನೂತನ ಸಚಿವ ಸುರೇಶ್ ಅಂಗಡಿಯಿಂದ ಸಾರ್ವಜನಿಕರಿಗೆ ವಿಶೇಷ ಮನವಿ
ಬೆಂಗಳೂರು, ಜೂನ್ 01: ಹೊಸದಾಗಿ ಕೇಂದ್ರ ಮಂತ್ರಿಯಾಗಿ ಆಯ್ಕೆ ಆಗಿರುವ ಬಿಜೆಪಿಯ ಸುರೇಶ್ ಅಂಗಡಿ ಅವರು ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.
ನರೇಂದ್ರ ಮೋದಿ ಮಂತ್ರಿ ಮಂಡಲದಲ್ಲಿ 'ಅಂಗಡಿ' ತೆರೆದ ಸುರೇಶ್
ಸಚಿವ ಸುರೇಶ್ ಅಂಗಡಿ ಅವರ ಹುಟ್ಟುಹಬ್ಬ ಇಂದು ಇದ್ದು ತಮ್ಮನ್ನು ಅಭಿನಂದಿಸಲು ಬರುವ ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರಾಗಲಿ, ಸಾರ್ವಜನಿಕರಾಗಲಿ ಹೂಗುಚ್ಛವನ್ನು ತರಬೇಡಿರೆಂದು ಅವರು ಮನವಿ ಮಾಡಿದ್ದಾರೆ.
Humble request to all my friends, party leaders, karyakartas & well-wishers wanting to meet me & greet me on my birthday with bouquet or shawls, I look upto #notebooks instead. I will distribute these notebooks among school student & receive the best gift in form of their smiles.
— Suresh Angadi (@AngadiMp) June 1, 2019
ಹೂಗುಚ್ಛದ ಬದಲಾಗಿ ನೋಟ್ ಪುಸ್ತಕವನ್ನು ತರಬೇಕೆಂದು ಸುರೇಶ್ ಅಂಗಡಿ ಅವರು ಮನವಿ ಮಾಡಿದ್ದಾರೆ. ನೋಟ್ ಪುಸ್ತಕಗಳನ್ನು ಒಟ್ಟು ಮಾಡಿ ಅವನ್ನು ಶಾಲೆಗಳಿಗೆ ವಿತರಿಸಿ ಮಕ್ಕಳ ನಗುವಿನಲ್ಲಿ ಆಶೀರ್ವಾದ ಪಡೆಯುವುದಾಗಿ ಸಚಿವರು ಹೇಳಿದ್ದಾರೆ.
ಇದೇ ರೀತಿಯ ಪರಿಸರ ಸ್ನೇಹಿ ಮನವಿಯನ್ನು ಕೆಲವು ದಿನಗಳ ಹಿಂದಷ್ಟೆ ಸಚಿವ ಸದಾನಂದಗೌಡ ಅವರು ಮಾಡಿದ್ದರು. ಅವರು ಸಹ ಹೂಗುಚ್ಛವನ್ನು ಯಾರೂ ಭೇಟಿ ಸಮಯ ತರಬೇಡಿ ಅದರ ಬದಲಾಗಿ ಗಿಡವನ್ನು ನೀಡಿ ಎಂದು ಮನವಿ ಮಾಡಿದ್ದರು.
ಅನಂತ್ ಕುಮಾರ್ ಬಿಟ್ಟುಹೋದ ಎರಡೂ ಖಾತೆಗಳು ಕನ್ನಡಿಗರಿಗೆ
ಸದಾನಂದಗೌಡ ಅವರ ಮನವಿ ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ಕುಮಾರ್, ಹಾಗೆ ಸಂಗ್ರವಾದ ಗಿಡಗಳನ್ನು ನಾವು ಭಾನುವಾರ ದಿನದಂದು ನೆಡುತ್ತೇವೆ ಎಂದು ಹೇಳಿದ್ದರು.