ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಸಚಿವ ಸುರೇಶ್ ಅಂಗಡಿಯಿಂದ ಸಾರ್ವಜನಿಕರಿಗೆ ವಿಶೇಷ ಮನವಿ

|
Google Oneindia Kannada News

ಬೆಂಗಳೂರು, ಜೂನ್ 01: ಹೊಸದಾಗಿ ಕೇಂದ್ರ ಮಂತ್ರಿಯಾಗಿ ಆಯ್ಕೆ ಆಗಿರುವ ಬಿಜೆಪಿಯ ಸುರೇಶ್ ಅಂಗಡಿ ಅವರು ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

ನರೇಂದ್ರ ಮೋದಿ ಮಂತ್ರಿ ಮಂಡಲದಲ್ಲಿ 'ಅಂಗಡಿ' ತೆರೆದ ಸುರೇಶ್ ನರೇಂದ್ರ ಮೋದಿ ಮಂತ್ರಿ ಮಂಡಲದಲ್ಲಿ 'ಅಂಗಡಿ' ತೆರೆದ ಸುರೇಶ್

ಸಚಿವ ಸುರೇಶ್ ಅಂಗಡಿ ಅವರ ಹುಟ್ಟುಹಬ್ಬ ಇಂದು ಇದ್ದು ತಮ್ಮನ್ನು ಅಭಿನಂದಿಸಲು ಬರುವ ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರಾಗಲಿ, ಸಾರ್ವಜನಿಕರಾಗಲಿ ಹೂಗುಚ್ಛವನ್ನು ತರಬೇಡಿರೆಂದು ಅವರು ಮನವಿ ಮಾಡಿದ್ದಾರೆ.

ಹೂಗುಚ್ಛದ ಬದಲಾಗಿ ನೋಟ್ ಪುಸ್ತಕವನ್ನು ತರಬೇಕೆಂದು ಸುರೇಶ್ ಅಂಗಡಿ ಅವರು ಮನವಿ ಮಾಡಿದ್ದಾರೆ. ನೋಟ್ ಪುಸ್ತಕಗಳನ್ನು ಒಟ್ಟು ಮಾಡಿ ಅವನ್ನು ಶಾಲೆಗಳಿಗೆ ವಿತರಿಸಿ ಮಕ್ಕಳ ನಗುವಿನಲ್ಲಿ ಆಶೀರ್ವಾದ ಪಡೆಯುವುದಾಗಿ ಸಚಿವರು ಹೇಳಿದ್ದಾರೆ.

Minister Suresh Angadi request not to bring flower bouquet to him

ಇದೇ ರೀತಿಯ ಪರಿಸರ ಸ್ನೇಹಿ ಮನವಿಯನ್ನು ಕೆಲವು ದಿನಗಳ ಹಿಂದಷ್ಟೆ ಸಚಿವ ಸದಾನಂದಗೌಡ ಅವರು ಮಾಡಿದ್ದರು. ಅವರು ಸಹ ಹೂಗುಚ್ಛವನ್ನು ಯಾರೂ ಭೇಟಿ ಸಮಯ ತರಬೇಡಿ ಅದರ ಬದಲಾಗಿ ಗಿಡವನ್ನು ನೀಡಿ ಎಂದು ಮನವಿ ಮಾಡಿದ್ದರು.

ಅನಂತ್ ಕುಮಾರ್ ಬಿಟ್ಟುಹೋದ ಎರಡೂ ಖಾತೆಗಳು ಕನ್ನಡಿಗರಿಗೆ ಅನಂತ್ ಕುಮಾರ್ ಬಿಟ್ಟುಹೋದ ಎರಡೂ ಖಾತೆಗಳು ಕನ್ನಡಿಗರಿಗೆ

ಸದಾನಂದಗೌಡ ಅವರ ಮನವಿ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್, ಹಾಗೆ ಸಂಗ್ರವಾದ ಗಿಡಗಳನ್ನು ನಾವು ಭಾನುವಾರ ದಿನದಂದು ನೆಡುತ್ತೇವೆ ಎಂದು ಹೇಳಿದ್ದರು.

English summary
BJP minister Suresh Angadi requested people to not to bring flower bouquet to him. instead of flower bouquet he asks to bring notebook, so he can collect them give it to children who were in need.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X