ಮಹಿಳಾ ಐಪಿಎಸ್ ಅಧಿಕಾರಿ ಮೇಲೆ ಸಚಿವ ಸಾ.ರಾ.ಮಹೇಶ್ ದರ್ಪ
ತುಮಕೂರು, ಜನವರಿ 23: ಸಚಿವ ಸಾ.ರಾ.ಮಹೇಶ್ ಅವರು ಮಹಿಳಾ ಐಪಿಎಸ್ ಅಧಿಕಾರಿ ಮೇಲೆ ದರ್ಪ ತೋರಿದ್ದಾರೆ. ಸಚಿವರ ದರ್ಪಕ್ಕೆ ಮಹಿಳಾ ಅಧಿಕಾರಿ ಕಣ್ಣೀರು ಹಾಕಿದ್ದಾರೆ.
ಐಪಿಎಸ್ ಅಧಿಕಾರಿ ರೂಪಾ ಹೆಸರು ದುರುಪಯೋಗ, ದೂರು
ನಿನ್ನೆ ಸಿದ್ದಗಂಗಾ ಮಠದಲ್ಲಿ ಶ್ರೀಗಳ ಅಂತಿಮ ಕಾರ್ಯ ನಡೆಯಬೇಕಾದರೆ ಅಲ್ಲಿಗೆ ಬಂದ ಸಚಿವ ಸಾ.ರಾ.ಮಹೇಶ್ ಅವರನ್ನು ಮಹಿಳಾ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಅವರ ವಿರುದ್ಧ ಕಠಿಣವಾಗಿ ಮಾತನಾಡಿದ್ದಾರೆ. ಈ ದೃಶ್ಯ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
47 ಐಎಎಸ್, 7 ಐಪಿಎಸ್ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದಿಂದ ಬಡ್ತಿ
ಸಾ.ರಾ.ಮಹೇಶ್ ಅವರ ನಿಂದನೆಯಿಂದ ಬೇಸರಗೊಂಡ ದಿವ್ಯಾ ಗೋಪಿನಾಥ್ ಅವರು ಸ್ಥಳದಲ್ಲಿಯೇ ಕಣ್ಣೀರು ಸುರಿಸಿದ್ದಾರೆ. ಇಬ್ಬರ ವಾಕ್ಸರದ ಮಧ್ಯೆ ಪ್ರವೇಶಿಸಿದ ಸ್ಥಳೀಯ ಮುಖಂರು ಹಾಗೂ ಮತ್ತೊಬ್ಬ ಉನ್ನತ ಪೊಲೀಸ್ ಅಧಿಕಾರಿ ಸಾ.ರಾ.ಮಹೇಶ್ ಅವರನ್ನು ಕಳುಹಿಸಿ ದಿವ್ಯಾ ಗೋಪಿನಾಥ್ ಅವರನ್ನು ಸಮಾಧಾನಪಡಿಸಿದ್ದಾರೆ.
ದಿವ್ಯಾ ಗೋಪಿನಾಥ್ ಅವರು ತುಮಕೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು, ಅಂತಹಾ ಉನ್ನತ ಅಧಿಕಾರಿ ವಿರುದ್ಧ ದರ್ಪ ತೋರಿದ ಸಚಿವ ಸಾ.ರಾ.ಮಹೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.