ಹಾಸ್ಟೆಲಲ್ಲೇ ತಂಗಿ ಮಾತುಳಿಸಿಕೊಂಡ ಸಚಿವ ಆಂಜನೇಯ
ಅದರಂತೆ ಹೊಸ ವರ್ಷದ ಎರಡನೆಯ ದಿನವಾದ ನಿನ್ನೆ ಬುಧವಾರ ರಾತ್ರಿ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ತಂಗಿದ ಸಚಿವ ಆಂಜನೇಯ ಅವರು ಅಲ್ಲೇ ವಿದ್ಯಾರ್ಥಿಗಳು ಪವಡಿಸೋ ಮಂಚದ ಮೇಲೆಯೇ ಮಲಗಿದರು. ರಾಜ್ಯದಲ್ಲಿ ಎಸ್ಸಿ-ಎಸ್ಟಿ ಹಾಸ್ಟೆಲುಗಳ ಶೋಚನೀಯ ಸ್ಥಿತಿಯನ್ನು ಉತ್ತಮಗೊಳಿಸುವಲ್ಲಿ ಬದ್ಧತೆ ತೋರುತ್ತಿರುವ ಸಚಿವ ಆಂಜನೇಯ ಅವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಈ ಹಿಂದೆ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಬಂಗಲೆಗಳು ಸಾಮಾನ್ಯವಾಗಿ ಸಚಿವರ ತಂಗುದಾಣವಾಗುತ್ತಿತ್ತು. ಅವೀಗ ಊರಾಚೆಗಿನ ಪಾಳುಬಿದ್ಧ ಬಂಗಲೆಗಳಾಗಿ ಪರಿವರ್ತನೆಗೊಳ್ಳುವುದು ಜತೆಗೆ ಇತ್ತ ಸಚಿವರ ಸ್ಥಾನಮಾನವೂ ಹೆಚ್ಚಾಗಿ, ಆರ್ಥಿಕವಾಗಿಯೂ ಅವರು ಸದೃಢವಾಗುತ್ತಿರುವುದರ ಬೆನ್ನಿಗೇ (ಬೆಳ್ಳಿತೆರೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ) ಊರಿನ ಮಧ್ಯೆಯೇ ಪಂಚತಾರಾ ಸೌಕರ್ಯದ ಹೋಟೆಲುಗಳು ಲಭ್ಯವಾಗುತ್ತಿರುವಾಗ ಸಚಿವ ಆಂಜನೇಯ ಅವರು ಅದನ್ನೆಲ್ಲಾ ಬಿಟ್ಟು ವಿದ್ಯಾರ್ಥಿಗಳ ಜತೆಗೆ ಊಟ ಮಾಡಿ ಮಲಗಿದ್ದು ಮಾದರಿಯಾಗಿದೆ. ಸಚಿವರೇ ಹಾಸ್ಟೆಲಿನಲ್ಲಿ ಮಲಗುತ್ತಿರುವಾಗ ತಾವೇನು ಕಡಿಮೆ ಎಂದು ಇಲಾಖೆಯ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದ್ದಾರೆ.
ಇಲ್ಲಿನ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿದ ಸಚಿವರು ವಿದ್ಯಾರ್ಥಿಗಳಿಂದ ವಸತಿ ಸೌಕರ್ಯದ ವ್ಯವಸ್ಥೆ, ಶಿಕ್ಷಣ ಕ್ರಮ, ವ್ಯಾಸಂಗದ ಬಗ್ಗೆ ಮಾಹಿತಿ ಪಡೆದರು. ನಂತರ ವಿದ್ಯಾರ್ಥಿಗಳೊಂದಿಗೆ ಊಟ ಮಾಡಿ, ವಿದ್ಯಾರ್ಥಿಗಳು ಮಲಗುವ ಕೊಠಡಿಯಲ್ಲೇ ಮಲಗಿದರು. ಯಾಕೋ ಈ ಹೊತ್ತಿನಲ್ಲಿ, ಕೆಲ ಮಾಜಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯವೆಂಬ ಪ್ರಹಸನ ಜ್ಞಾಪಕಕ್ಕೆ ಬರುತ್ತಿದೆ. (ರಾಹುಲ್ ಗಾಂಧಿ ಮತ್ತೆ ಗ್ರಾಮ ವಾಸ್ಯವ್ಯ)