ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಚಿದ ಕೊಂಡಿ: ಅಲ್ಲಿಗೆ ಕರ್ನಾಟಕ ಮೂಲದ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕ್ ಕಥೆ ಮುಕ್ತಾಯ

|
Google Oneindia Kannada News

ಏಪ್ರಿಲ್ ಒಂದು, ಕೊರೊನಾ ಭೀತಿಯ ನಡುವೆ 2020-21ರ ಸಾಲಿಗೆ ಹೊಸ ಆರ್ಥಿಕ ವರ್ಷ ಆರಂಭಗೊಂಡಿದೆ. ಅದ್ಯಾಕೆ ಇದೇ ದಿನವನ್ನು 'ಮೂರ್ಖರ ದಿನ' ಎಂದು ಕರೆಯಲಾಗುತ್ತೋ ಗೊತ್ತಿಲ್ಲ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದ್ದ ಕರ್ನಾಟಕದ ಮೂಲದ ಮಗುದೊಂದು ಬ್ಯಾಂಕ್ ಇಂದಿನಿಂದ (ಏ 1) ಮುಂಬೈ ಮೂಲದ ಬ್ಯಾಂಕ್ ಜೊತೆ ಅಧಿಕೃತವಾಗಿ ವಿಲೀನಗೊಂಡಿದೆ.

ಅಲ್ಲಿಗೆ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳ ತವರು ಮನೆಯಾಗಿದ್ದ ಕರ್ನಾಟಕಕ್ಕೆ, ತನ್ನದೆಂದು ಹೇಳಿಕೊಳ್ಳಲು ಈಗ ಉಳಿದಿರುವುದು ಒಂದು ಬ್ಯಾಂಕ್ ಮಾತ್ರ.

ಕನ್ನಡಿಗರ ಬ್ಯಾಂಕುಗಳ ಮೇಲೆ ಮೋದಿ ಸವಾರಿ; ವಿಲೀನ ಎಷ್ಟು ಸರಿ? ಕನ್ನಡಿಗರ ಬ್ಯಾಂಕುಗಳ ಮೇಲೆ ಮೋದಿ ಸವಾರಿ; ವಿಲೀನ ಎಷ್ಟು ಸರಿ?

ಇಂದಿನಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ವೈಯಕ್ತಿಕ ಆದಾಯ ತೆರಿಗೆಯ ಹೊಸ ಸ್ಲ್ಯಾಬ್ ಅಡಿಯಲಿ ಬರಲಿದೆ. ಜೊತೆಗೆ, ಈ ಹಿಂದೆ ಘೋಷಿಸಲಾದ ಬ್ಯಾಂಕ್ ವಿಲೀನ ಇಂದಿನಿಂದ ಅಧಿಕೃತವಾಗಲಿದೆ.

ಲಾಭದಲ್ಲಿದ್ದ ವಿಜಯಾ ಬ್ಯಾಂಕ್, ನಷ್ಟದಲ್ಲಿದ ಬ್ಯಾಂಕ್ ಆಫ್ ಬರೋಡಾ

ಲಾಭದಲ್ಲಿದ್ದ ವಿಜಯಾ ಬ್ಯಾಂಕ್, ನಷ್ಟದಲ್ಲಿದ ಬ್ಯಾಂಕ್ ಆಫ್ ಬರೋಡಾ

ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ವಿಲೀನಗೊಂಡಿತ್ತು. ಇದಾದ ನಂತರ, ವಿಜಯಾ ಬ್ಯಾಂಕ್, ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡ ಜೊತೆ ಮರ್ಜ್ ಆಗಿತ್ತು. ಲಾಭದಲ್ಲಿದ್ದ ವಿಜಯಾ ಬ್ಯಾಂಕ್, ನಷ್ಟದಲ್ಲಿದ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಂಡಿದ್ದು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ದೇನಾ ಬ್ಯಾಂಕ್ ಕೂಡಾ ಇದರ ಜೊತೆ ವಿಲೀನಗೊಂಡಿತ್ತು.

ಕಾರ್ಪೋರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಇಂಡಿಯಾ ಜೊತೆ ವಿಲೀನ

ಕಾರ್ಪೋರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಇಂಡಿಯಾ ಜೊತೆ ವಿಲೀನ

ಈಗ, ಮಂಗಳೂರಿನಲ್ಲಿ ಹೆಡ್ ಕ್ವಾಟ್ರಸ್ ಹೊಂದಿರುವ ಕಾರ್ಪೋರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಅಧಿಕೃತವಾಗಿ ಇಂದು (ಏ 1) ವಿಲೀನಗೊಂಡಿದೆ. ಆಂಧ್ರ ಬ್ಯಾಂಕ್ ಕೂಡಾ ಯುಬಿಐ ಜೊತೆ ವಿಲೀನಗೊಂಡಿದೆ. ಇದು ಹೈದರಾಬಾದ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.

ಆರ್ಥಿಕ ಗಣತಿಗಾಗಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿಆರ್ಥಿಕ ಗಣತಿಗಾಗಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ

ಭಾರತದ ಹಳೆಯ ಬ್ಯಾಂಕ್ ಗಳಲ್ಲಿ ಒಂದಾದ ಕಾರ್ಪೋರೇಷನ್ ಬ್ಯಾಂಕ್

ಭಾರತದ ಹಳೆಯ ಬ್ಯಾಂಕ್ ಗಳಲ್ಲಿ ಒಂದಾದ ಕಾರ್ಪೋರೇಷನ್ ಬ್ಯಾಂಕ್

ಭಾರತದ ಹಳೆಯ ಬ್ಯಾಂಕ್ ಗಳಲ್ಲಿ ಒಂದಾದ ಕಾರ್ಪೋರೇಷನ್ ಬ್ಯಾಂಕ್ 12.03.1906ರಂದು ಉಡುಪಿಯಲ್ಲಿ, ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ನೇತೃತ್ವದಲ್ಲಿ ಆರಂಭಗೊಂಡಿತ್ತು. ತದನಂತರ ಬ್ಯಾಂಕಿನ ಕೇಂದ್ರ ಕಚೇರಿ ಮಂಗಳೂರಿಗೆ ಶಿಫ್ಟ್ ಆಯಿತು. ಸಾರ್ವಜನಿಕ ವಲಯದಲ್ಲಿ ಎರಡನೇ ಅತಿದೊಡ್ಡ ಎಟಿಎಂ ಹೊಂದಿರುವ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬ್ಯಾಂಕ್, ಸುಮಾರು 2,200 ಶಾಖೆಯನ್ನು ಹೊಂದಿದೆ. ಇನ್ನು ಈ ಬ್ಯಾಂಕ್ ನೆನಪು ಮಾತ್ರ.

ಕರ್ನಾಟಕ ಮೂಲದ ಬ್ಯಾಂಕ್ ಎಂದು ಹೇಳಿಕೊಳ್ಳಲು ಇರುವುದು ಕೆನರಾ ಬ್ಯಾಂಕ್ ಒಂದೇ

ಕರ್ನಾಟಕ ಮೂಲದ ಬ್ಯಾಂಕ್ ಎಂದು ಹೇಳಿಕೊಳ್ಳಲು ಇರುವುದು ಕೆನರಾ ಬ್ಯಾಂಕ್ ಒಂದೇ

ಏಪ್ರಿಲ್ ಒಂದರಿಂದ ಕರ್ನಾಟಕ ಮೂಲದ ಇನ್ನೊಂದು ಬ್ಯಾಂಕ್ ಉಡುಪಿಯಲ್ಲಿ (ಮಣಿಪಾಲ) ಪ್ರಧಾನ ಕಚೇರಿ ಹೊಂದಿರುವ ಸಿಂಡಿಕೇಟ್ ಬ್ಯಾಂಕ್ ಕೂಡಾ ವಿಲೀನಗೊಳ್ಳುತ್ತಿದೆ. ಈ ಬ್ಯಾಂಕ್, ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕೆನರಾ ಬ್ಯಾಂಕ್ ಜೊತೆ ಮರ್ಜ್ ಗೊಳ್ಳಲಿದೆ. ಅಲ್ಲಿಗೆ, ಕರ್ನಾಟಕ ಮೂಲದ ಬ್ಯಾಂಕ್ ಎಂದು ಹೇಳಿಕೊಳ್ಳಲು ಇರುವುದು ಕೆನರಾ ಬ್ಯಾಂಕ್ ಒಂದೇ.

English summary
Year 2020-21 Financial Year Started: Two State Based National Bank Merging
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X