ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ: ಸದ್ಯಕ್ಕೆ ದಂಡ ವಿಧಿಸುವುದಿಲ್ಲ: ಡಾ. ಸುಧಾಕರ್
ಬೆಂಗಳೂರು , ಏಪ್ರಿಲ್ 25: ಕೋವಿಡ್ 4ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿಯಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತು. ಕೊರೋನಾ ನಾಲ್ಕನೇ ಅಲೆಯ ತೀವ್ರತೆ ಮತ್ತು ಸ್ಥಿತಿಗತಿಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಜ್ಞರ ಪರಿಶೀಲನ ಸಭೆಯನ್ನು ನಡೆಸಿದರು.
ವಿದೇಶದಲ್ಲಿನ
ನಾಲ್ಕನೇ
ಅಲೆಯ
ಸ್ಥಿತಿಗಳ
ಬಗ್ಗೆ
ಮಾಹಿತಿ
ವಿದೇಶಗಳಲ್ಲಿ
ಈಗಾಗಲೇ
ಕೋವಿಡ್
ನಾಲ್ಕನೇ
ಅಲೆ
ಎಷ್ಟು
ಪರಿಣಾಮವನ್ನು
ಬೀರಿದೆ,
ಯಾವೆಲ್ಲಾ
ದೇಶಗಳು
ಕೊರೋನಾ
ತಡೆಗಟ್ಟುವ
ನಿಟ್ಟಿನಲ್ಲಿ
ಏನು
ಕ್ರಮವನ್ನು
ವಹಿಸಿದ್ದರು?
ಎಂಬದುದ
ಬಗ್ಗೆವೂ
ತಜ್ಞರಿಂದ
ಮಾಹಿತಿಯನ್ನು
ಸಿಎಂ
ಪಡೆದುಕೊಂಡಿದ್ದಾರೆ.
ಭಾರತದಲ್ಲಿ
ಓಮಿಕ್ರಾನ್
ರೂಪಾಂತರ
ತಳಿ
ಪರಿಣಾಮಕಾರಿಯೇ..?
ಸಿಎಂಗೆ
ತಜ್ಞರು
ನೀಡಿರುವ
ಮಾಹಿತಿಯಂತೆ
ಕೋವಿಡ್
4ನೇ
ಅಲೆ
ಅಷ್ಟೇನೂ
ಪರಿಣಾಮಕಾರಿಯಾಗಿಲ್ಲ.
ಆದರೆ
ಕರೋನ
ನಿಯಮವನ್ನು
ಪಾಲಿಸುವುದು
ಸೂಕ್ತ
ಎಂಬ
ಮಾಹಿತಿಯನ್ನು
ನೀಡಿದ್ದಾರೆ.
ವೃದ್ದರಿಗೆ
ಹೃದ್ರೋಗಿಗಳಿಗೆ
ಬೂಸ್ಟರ್
ಡೋಸ್
ನೀಡಲು
ಸಲಹೆ
60
ವರ್ಷ
ದಾಟಿದ
ವೃದ್ದರಿಗೆ
ಮತ್ತು
ಹೃದ್ರೋಗಿಗಳು
ಸೇರಿದಂತೆ
ಬೇರೆ
ಬೇರೆ
ಖಾಯಿಲೆಯಿಂದ
ಬಳಲುತ್ತಿರುವವರಿಗೆ
ವೈದ್ಯರ
ಸಲಹೆಯಂತೆ
ಬೂಸ್ಟರ್
ಡೋಸ್
ನೀಡಲು
ಅಗತ್ಯ
ಕ್ರಮವಹಿಸುವಂತೆ
ಸಲಹೆ
ನೀಡಿದ
ತಜ್ಞರ
ತಂಡ.
ಸಭೆಯ ಬಳಿಕ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು?
ಮುಖ್ಯಮಂತ್ರಿ ನೇತೃತ್ವದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, 'ಕೋವಿಡ್ ನಾಲ್ಕನೇ ಅಲೆಯ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿ ನೇತೇತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಜನಜಂಗುಳಿ, ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು. ಆದರೆ, ಮಾಸ್ಕ್ ಧರಿಸದವರಿಗೆ ಸದ್ಯಕ್ಕೆ ದಂಡ ಹಾಕುವ ತೀರ್ಮಾನ ಮಾಡಿಲ್ಲ,' ಎಂದು ಹೇಳಿದರು.
'ಕೋವಿಡ್ ಪ್ರಕರಣಗಳು ವಿವಿಧ ರಾಜ್ಯಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿಯೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು. ಬೆಂಗಳೂರಿನಲ್ಲಿ 1.9 % ಕೋವಿಡ್ ಏರಿಕೆ ಕಂಡಿದೆ. ಮೇಲ್ವಿಚಾರಣೆ ಮಾಡುವುದು ಅವಶ್ಯಕತೆ ಇದೆ. ವಿಶ್ವದಲ್ಲಿ ಸೋಂಕು ಉಲ್ಬಣ ಆಗುತ್ತಿದೆ. ವ್ಯಾಕ್ಸಿನ್ ಪಡೆದವರಿಗೂ ಕೋವಿಡ್ ಸೊಂಕು ಕಾಣಿಸಿಕೊಳ್ಳುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗ್ತಿದೆ" ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದರು.
ಇನ್ನು ಸಿಎಂ ಕರೆದಿದ್ದ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಡಾ: ಎಂ.ಕೆ.ಸುದರ್ಶನ್, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕಿ ಡಾ: ಅರುಂಧತಿ ಚಂದ್ರಶೇಖರ್ ,ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಿಶೇಷ ಆಯುಕ್ತ (ಆರೋಗ್ಯ) ತ್ರಿಲೋಕಚಂದ್ರ ಮೊದಲಾದವರು ಉಪಸ್ಥಿತರಿದ್ದರು.