ಸೋಮೇಶ್ವರ ಹೋಟೆಲಿನ 'ಭಕ್ತ' ಅವರ ಮಗಳು ಮೃತ
ಉಡುಪಿ, ಡಿ.9: ಕಳೆದ ಭಾನುವಾರ ಮುಂಜಾನೆ ಪೆರ್ಡೂರು ಸಮೀಪ ನಡೆದ ಭೀಕರ ಅಪಘಾತದಲ್ಲಿ ಸೋಮೇಶ್ವರ ಹೋಟೆಲ್ ಮಾಲೀಕ ಮನೋಹರ್ ಭಕ್ತ ಹಾಗೂ ಇನ್ನಿಬ್ಬರು ಸಾವನ್ನಪ್ಪಿದ ಸುದ್ದಿ ಓದಿರುತ್ತೀರಿ. ಈ ಅಪಘಾತದಲ್ಲಿ ಗಾಯಗೊಂಡಿದ್ದ ಭಕ್ತ ಅವರ ಮಕ್ಕಳ ಪೈಕಿ ಒಬ್ಬರು ಮೃತಪಟ್ಟಿರುವ ಸುದ್ದಿ ಬಂದಿದೆ.
ಮನೋಹರ್ ಅವರು ಕುಟುಂಬ ಸಮೇತ ಮುಲ್ಕಿಯ ವೆಂಕಟರಮಣ ದೇಗುಲಕ್ಕೆ ಹೋಗಿ ಹಿಂತಿರುಗುವಾಗ ರಸ್ತೆ ಅಪಘಾತದಲ್ಲಿ ಮನೋಹರ್ ಸೇರಿ ಮೂವರು ಸಾವನ್ನಪ್ಪಿದ್ದರು. ಅಪಘಾತದಲ್ಲಿ ಮನೋಹರ್-ಸ್ವಾತಿ ದಂಪತಿ ಮಕ್ಕಳಾದ 8 ವರ್ಷದ ಮಾನಸ ಮತ್ತು 6 ವರ್ಷದ ಸಹನಾ ಅಪಾಯದಿಂದ ಪಾರಾಗಿದ್ದರು.
ಅದರೆ,
ತೀವ್ರವಾಗಿ
ಗಾಯಗೊಂಡಿದ್ದ
ಇಬ್ಬರನ್ನು
ಮಣಿಪಾಲ
ಆಸ್ಪತ್ರೆಗೆ
ಸೇರಿಸಲಾಗಿತ್ತು.ಈ
ಪೈಕಿ
ಬಾಲಕಿ
ಸಂಜನಾ
(6)
ಚಿಕಿತ್ಸೆ
ಫಲಕಾರಿಯಾಗದೆ
ಮಂಗಳವಾರ
ಬೆಳಗ್ಗೆ
ಸಾವನ್ನಪ್ಪಿದ್ದಾಳೆ.
8
ವರ್ಷದ
ಮಾನಸ
ಇನ್ನೂ
ದುರ್ಘಟನೆಯ
ಆಘಾತದಿಂದ
ಚೇತರಿಸಿಕೊಂಡಿಲ್ಲ.
ಆಗುಂಬೆ ಘಾಟ್ ಇಳಿದು ಸೋಮೇಶ್ವರದಲ್ಲಿನ ಹೋಟೆಲಿನಲ್ಲಿ ನೀರ್ ದೋಸೆ ರುಚಿ ಸವಿಯುವುದೇ ಆನಂದ. ಗ್ರಾಹಕರಿಗೆ ಇಂಥ ರುಚಿ ಪರಿಚಯಿಸಿದ ಮನೋಹರ್ ಭಕ್ತ ಅವರ ಕುಟುಂಬದಲ್ಲಿ ಪುತ್ರಿ ಮಾನಸ ಬಿಟ್ಟರೆ ಮಿಕ್ಕವರೆಲ್ಲ ಇಹಲೋಕ ತ್ಯಜಿಸಿದ್ದಾರೆ.
ಹೆಬ್ರಿಯ
ಶಿವಪುರದಲ್ಲಿ
ಮನೋಹರ್
ಅವರಿದ್ದ
ಕಾರು
ಹಾಗೂ
ಲಾರಿ
ಮುಖಾಮುಖಿ
ಡಿಕ್ಕಿಯಾದ
ಪರಿಣಾಮ
ಮನೋರಮ
ಭಕ್ತ(62),
ಮನೋಹರ್
ಭಕ್ತ(42)
ಮತ್ತು
ಸ್ವಾತಿ
ಭಕ್ತ(32)
ಸಾವನ್ನಪ್ಪಿದರೆ,
ಮಂಗಳವಾರ
ಸಂಜನಾ
ಸಾವು
ಸಂಭವಿಸಿದೆ.
ಸೋಮೇಶ್ವರದ ಜನಪ್ರಿಯ ಹೋಟೆಲ್ ಗಳ ಪೈಕಿ ಮನೋಹರ್ ಭಕ್ತ ಅವರ ಹೋಟೆಲ್ ಕೂಡಾ ಒಂದಾಗಿದೆ. ಬಿಜೆಪಿ ಕಾರ್ಯಕರ್ತರೂ ಆಗಿದ್ದ ಮನೋಹರ್ ಅವರು ಕುಟುಂಬ ಸಮೇತ ಮುಲ್ಕಿಯ ವೆಂಕಟರಮಣ ದೇಗುಲಕ್ಕೆ ಹೋಗಿ ಹಿಂತಿರುಗುವಾಗ ಅಪಘಾತ ಸಂಭವಿಸಿತ್ತು.