ಮಂಡ್ಯ : ಮೂಡಾ ಹಗರಣದ ಕುರಿತು ಸಿಬಿಐ ತನಿಖೆ
ಮಂಡ್ಯ, ಜು. 2 : ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮುಡಾ ಆಯಕ್ತರಿಗೆ ಬುಧವಾರ ಸೂಚನೆ ನೀಡಲಾಗಿದೆ.
ಮಂಡ್ಯ
ನಗರಾಭಿವೃದ್ಧಿ
ಪ್ರಾಧಿಕಾರ
(ಮೂಡಾ)ದ
1821
ನಿವೇಶನಗಳ
ಹಂಚಿಕೆಯಲ್ಲಿ
ಅಕ್ರಮ
ನಡೆದಿದೆ
ಎಂದು
ಮೂಡಾ
ಆಯುಕ್ತ
ಕೆ.ಮಥಾಯ್
ನಗರಾಭಿವೃದ್ಧಿ
ಇಲಾಖೆಗೆ
ವರದಿ
ನೀಡಿದ್ದರು.
ನಿವೇಶನಗಳನ್ನು
ಅರ್ಹರಿಗೆ
ನೀಡದೆ
ಪ್ರಭಾವಿಗಳಿಗೆ
ಹಂಚಿಕೆ
ಮಾಡಲಾಗಿದೆ
ಎಂದು
ವರದಿಯಲ್ಲಿ
ಉಲ್ಲೇಖಿಸಿದ್ದರು.
ನಗರಾಭಿವೃದ್ಧಿ ಇಲಾಖೆ ವರದಿಯನ್ನು ಪರಿಶೀಲನೆ ನಡೆಸಿದ ಬಳಿಕ ಸಿಬಿಐ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಎರಡು ಅಥವ ಮೂರು ದಿನಗಳಲ್ಲಿ ಎಫ್ಐಆರ್ ದಾಖಲಿಸುತ್ತೇನೆ ಎಂದು ಕೆ.ಮಥಾಯ್ ಮಂಡ್ಯದಲ್ಲಿ ಬುಧವಾರ ಹೇಳಿದ್ದಾರೆ. [ಮೂಡಾ ವೆಬ್ ಸೈಟ್ ನೋಡಿ]
ವಕೀಲ ಸತ್ಯಾನಂದ ಅವರು ಮೂಡಾದಲ್ಲಿ ನಡೆದ ಈ ಹಗರಣವನ್ನು ಬಯಲಿಗೆಳೆದಿದ್ದರು. ಸಚಿವ ಅಂಬರೀಶ್ ಸೇರಿದಂತೆ ಹಲವರಿಗೆ 1821 ನಿವೇಶನಗಳು ಹಂಚಿಕೆಯಾಗಿವೆ ಎಂಬ ಆರೋಪಗಳಿವೆ. ರಾಜಕೀಯ ಪ್ರಭಾವ ಬಳಿಸಿ ಹಲವು ಪ್ರಭಾವಿ ನಾಯಕರು ನಿವೇಶನ ಪಡೆದಿದ್ದು, ಅರ್ಹರಿಗೆ ನಿವೇಶನ ಸಿಕ್ಕಿಲ್ಲ ಎಂದು ಸತ್ಯಾನಂದ ಆರೋಪಿಸಿದ್ದರು. ಸದ್ಯ ಸರ್ಕಾರ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ.