ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬರಗಾಲದಲ್ಲಿ ಕರ್ನಾಟಕಕ್ಕೆ ಸಂಜೀವಿನಿಯಾದ ಮಹಾರಾಷ್ಟ್ರ
ತನಗೆ ನೀರು ಕೊಡುವಂತೆ ಕರ್ನಾಟಕ ಸರಕಾರ ಮಹಾರಾಷ್ಟ್ರಕ್ಕೆ ಮನವಿ ಸಲ್ಲಿಸಿತ್ತು. ಕರ್ನಾಟಕದ ಮನವಿ ಮೇರೆಗೆ ಮಹಾರಾಷ್ಟ್ರ 2.5 ಟಿಎಂಸಿ ನೀರನ್ನು ಕೊಯ್ನಾ ಜಲಾಶಯದಿಂದ ಬಿಡುಗಡೆ ಮಾಡಿದೆ.
ಬೆಂಗಳೂರು, ಏಪ್ರಿಲ್ 11: ಬಿರು ಬೇಸಿಗೆಯ ಬರಗಾಲದಲ್ಲೂ ಮಹಾರಾಷ್ಟ್ರ ಕರ್ನಾಟಕಕ್ಕೆ 2.5 ಟಿಎಂಸಿ ನೀರು ನೀಡಿದೆ. ಮಂಗಳವಾರ ಮಧ್ಯರಾತ್ರಿ ಕೊಯ್ನಾ ಜಲಾಶಯದಿಂದ ಕರ್ನಾಟಕಕ್ಕೆ ಈ ಪ್ರಮಾಣದ ನೀರು ಹರಿಸಲಾಗಿದೆ.
ತನಗೆ ನೀರು ಕೊಡುವಂತೆ ಕರ್ನಾಟಕ ಸರಕಾರ ಮಹಾರಾಷ್ಟ್ರಕ್ಕೆ ಮನವಿ ಸಲ್ಲಿಸಿತ್ತು. ಕರ್ನಾಟಕದ ಮನವಿ ಮೇರೆಗೆ ಮಹಾರಾಷ್ಟ್ರ 2.5 ಟಿಎಂಸಿ ನೀರು ನೀಡಿದೆ. [ಭೀಕರ ಬರಗಾಲದಲ್ಲೂ 'ಶ್ರಮಬಿಂದು ಸಾಗರ'ದಲ್ಲಿ ನೀರೋ ನೀರು]
ಈ ಹಿಂದೆ ಉತ್ತರ ಕರ್ನಾಟಕ ಬಿಜೆಪಿ ನಾಯಕರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ಗೆ ನೀರು ಬಿಡುವಂತೆ ಮನವಿ ಸಲ್ಲಿಸಿದ್ದರು. ಜತೆಗೆ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಆಲಮಟ್ಟಿ ಜಲಾಶಯದಿಂದ ಸೊಲ್ಲಾಪುರ ಭಾಗಕ್ಕೆ ನೀರು ಕೊಡಲಾಗುವುದು, ಕೋಯ್ನಾದಿಂದ ನೀರು ಕೊಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿದ್ದರು. ಅದರಂತೆ ಇದೀಗ ಮಹಾರಾಷ್ಟ್ರ ನೀರು ಬಿಡುಗಡೆ ಮಾಡಿದೆ.
Comments
maharashtra water karnataka summer 2017 drought in karnataka ಮಹಾರಾಷ್ಟ್ರ ನೀರು ಕರ್ನಾಟಕ ಬೇಸಿಗೆ 2017 ಕರ್ನಾಟಕದಲ್ಲಿ ಬರಗಾಲ
English summary
Maharashtra to release 2.5 TMC of water from Koyna reservoir tonight after Karnataka's request.
Story first published: Tuesday, April 11, 2017, 23:56 [IST]