"ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗಲೇ ಮಹದಾಯಿ ಯೋಜನೆ ಜಾರಿ"
ದಾವಣಗೆರೆ,
ಫೆಬ್ರವರಿ.24:
ಮಹಾದಾಯಿ
ಯೋಜನೆಗೆ
ಕೇಂದ್ರ
ಸರ್ಕಾರದಿಂದ
ಈಗಾಗಲೇ
ಹಸಿರು
ನಿಶಾನೆ
ದೊರೆತಿದೆ.
ಕೆಲವು
ತಾಂತ್ರಿಕ
ತೊಂದರೆಗಳಿದ್ದು,
ರಾಜ್ಯದಲ್ಲಿ
ಬಿಜೆಪಿ
ಸರ್ಕಾರ
ಇರುವಾಗಲೇ
ಎಲ್ಲ
ಸಮಸ್ಯೆಗಳನ್ನು
ಬಗೆಹರಿಸುವ
ಮೂಲಕ
ಯೋಜನೆಯನ್ನು
ಜಾರಿಗೊಳಿಸಲಾಗುತ್ತದೆ
ಎಂದು
ನೀರಾವರಿ
ಸಚಿವ
ರಮೇಶ್
ಜಾರಕಿಹೊಳಿ
ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ
ಜಿಲ್ಲೆ
ಹರಿಹರ
ತಾಲೂಕಿನ
ರಾಜನಹಳ್ಳಿ
ವಾಲ್ಮೀಕಿ
ಗುರುಪೀಠದಲ್ಲಿ
ಮಾತನಾಡಿದ
ಅವರು,
ಮಹದಾಯಿ
ವಿಷಯವಾಗಿ
ಮಾತನಾಡುವುದಕ್ಕೆ
ನಾವು
ಶಿವಮೊಗ್ಗ
ಹೊರಟಿದ್ದೇವೆ.
ಸೋಮವಾರ
ಉನ್ನತ
ಮಟ್ಟದ
ಅಧಿಕಾರಿಗಳ
ಜೊತೆಗೆೆ
ಸಭೆ
ನಡೆಸಲಾಗುತ್ತದೆ.
ಮಹದಾಯಿ;
ಅಧಿಸೂಚನೆ
ಹೊರಡಿಸಲು
ಸುಪ್ರೀಂ
ನಿರ್ದೇಶನ
ಫೆಬ್ರವರಿ.26ರಂದು
ಕೇಂದ್ರ
ಸಚಿವರನ್ನು
ಭೇಟಿ
ಮಾಡುತ್ತೇವೆ
ಅವರ
ಜೊತೆ
ಮಹಾದಾಯಿ
ಬಗ್ಗೆ
ಮಾತುಕತೆ
ನಡೆಸಿ
ಆದಷ್ಟು
ಬೇಗ
ಗೆಜೆಟ್
ಮಾಡಿ
ಕಾರ್ಯರೂಪಕ್ಕೆ
ತರುತ್ತೇವೆ
ಎಂದರು.
ನಮ್ಮ
ಸರ್ಕಾರ
ಇರುವಾಗಲೇ
ಆದಷ್ಟು
ಬೇಗ
ಜಾರಿಗೆ
ತರುತ್ತೇವೆ.
ಆದಷ್ಟು
ಬೇಗ
ಹಣ
ಬಿಡುಗಡೆ
ಮಾಡುವಂತೆ
ಒತ್ತಾಯಿಸಿದ್ದೇವೆ
ಎಂದು
ಸಚಿವ
ರಮೇಶ್
ಜಾರಕಿಹೊಳಿ
ತಿಳಿಸಿದರು.
ನಾನು
ರಾಜೀನಾಮೆ
ಬಗ್ಗೆ
ಮಾತನಾಡೇ
ಇಲ್ಲ:
ಇನ್ನು,
ನಾನು
ರಾಜೀನಾಮೆ
ನೀಡುತ್ತೇನೆ
ಎಂಬ
ಬಗ್ಗೆ
ಎಲ್ಲಿಯೂ
ಹೇಳಿಕೆ
ನೀಡಿಲ್ಲ.
ಒಂದು
ವೇಳೆ
ನಾನು
ಹೇಳಿಕೆ
ನೀಡಿದ್ದರೆ
ಅದರ
ವೀಡಿಯೋ
ಇದ್ರೆ
ನನಗೆ
ತೋರಿಸಿ,
ಅದನ್ನು
ಬಿಟ್ಟು
ಗೊಂದಲ
ಸೃಷ್ಟಿಸುವುದು
ಬೇಡ.
ಈ
ಹಿಂದೆ
ನೀಡಿ
ಯಾವುದೋ
ಹೇಳಿಕೆಯನ್ನು
ಟ್ವಿಸ್ಟ್
ಮಾಡಿದ್ದಾರೆ
ಎಂದು
ರಮೇಶ್
ಜಾರಕಿಹೊಳಿ
ಆರೋಪಿಸಿದರು.
ನೀರಾವರಿ
ವಿಚಾರದಲ್ಲಿ
ನಾನು
ಎಲ್ಲರ
ಸಲಹೆ
ಪಡೆಯುತ್ತೇನೆ.
ಹೆಚ್
ಕೆ
ಪಾಟೀಲ್
ಅವರ
ಮಾರ್ಗದರ್ಶನವನ್ನೂ
ಸಹ
ಪಡೆಯುತ್ತೇನೆ.
ಎಸ್
ಟಿ
ಸಮುದಾಯಕ್ಕೆ
ಶೇ.7.5
ಮೀಸಲಾತಿ
ನೀಡುವಂತೆ
ಹೋರಾಟ
ನಡೆಯುತ್ತಿದೆ.
ಸಿಎಂ
ಕೂಡ
ಈ
ಬಗ್ಗೆ
ಭರವಸೆ
ನೀಡಿದ್ದು,
ಸಮಿತಿ
ವರದಿ
ಬಂದ
ನಂತರ
ಮಾಡುತ್ತೇವೆ
ಎಂದಿದ್ದಾರೆ
ಅಂತಾ
ರಮೇಶ್
ಜಾರಕಿಹೊಳಿ
ಸ್ಪಷ್ಟನೆ
ನೀಡಿದರು.