ಮಹದಾಯಿ ವಿವಾದ: ಸಂಜೆ 4ಕ್ಕೆ ತೀರ್ಪು, ಆತಂಕದಲ್ಲಿ ಉ.ಕ ರೈತರು
ಬೆಂಗಳೂರು, ಆಗಸ್ಟ್ 14: ಮಹದಾಯಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧಿಕರಣವು ಇಂದು (ಆಗಸ್ಟ್ 14) ಸಂಜೆ 4 ಗಂಟೆಗೆ ತೀರ್ಪು ಪ್ರಕಟಿಸಲಿದೆ.
ಕರ್ನಾಟಕ, ಗೋವಾ, ಮಹರಾಷ್ಟ್ರ ಸರ್ಕಾರಗಳ ಪರ ವಕೀಲರ ವಾದಗಳನ್ನು ಆಲಿಸಿರುವ ನ್ಯಾಯಮೂರ್ತಿ ಜಿ.ಎಸ್.ಪಂಚಾಲ ಅವರು ತೀರ್ಪು ಪ್ರಕಟಿಸಲಿದ್ದಾರೆ. ಆಗಸ್ಟ್ 20ರ ಒಳಗಾಗಿ ತೀರ್ಪು ಪ್ರಕಟಿಸಲಾಗುತ್ತದೆ ಎನ್ನಲಾಗಿತ್ತು. ಕೆಲ ದಿನ ಮುಂಚಿತವಾಗಿಯೇ ತೀರ್ಪು ಪ್ರಕಟವಾಗುತ್ತಿದೆ.
ಕಳಸಾ ಹಳ್ಳದಿಂದ ಮಲಪ್ರಭಾ ನದಿಗೆ ನೀರು ಹೋಗಿರುವುದು ನಿಜ: ಡಿಕೆಶಿ
ಯಾವ ರಾಜ್ಯಕ್ಕೆ ಎಷ್ಟು ನೀರು ಸೇರಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗುತ್ತದೆ. ಮಹದಾಯಿ ವಿವಾದವು ಗೋವಾ, ಕರ್ನಾಟಕ ಹಾಗೂ ಮಹರಾಷ್ಟ್ರ ರಾಜ್ಯಗಳ ನಡುವೆ ನಡೆಯುತ್ತಿದ್ದು, ಇಂದು ಯಾವುದಾದರೂ ಒಂದು ರಾಜ್ಯಕ್ಕೆ ಸಿಹಿಯ ನಿರೀಕ್ಷೆ ಇದೆ.
ಮಹದಾಯಿ ವಿವಾದ : ಕರ್ನಾಟಕ ವಿರುದ್ಧ ಗೋವಾದಿಂದ ದೂರು
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು , ತೀರ್ಪು ರಾಜ್ಯದ ಪರ ಬರುವ ವಿಶ್ವಾಸವಿದೆ. ಅಕಸ್ಮಾತ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಮುಂದಿನ ಕಾನೂನಾತ್ಮಕ ಹೋರಾಟಗಳಿಗೆ ಸರ್ಕಾರ ಸಿದ್ಧವಿರುತ್ತದೆ ಎಂದು ಹೇಳಿದ್ದಾರೆ.