ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಒಂದೇ ಗುಂಡಿಯಲ್ಲಿ ಮಣ್ಣು ಮಾಡಿ ಎಂದ್ಹೇಳಿ ಪ್ರಾಣ ಬಿಟ್ಟ ಪ್ರೇಮಿಗಳು
ಚಿಕ್ಕಬಳ್ಳಾಪುರ, ಡಿಸೆಂಬರ್ 12 : ಜಿಲ್ಲೆಯ ಗೌರಿಬಿದನೂರಿನಲ್ಲಿ ಮಂಗಳವಾರ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗಾನವಿ (16) ಹಾಗೂ ಗಿರೀಶ್ (18) ಮೃತ ಪ್ರೇಮಿಗಳು. ಚಿಕ್ಕಬಳ್ಳಾಪುರದ ಕೊತ್ತನೂರು ನಿವಾಸಿ ಗಿರೀಶ್ ಹಾಗೂ ಗೌರಿಬಿದನೂರಿನ ಪೆದ್ದನಹಳ್ಳಿಯ ಗಾನವಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮನನೊಂದ ಪ್ರೇಮಿಗಳು ಮರಕ್ಕೆ ನೇಣು ಹಾಕಿಕೊಮಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ
ನಾವಿಬ್ಬರು ಕೂಡಿ ಬಾಳಲು ಸಾಧ್ಯವಾಗಲಿಲ್ಲ. ಕನಿಷ್ಠ ಪಕ್ಷ ನಮ್ಮಿಬ್ಬರನ್ನು ಒಂದೇ ಗುಂಡಿಯಲ್ಲಿ ಮಣ್ಣು ಮಾಡಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Comments
English summary
lovers have committed suicide by hanging after parents reject marriage proposal in Gowribidanur, Chikkaballapur district on Tueday. The deceased have been identified Girish and Ganvi.