ಐದು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ
ಬೆಂಗಳೂರು, ಜ.29 : ರಾಜ್ಯದ ಐದು ಜಿಲ್ಲೆಗಳ ಆರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತರು ಬುಧವಾರ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹುಬ್ಬಳ್ಳಿ, ಬಳ್ಳಾರಿ, ಬಿಜಾಪುರ, ಮಂಗಳೂರು ಮತ್ತು ಹಾಸನದಲ್ಲಿ ದಾಳಿ ನಡೆದಿದ್ದು, ಭ್ರಷ್ಟ ಅಧಿಕಾರಿಗಳ ಆಸ್ತಿಯ ಮೌಲ್ಯದ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹುಬ್ಬಳಿಯಲ್ಲಿ
ಹುಬ್ಬಳ್ಳಿ-ಧಾರವಾಡ
ಮಹಾನಗರ
ಪಾಲಿಕೆಯ
ಸಹಾಯಕ
ಇಂಜಿನಿಯರ್
ಎಸ್.ಹೆಚ್.ಪುಟ್ಟಣ್ಣ
ಅವರ
ನಿವಾಸದ
ಮೇಲೆ
ಲೋಕಾಯುಕ್ತ
ಎಸ್ಪಿ
ಪರಶುರಾಮ್
ಅವರ
ನೇತೃತ್ವದಲ್ಲಿ
ದಾಳಿ
ನಡೆಸಲಾಗಿದೆ.
ದಾಳಿಯಲ್ಲಿ
5
ಲಕ್ಷರೂ
ನಗದು,
ಲಕ್ಷಾಂತರ
ಮೌಲ್ಯದ
ಚಿನ್ನಾಭರಣ
ಪತ್ತೆಯಾಗಿದೆ.
ಪುಟ್ಟಣ್ಣ
ಅವರ
ಮಂಜುನಾಥ
ನಗರದಲ್ಲಿನ
ಮನೆ,
ಕಚೇರಿಗಳ
ಮೇಲೆ
ದಾಳಿ
ನಡೆಸಲಾಗಿದ್ದು,
ದಾಖಲೆಗಳ
ಪರಿಶೀಲನೆ
ನಡೆಸಲಾಗುತ್ತಿದೆ.
ಹಾಸನ ಜಿಲ್ಲೆಯಲ್ಲಿ ಎಸ್ಪಿ ವೇದಮೂರ್ತಿ ಅವರ ನೇತೃತ್ವದ ತಂಡ ತೂಕಮಾಪನ, ಅಳತೆ ಸಹಾಯಕ ನಿಯಂತ್ರಣಾಧಿಕಾರಿ ಜಿ.ಎನ್.ನರಸಿಂಹಮೂರ್ತಿಯವರ ಕೆ.ಆರ್.ಪುರಂ ನಿವಾಸದ ಮೇಲೆ ದಾಳಿ ನಡೆಸಿದೆ. ನರಸಿಂಹಮೂರ್ತಿ ಅವರ ಮನೆಯಲ್ಲಿ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.
ಮಂಗಳೂರು : ಮಂಗಳೂರಿನ ಎರಡು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಹಾರ ಇಲಾಖೆಯ ಅಧಿಕಾರಿ ರಾಜನ್ ನಂಬಿಯಾರ್ ಅವರ ನಿವಾಸ ಮತ್ತು ಕಂದಾಯ ಇಲಾಖೆ ಕ್ಲರ್ಕ್ ಓಂ ಪ್ರಕಾಶ್ ಹೆಗಡೆ ಅವರ ಉಪ್ಪಿನಂಗಡಿ ನಿವಾಸದ ಮೇಲೆ ದಾಳಿ ನಡೆದಿದ್ದು, ಲೆಕ್ಕಪತ್ರಗಳ ಪರಿಶೀಲನೆ ನಡೆಯುತ್ತಿದೆ.
ಬಿಜಾಪುರ : ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮದ ಲೆಕ್ಕ ಪರಿಶೋಧನಾ ಅಧಿಕಾರಿ ಸುಳೇಬಾವಿ ಅವರ ಇಲಕಲ್ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.