ಏಳು ಕಡೆ ಲೋಕಾಯುಕ್ತರ ದಾಳಿ, ದಾಖಲೆ ಪರಿಶೀಲನೆ
ಬೆಂಗಳೂರು, ಜೂ.27 : ಶುಕ್ರವಾರ ಲೋಕಾಯುಕ್ತ ಪೊಲೀಸರು ರಾಜ್ಯದ ಏಳು ಕಡೆ ಏಕಕಾಲದಲ್ಲಿ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು , ಬೆಳಗಾವಿ, ಶಿವಮೊಗ್ಗ , ಗುಲ್ಬರ್ಗ, ರಾಯಚೂರು, ಯಾದಗಿರಿ ಮತ್ತು ಹುಬ್ಬಳ್ಳಿಯಲ್ಲಿ ದಾಳಿ ನಡೆಸಲಾಗಿದೆ.
ಶುಕ್ರವಾರ
ಮೈಸೂರು
ಸೋಪ್ಸ್
ಅಂಡ್
ಡಿಟರ್ಜೆಂಟ್
(ಕೆಎಸ್
ಡಿಎಲ್)ನ
ವ್ಯವಸ್ಥಾಪಕ
ನಿರ್ದೇಶಕ
ಕೇಶವಮೂರ್ತಿ
ಅವರ
ಬೆಂಗಳೂರಿನ
ಬಸವೇಶ್ವರ
ನಗರದಲ್ಲಿರುವ
ನಿವಾಸ,
ಸಂಬಂಧಿಕರ
ಮನೆ
ಸೇರಿದಂತೆ
ಮೂರಕ್ಕೂ
ಹೆಚ್ಚುಕಡೆ
ದಾಳಿ
ನಡೆಸಲಾಗಿದ್ದು,
ದಾಖಲೆಗಳನ್ನು
ಪರಿಶೀಲಿಸಲಾಗುತ್ತಿದೆ.
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಜೂನಿಯರ್ ಇಂಜಿನಿಯರ್ ಇಷಾದ್ ಅಹಮದ್ ಅವರ ನಿವಾಸ ಮತ್ತು ವರ್ಕ್ ಶಾಪ್, ವಾಣಿಜ್ಯ ಮಳಿಗೆಗಳು ಸೇರಿದಂತೆ ನಗರದಲ್ಲಿ ಮೂರು ಕಡೆ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ಮುಂದುವರೆದಿದೆ. [ಕಾರವಾರದಲ್ಲಿ ಲೋಕಾ ಬೇಟೆ]
ಯಾದಗಿರಿ : ಯಾದಗಿರಿ ಜಿಲ್ಲೆಯ ಶಹಾಪುರದ ದೇವಿನಗರದಲ್ಲಿ ಪಟ್ಟಣ ಪಂಚಾಯ್ತಿ ಜೂನಿಯರ್ ಇಂಜಿನಿಯರ್ ಸುಭಾಶ್ಚಂದ್ರ ಶರ್ಮ ಅವರ ನಿವಾಸದ ಮೇಲೆ ಜಿಲ್ಲಾ ಲೋಕಾಯುಕ್ತ ಎಸ್ಪಿ ಮಹೇಶಪ್ಪ ಹನುಮೇಶ್ ನೇತೃತ್ವದಲ್ಲಿ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಗುಲ್ಬರ್ಗ : ಗುಲ್ಬರ್ಗದಲ್ಲಿ ಕರ್ನಾಟಕ ಗೃಹ ಮಂಡಳಿಯ ಕಚೇರಿ ವ್ಯವಸ್ಥಾಪಕ ಶಿವಪುತ್ರಪ್ಪ ಅಳಬಾವಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ರಾಯಚೂರಿನಲ್ಲಿರುವ ಅವರ ಸಂಬಂಧಿಕರ ಮನೆ ಮೇಲೆಯೂ ದಾಳಿ ನಡೆದಿದ್ದು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.
ಶಿವಮೊಗ್ಗ : ಶುಕ್ರವಾರ ಬೆಳಗ್ಗೆ ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಜೂನಿಯರ್ ಇಂಜಿನಿಯರ್ ಹಾಲೇಶಪ್ಪ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರಿನ ವಿನೋಬಾ ನಗರದಲ್ಲಿರುವ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಹುಬ್ಬಳ್ಳಿಯಲ್ಲಿ ಹೂಡಾದ ವ್ಯವಸ್ಥಾಪಕ ಪರಮೇಶ್ವರಪ್ಪ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.