ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೂ10: ರಾಜ್ಯದಲ್ಲಿ ಮತ್ತೊಂದು ಲೋಕಾಯುಕ್ತ ಬೇಟೆ
ಬೆಂಗಳೂರಿನಲ್ಲಿ ಮೂರು ಕಡೆ ಬಿಡಿಎ ಸಹಾಯಕ ಇಂಜಿನಿಯರ್ ಲಕ್ಷ್ಮೀನರಸಿಂಹಯ್ಯ, ಬೆಂಗಳೂರು ಉತ್ತರ ಆಹಾರ ನಿರೀಕ್ಷಕ ನಂಜುಂಡಯ್ಯ, ಅರಣ್ಯ ಭವನ ಎಸಿಎಫ್ ಎನ್ಎಸ್ ರವಿಕುಮಾರ್ ಲೋಕಾ ಬಲೆಗೆ ಬಿದ್ದಿದ್ದಾರೆ.
ಹಾಗೆಯೇ ಮಂಡ್ಯದ ಚೆಸ್ಕಾಂ ಲೆಕ್ಕಾಧಿಕಾರಿ ಜಿಟಿ ರಾಮಚಂದ್ರ, ಬೆಳಗಾವಿಯ ಕೃಷಿ ಸಹಕಾರಿ ಪತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ ವಿ ಚಂದ್ರಶೇಖರ್ ಹಾಗೂ ಕಾರ್ಕಳ ಪುರಸಭೆಯ ಕಿರಿಯ ಇಂಜಿನಿಯರ್ ಶ್ರೀಧರ್ ನಾಯಕ್ ಅವರ ನಿವಾಸಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
Comments
English summary
Karnataka Lokayukta police conduct raids on 6 corrupt government officials on June 10 says Lokayukta ADGP Satyanarayana Rao. Details are awaited.