ಮಾವ-ಅಳಿಯನಿಗೆ ಲೋಕಾಯುಕ್ತರ ಶಾಕ್
ಗದಗ, ಡಿ. 27 : ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ತಮ್ಮ ಇಲಾಖೆಯ ಮಾಜಿ ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ. ಗದಗ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಸದ್ಯ ಹೆಸ್ಕಾಂ ಜಾಗೃತ ದಳದ ಇನ್ಸ್ ಪೆಕ್ಟರ್ ಆಗಿರುವ ಕರಿಬಸವನಗೌಡ ಮತ್ತು ಅವರ ಸಂಬಂಧಿಕರ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಗದಗ
ಹೆಸ್ಕಾಂ
ಜಾಗೃತ
ದಳ
ಇನ್ಸ್
ಪೆಕ್ಟರ್
ಆಗಿದ್ದ
ಕರಿಬಸವನಗೌಡ
ಅವರ
ಮನೆ
ಮೇಲೆ
ಬೆಳಗ್ಗೆ
7
ಗಂಟೆ
ಸುಮಾರಿಗೆ
ಲೋಕಾಯುಕ್ತ
ಡಿವೈಎಸ್
ಪಿ
ಕೆ.ಸಿ.ಅಸುಂಡಿ
ಅವರ
ನೇತೃತ್ವದಲ್ಲಿ
ದಾಳಿ
ನಡೆಸಿರುವ
ಅಧಿಕಾರಿಗಳು
ದಾಖಲೆಗಳನ್ನು
ಪರಿಶೀಲಿಸುತ್ತಿದ್ದಾರೆ.
ಚಿತ್ರದುರ್ಗ,
ದಾವಣಗೆರೆ,
ಬೆಂಗಳೂರು
ಮತ್ತು
ಗದಗದಲ್ಲಿರುವ
ಕರಿಬಸವನಗೌಡ
ಅವರ
ಸಂಬಂಧಿಕರ
ಮನೆಗಳ
ಮೇಲೆಯೋ
ದಾಳಿ
ನಡೆಸಲಾಗಿದೆ.
ಪ್ರಸ್ತುತ ಹೆಸ್ಕಾಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರಿಬಸವನಗೌಡ, ಹಿಂದೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಕರಿಬಸವನಗೌಡ ಅವರ ಮಾವನ ಮನೆ, ಸಹೋದರ ವಿಶ್ವನಾಥ ಗೌಡರ ಮನೆ ಮೇಲೆಯೂ ಏಕಕಾಲಕ್ಕೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಕರಿಬಸವನಗೌಡ ಅವರು ಅಕ್ರಮವಾಗಿ 30 ಕೋಟಿಗೂ ಅಧಿಕ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅವರ ಆಸ್ತಿ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಕರಿಬಸವನಗೌಡ ಸಹೋದರ ವಿಶ್ವನಾಥಗೌಡ ಬಾಗಲಕೋಟೆಯ ಬಾದಾಮಿಯಲ್ಲಿ ಆಹಾರ ನಿರೀಕ್ಷಕರಾಗಿದ್ದು, ಅವರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಬೆಳಿಗ್ಗೆ 6 ಗಂಟೆಯಿಂದ ಲೋಕಾಯುಕ್ತ ಡಿವೈಎಸ್ ನೇತೃತ್ವದ ತಂಡ ದಾಖಲಗಳ ಪರಿಶೀಲನೆ ನಡೆಸುತ್ತಿದೆ. ಕರಿಬಸವನಗೌಡ ಅವರ ಮಾವನ ಮನೆ ಬಳ್ಳಾರಿಯ ನಾಗೇನಹಳ್ಳಿಯಲ್ಲಿಯೂ ಲೋಕಾಯುಕ್ತ ದಾಳಿ ನಡೆದಿದೆ.