ಆನಂದ್ ಸಿಂಗ್ಗೆ ಜಾಮೀನು, ರಾಜೀನಾಮೆ ಕೊಡ್ತಾರಾ?
ಬೆಂಗಳೂರು, ಏ. 17 : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧಿತರಾಗಿದ್ದ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಆನಂದ್ ಸಿಂಗ್ ಸ್ಪೀಕರ್ ಭೇಟಿ ಮಾಡಿ ಖುದ್ದಾಗಿ ರಾಜೀನಾಮೆ ಸಲ್ಲಿಸಲಿದ್ದಾರೆಯೇ? ಎಂಬುದು ಸದ್ಯದ ಪ್ರಶ್ನೆ.
ಅಕ್ರಮ
ಗಣಿಗಾರಿಕೆ
ಪ್ರಕರಣದ
ತನಿಖೆ
ನಡೆಸುತ್ತಿರುವ
ಲೋಕಾಯುಕ್ತ
ವಿಶೇಷ
ತನಿಖಾ
ತಂಡ
ಆನಂದ್
ಸಿಂಗ್
ಅವರನ್ನು
ಏ.9ರಂದು
ಬಂಧಿಸಿತ್ತು.
ನ್ಯಾಯಾಂಗ
ಬಂಧನದಲ್ಲಿದ್ದ
ಅವರನ್ನು
ಶುಕ್ರವಾರ
ಲೋಕಾಯುಕ್ತ
ವಿಶೇಷ
ನ್ಯಾಯಾಲಯದ
ಮುಂದೆ
ಹಾಜರುಪಡಿಸಲಾಯಿತು.
[ಶಾಸಕ
ಆನಂದ್
ಸಿಂಗ್
ರಾಜೀನಾಮೆ]
ಆನಂದ್ ಸಿಂಗ್ ಪರ ವಕೀಲರು ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ 5 ಲಕ್ಷ ರೂ. ಮೊತ್ತದ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಿತು. ವಿಚಾರಣೆಗೆ ಸಹಕರಿಸಬೇಕು, ವಿದೇಶಕ್ಕೆ ಹೋಗಬಾರದು ಎಂಬ ಷರತ್ತು ವಿಧಿಸಿತು. [ಸಿಂಗ್ ರಾಜೀನಾಮೆ ಯಾರು, ಏನು ಹೇಳಿದರು?]
ಸ್ಪೀಕರ್ ಭೇಟಿ ಯಾಗ್ತಾರಾ : ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆನಂದ್ ಸಿಂಗ್ ಸೋಮವಾರ ಜೈಲಿನ ಎಡಿಜಿಪಿ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಪತ್ರವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕಳುಹಿಸಿದ್ದರು. ಆದರೆ, ಆನಂದ್ ಸಿಂಗ್ ಖುದ್ದಾಗಿ ಬಂದು ರಾಜೀನಾಮೆ ಸಲ್ಲಿಸಿದರೆ ಅದನ್ನು ಅಂಗೀಕರಿಸುತ್ತೇನೆ ಎಂದು ಸ್ಪೀಕರ್ ಹೇಳಿದ್ದರು.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆನಂದ್ ಸಿಂಗ್ಗೆ ಭೇಟಿಯಾಗಲು ಸ್ಪೀಕರ್ ಸಮಯಾವಕಾಶ ನೀಡಿದ್ದರು. ಆದರೆ, ಆಗ ಆನಂದ್ ಸಿಂಗ್ ಭೇಟಿ ಮಾಡಿಲ್ಲ. ಆದ್ದರಿಂದ ಸಂಜೆ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.