ಲೋಕಾಯುಕ್ತರ ನೇಮಕ, ಸರ್ಕಾರಕ್ಕೆ ಹಿನ್ನಡೆ
ಬೆಂಗಳೂರು, ಮೇ 03 : ಲೋಕಾಯುಕ್ತ ನೇಮಕ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ. ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.
2015ರ
ಡಿಸೆಂಬರ್ನಲ್ಲಿ
ನ್ಯಾ.ವೈ.ಭಾಸ್ಕರರಾವ್
ಅವರು
ಲೋಕಾಯುಕ್ತ
ಹುದ್ದೆಗೆ
ರಾಜೀನಾಮೆ
ನೀಡಿದ್ದರು.
ನಂತರ
ಕರ್ನಾಟಕ
ಲೋಕಾಯುಕ್ತ
ಹುದ್ದೆ
ಖಾಲಿ
ಇದೆ.
ಸರ್ಕಾರ
ಎಸ್.ಆರ್.ನಾಯಕ್
ಅವರ
ಹೆಸರನ್ನು
ಲೋಕಾಯುಕ್ತ
ಹುದ್ದೆಗೆ
ಶಿಫಾರಸು
ಮಾಡಿ,
ಒಪ್ಪಿಗೆಗಾಗಿ
ರಾಜ್ಯಪಾಲರಿಗೆ
ಕಳುಹಿಸಿತ್ತು.
[ಲೋಕಾಯುಕ್ತರ
ನೇಮಕ
ಮತ್ತಷ್ಟು
ವಿಳಂಬ]
ಆದರೆ, ಹೆಸರನ್ನು ತಿಸ್ಕರಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ಎಸ್.ಆರ್.ನಾಯಕ್ ಅವರ ನೇಮಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. [ಲೋಕಾಯುಕ್ತ ಹುದ್ದೆಗೆ ನಾಯಕ್ ಹೆಸರು ಅಂತಿಮ]
ಆಕ್ಷೇಪ ಏಕೆ? : ಮಾನವ ಹಕ್ಕು ಸಂರಕ್ಷಣಾ ಕಾಯ್ದೆ 1993 ಸಬ್ ಸೆಕ್ಷನ್ 3 ಆಫ್ 24 ಪ್ರಕಾರ ಸರ್ಕಾರಿ ಹುದ್ದೆ ನಿರ್ವಹಣೆ ಮಾಡಿದವರನ್ನು ಪುನಃ ನೇಮಕ ಮಾಡುವಂತಿಲ್ಲ. ಈ ಬಗ್ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ಈ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಎಸ್.ಆರ್.ನಾಯಕ್ ಅವರು ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಮೇಲೆ ಬೇರೆ ಹುದ್ದೆ ನಿರ್ವಹಣೆ ಮಾಡುವಂತಿಲ್ಲ ಅವರ ಹೆಸರನ್ನು ಶಿಫಾರಸು ಮಾಡಿದ್ದು ಹೇಗೆ? ಎಂದು ರಾಜ್ಯಪಾಲರು ಪ್ರಶ್ನೆ ಮಾಡಿದ್ದಾರೆ.