ಕರ್ನಾಟಕ ಸುದ್ದಿ ಸ್ವಾರಸ್ಯ : ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಲ್ಲಿ ಕನ್ನಡವೇ ಮಾಯ
Recommended Video
ಬೆಂಗಳೂರು, ಮಾರ್ಚ್ 14 : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರವನ್ನು ತಮ್ಮ ಮುದ್ದಿನ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡುತ್ತಿರುವುದಾಗಿ, ಭಾವುಕತೆಯಿಂದಲೇ ಘೋಷಿಸುತ್ತಿದ್ದಂತೆ ಪ್ರಜ್ವಲ್ ಮತ್ತು ರೇವಣ್ಣ ಸೇರಿದಂತೆ ಸಹಜವಾಗಿ ಕಂಬನಿ ಮಿಡಿದಿದ್ದಾರೆ.
ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿ 85ನೇ ವಯಸ್ಸಿನಲ್ಲಿ ತಮ್ಮ ಪ್ರೀತಿಯ ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದರೆ ಭಾವುಕರಾಗದೆ ಇನ್ನೇನು ಆಗಲು ಸಾಧ್ಯ? ಆದರೆ, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಸ್ತುವಾಗಿದೆ. ಫೇಸ್ ಬುಕ್ ನಲ್ಲಂತೂ ತರಹೇವಾರಿ ಡೈಲಾಗುಗಳು ಪುಂಖಾನುಪುಂಖವಾಗಿ ಹೊರಬರುತ್ತಿವೆ.
ಕಣ್ಣೀರ 'ಹೊಳೆ' ಹರಿಸಿ, ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದ ದೇವೇಗೌಡ್ರು
ಕೆಲವರು ಲೋಕಸಭೆ ಚುನಾವಣೆಗೂ ಮುನ್ನ ದೇವೇಗೌಡರು ಸರಿದಾದ ದಾಳ ಉರುಳಿಸಿದ್ದಾರೆ, ಉಳಿದ ಪಕ್ಷಗಳು ಆದಷ್ಟು ಬೇಗನೆ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಈ ಬಾರಿ ಪ್ರಜ್ವಲ್ ಅವರನ್ನು ಹಾಸನದಿಂದ ಮತ್ತು ಕುಮಾರಸ್ವಾಮಿ ಅವರ ಮಗನಾದ ನಿಖಿಲ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಿರುವ ಗೌಡರು ಅವರಿಬ್ಬರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ.
ಏನೇ ಆಗಲಿ, ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಏಪ್ರಿಲ್ 18ರಂದು 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿರುವುದರಿಂದ, ಟಿಕೆಟ್ ಗಳು ವಿತರಣೆಯಾಗುತ್ತಿವೆ, ಕೆಲವು ಬಿಕರಿಯೂ ಆಗುತ್ತಿವೆ. ಎದುರಾಳಿಗಳನ್ನು ಹೇಗೆ ಸದೆಬಡಿಯಬೇಕೆಂದು ಸ್ಟ್ರಾಟಜಿಗಳು ನಡೆಯುತ್ತಿವೆ. ಈ ನಡುವೆ ರಾಜ್ಯದಲ್ಲಿ ನಡೆಯುತ್ತಿರುವ ಹಲವಾರು ಘಟನೆಗಳು ನೋಟ ಇಲ್ಲಿದೆ.
Karnataka: Election Commission officials demonstrated the use of EVM & VVPAT, at a mass marriage function in Hatti village of Koppal district, on couples' request. Guest at the wedding also participated in the public awareness campaign. (13.03) pic.twitter.com/s3tX9fs7WD
— ANI (@ANI) March 14, 2019
Deputy Commissioner for Excise Department, Basavaraj: We carried out search operation on 12 Mar at 18 locations in Shivamogga circle & seized 7526.160 litre of illegal liquor valued at Rs. 35,21491 & two bikes. Seven people sent to judicial custody. #Karanataka pic.twitter.com/3cd6auLUmg
— ANI (@ANI) March 14, 2019