ಕರ್ನಾಟಕದ 2 ಕ್ಷೇತ್ರಕ್ಕೆ ಬಿಎಸ್ಪಿ ಅಭ್ಯರ್ಥಿಗಳು ಘೋಷಣೆ
ಬೆಂಗಳೂರು, ಮಾರ್ಚ್ 20 : ಬಹುಜನ ಸಮಾಜ ಪಾರ್ಟಿ ಲೋಕಸಭಾ ಚುನಾವಣೆ 2019ಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ 28 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಮಂಗಳವಾರ ಬಿಎಸ್ಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಏಕಾಂಗಿಯಾಗಿ ಬಿಎಸ್ಪಿ ಸ್ಪರ್ಧೆ ಮಾಡಲಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ : ಕೆ.ಸಿ.ವೇಣುಗೋಪಾಲ್ಗೆ ಟಿಕೆಟ್ ಇಲ್ಲ
ಬಹುಜನ ಸಮಾಜ ಪಾರ್ಟಿಯ ವರಿಷ್ಠೆ ಕುಮಾರಿ ಮಾಯಾವತಿ ಅವರ ಒಪ್ಪಿಗೆ ಬಳಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ಪಕ್ಷದ ಅಧ್ಯಕ್ಷ ಪ್ರೊ.ಹರಿರಾಮ್ ಎ. ಅವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಪ್ರಣಬ್ ಪುತ್ರನೂ ಅಭ್ಯರ್ಥಿ
ಉತ್ತರ ಪ್ರದೇಶ ಹೊರತುಪಡಿಸಿದರೆ ಬಿಎಸ್ಪಿಯ ಶಾಸಕರು ಇರುವ ರಾಜ್ಯ ಕರ್ನಾಟಕ. 2018ರ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿಯ ಎನ್.ಮಹೇಶ್ ಅವರು ಗೆಲುವು ಸಾಧಿಸಿದ್ದಾರೆ.
ಟಿಡಿಪಿ ಪಟ್ಟಿ ಬಿಡುಗಡೆ, ನಂ.1 ಶ್ರೀಮಂತ ಸಂಸದ ಮತ್ತೊಮ್ಮೆ ಅಭ್ಯರ್ಥಿ
ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎನ್.ಮಹೇಶ್ ಅವರು ಪ್ರಾಥಮಿಕ ಶಿಕ್ಷಣ ಸಚಿವರಾಗಿಯೂ ಕೆಲಸ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು.
ಅಭ್ಯರ್ಥಿಗಳು
*
ಚಿಕ್ಕಬಳ್ಳಾಪುರ
-
ಡಾ.ಸಿ.ಎಸ್.ದ್ವಾರಕಾನಾಥ್
*
ಚಾಮರಾಜನಗರ
(ಎಸ್ಸಿ)
-
ಡಾ.ಶಿವಕುಮಾರ್