ಬಾಗಲಕೋಟೆಯಲ್ಲಿ ಹಾಟ್ರಿಕ್ ಸಾಧಿಸಿದ ಗದ್ದಿಗೌಡರ್
ಬಾಗಲಕೋಟೆ, ಮೇ.19: ಹಾಲಿ ಸಂಸದ ಗದ್ದಿಗೌಡರ್ ಪರ್ವತಗೌಡ ಮೂರನೇ ಬಾರಿಗೆ ಸಂಸತ್ಗೆ ಆಯ್ಕೆಯಾಗಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ 1,16,560 ಮತಗಳ ಅಂತರದಿಂದ ಕಾಂಗ್ರೆಸ್ನ ಅಜಯ್ ಕುಮಾರ್ ಸರನಾಯಕ್ ಅವರನ್ನು ಸೋಲಿಸುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಶಂಕರ್ ಬಿದರಿ ಸ್ಪರ್ಧಿಸಿರುವುದರಿಂದ ಕಾಂಗ್ರೆಸ್ನ ಅಜಯ್ ಕುಮಾರ್ ಸರನಾಯಕ್ ಈ ಬಾರಿ ತಮಗೆ ಗೆಲವು ಸಿಗಲಿದೆ ಎಂದು ನಿರೀಕ್ಷೆಯಲ್ಲಿದ್ದರು. ಆದರೆ ಬಾಗಲಕೋಟೆ ಜನರ ಮೇಲೆ ಈ ಬಾರಿ ಮೊದಿ ಅಲೆ ಪ್ರಭಾವ ಬೀರಿದ್ದು ಬಿಜೆಪಿಯನ್ನು ಗೆಲ್ಲಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 10,959 ಮತಗಳನ್ನು ಪಡೆಯುವ ಮೂಲಕ ಶಂಕರ್ ಬಿದರಿ ಅವರಿಗೆ ಮೂರನೇ ಸ್ಥಾನ ಲಭಿಸಿದೆ. ನೋಟವನ್ನು 10,764 ಮಂದಿ ಒತ್ತುವ ಮೂಲಕ ಯಾವ ಅಭ್ಯರ್ಥಿಯೂ ಸರಿ ಇಲ್ಲವೆಂದು ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಗದ್ದಿಗೌಡರ್ 35,446 ಮತಗಳ ಅಂತರದಿಂದ ಕಾಂಗ್ರೆಸ್ನ ಜೆ.ಟಿ ಪಾಟೀಲ್ರನ್ನು ಸೋಲಿಸಿದ್ದರು. 2009ರಲ್ಲಿ ಇಲ್ಲಿ ಶೇ.63.ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.68.9ರಷ್ಟು ಮತದಾನವಾಗಿತ್ತು.[ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಿರುಪರಿಚಯ]
ಬಾಗಲಕೋಟೆ | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
ಗದ್ದಿಗೌಡರ್ | 1 | ಬಿಜೆಪಿ | 571548 |
ಅಜಯ್ ಕುಮಾರ್ ಸರನಾಯಕ್ | 2 | ಕಾಂಗ್ರೆಸ್ | 454988 |
ಶಂಕರ್ ಬಿದರಿ | 3 | ಸ್ವತಂತ್ರ ಅಭ್ಯರ್ಥಿ | 10959 |
ವೈ.ಸಿ.ಕಾಂಬಳೆ | 4 | ಬಿಎಸ್ಪಿ | 7370 |