KSRTC: ಬೆಂಗಳೂರಿನಿಂದ ಹೊರಡುವ ಕಡೆಯ ಬಸ್ ಗಳ ಸಮಯ ಮತ್ತು ವಿವರ
ಬೆಂಗಳೂರು, ಮೇ 19: ಅಂತೂ 55 ದಿನಗಳ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ಗಳು ರಸ್ತೆಗಿಳಿದಿವೆ. ಇಂದಿನಿಂದ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸೇವೆ ಆರಂಭಗೊಂಡಿದ್ದು, ಜಿಲ್ಲೆಯಿಂದ ಜಿಲ್ಲೆಗೆ ಜನರು ಪ್ರಯಾಣಿಸಬಹುದಾಗಿದೆ.
ಒಂದು ಬಸ್ ನಲ್ಲಿ ಗರಿಷ್ಠ 30 ಮಂದಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಸಂಜೆ 7 ರಿಂದ ಬೆಳಗ್ಗೆ 7 ರವರೆಗೆ ಸಾರಿಗೆ ಸೇವೆ ಲಭ್ಯವಿರುವುದಿಲ್ಲ.
KSRTC ಸಂಚಾರ: 'ಈ' ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಪ್ರಾರಂಭ
ಹೀಗಾಗಿ, ಸಂಜೆ 7 ಗಂಟೆಯೊಳಗೆ ಬಸ್ ಗಳು ಡೆಸ್ಟಿನೇಷನ್ ತಲುಪಬೇಕಿದ್ದು, ಪ್ರತಿದಿನ ಬೆಂಗಳೂರಿನಿಂದ ಕರ್ನಾಟಕ ರಾಜ್ಯದ ವಿವಿಧ ಜಿಲ್ಲಾ ಸ್ಥಳಗಳಿಗೆ ಕೆ.ಎಸ್.ಆರ್.ಟಿ.ಸಿ ಸಾರಿಗೆಯ ಕಡೆಯ ವಾಹನ ನಿರ್ಗಮನ ಸಮಯದ ವಿವರ ಇಲ್ಲಿದೆ:
ಮಂಡ್ಯ, ತುಮಕೂರಿಗೆ ಲಾಸ್ಟ್ ಬಸ್ ಎಷ್ಟೊತ್ತಿಗೆ.?
* ಬೆಂಗಳೂರು - ಚಿಕ್ಕಬಳ್ಳಾಪುರ
* ಬೆಂಗಳೂರು - ಕೋಲಾರ
* ಬೆಂಗಳೂರು - ತುಮಕೂರು
* ಬೆಂಗಳೂರು - ಮಂಡ್ಯ
- ಈ ಮಾರ್ಗಗಳ ಪ್ರಯಾಣ ಅವಧಿ 2 ಗಂಟೆ.
- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಸಂಜೆ 5 ಗಂಟೆ.
ಬಸ್ ಸಮಯದ ವಿವರ
* ಬೆಂಗಳೂರು-ಮೈಸೂರು ಮಾರ್ಗದ ಪ್ರಯಾಣ ಅವಧಿ - 3 ಗಂಟೆ. ಹೀಗಾಗಿ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಕಡೆಯ ಬಸ್ ಮೈಸೂರಿಗೆ ಹೊರಡುತ್ತದೆ.
* ಬೆಂಗಳೂರು-ಹಾಸನ ಮಾರ್ಗದ ಪ್ರಯಾಣ ಅವಧಿ - 3 1/2 ಗಂಟೆ. ಹೀಗಾಗಿ ಮಧ್ಯಾಹ್ನ 3.3೦ ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಹಾಸನಕ್ಕೆ ಹೊರಡುತ್ತದೆ.
* ಬೆಂಗಳೂರು-ಚಾಮರಾಜನಗರ ಮಾರ್ಗದ ಪ್ರಯಾಣ ಅವಧಿ - 4 ಗಂಟೆ. ಹೀಗಾಗಿ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಕಡೆಯ ಬಸ್ ಚಾಮರಾಜನಗರಕ್ಕೆ ಹೊರಡುತ್ತದೆ.
* ಬೆಂಗಳೂರು-ಚಿತ್ರದುರ್ಗ ಮಾರ್ಗದ ಪ್ರಯಾಣ ಅವಧಿ - 4 1/2 ಗಂಟೆ. ಹೀಗಾಗಿ ಮಧ್ಯಾಹ್ನ 2.3೦ ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಚಿತ್ರದುರ್ಗಕ್ಕೆ ಹೊರಡುತ್ತದೆ.
* ಬೆಂಗಳೂರು-ಚಿಕ್ಕಮಗಳೂರು ಮಾರ್ಗದ ಪ್ರಯಾಣ ಅವಧಿ - 4 1/2 ಗಂಟೆ. ಹೀಗಾಗಿ ಮಧ್ಯಾಹ್ನ 2.3೦ ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಚಿಕ್ಕಮಗಳೂರಿಗೆ ಹೊರಡುತ್ತದೆ.
* ಬೆಂಗಳೂರು-ಮಡಿಕೇರಿ ಮಾರ್ಗದ ಪ್ರಯಾಣ ಅವಧಿ - 5 1/2 ಗಂಟೆ. ಹೀಗಾಗಿ ಮಧ್ಯಾಹ್ನ 1.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಮಡಿಕೇರಿಗೆ ಹೊರಡುತ್ತದೆ.
KSRTC ಸೇವೆ: ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ 'ಈ' ನಿಯಮಗಳ ಪಾಲನೆ ಕಡ್ಡಾಯ
ಮಧ್ಯಾಹ್ನ 1 ಗಂಟೆಗೆ ಲಾಸ್ಟ್
* ಬೆಂಗಳೂರು-ದಾವಣಗೆರೆ
* ಬೆಂಗಳೂರು-ಬಳ್ಳಾರಿ
- ಈ ಮಾರ್ಗಗಳ ಪ್ರಯಾಣ ಅವಧಿ 6 ಗಂಟೆ.
- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಮಧ್ಯಾಹ್ನ 1 ಗಂಟೆ.
ಶಿವಮೊಗ್ಗಗೆ ಹೋಗಬೇಕಿದ್ದರೆ..
* ಬೆಂಗಳೂರು-ಶಿವಮೊಗ್ಗ
* ಬೆಂಗಳೂರು-ಹಾವೇರಿ
- ಈ ಮಾರ್ಗಗಳ ಪ್ರಯಾಣ ಅವಧಿ 7 ಗಂಟೆ.
- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಮಧ್ಯಾಹ್ನ 12 ಗಂಟೆ.
ಉಡುಪಿಗೆ ಹೋಗಬೇಕಿದ್ದರೆ..
* ಬೆಂಗಳೂರು-ಕೊಪ್ಪಳ
* ಬೆಂಗಳೂರು-ಹುಬ್ಬಳ್ಳಿ
* ಬೆಂಗಳೂರು-ಗದಗ
* ಬೆಂಗಳೂರು-ಉಡುಪಿ
* ಬೆಂಗಳೂರು-ರಾಯಚೂರು
- ಈ ಮಾರ್ಗಗಳ ಪ್ರಯಾಣ ಅವಧಿ 8 ಗಂಟೆ.
- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಬೆಳಗ್ಗೆ 11 ಗಂಟೆ.
ಬೆಳಗ್ಗೆ 10 ಗಂಟೆಗೆ ಲಾಸ್ಟ್ ಬಸ್
* ಬೆಂಗಳೂರು-ಬಾಗಲಕೋಟೆ
* ಬೆಂಗಳೂರು-ಕಾರವಾರ
- ಈ ಮಾರ್ಗಗಳ ಪ್ರಯಾಣ ಅವಧಿ 9 ಗಂಟೆ.
- ಈ ಮಾರ್ಗಗಳ ಕಡೆಯ ಬಸ್ ಬೆಂಗಳೂರಿನಿಂದ ಹೊರಡುವ ಸಮಯ ಬೆಳಗ್ಗೆ 10 ಗಂಟೆ.
ಪ್ರಯಾಣಿಕರ ಗಮನಕ್ಕೆ
* ಬೆಂಗಳೂರು-ರಾಮನಗರ ಮಾರ್ಗದ ಪ್ರಯಾಣ ಅವಧಿ - 1 1/2 ಗಂಟೆ. ಹೀಗಾಗಿ ಸಂಜೆ 5.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ರಾಮನಗರಕ್ಕೆ ಹೊರಡುತ್ತದೆ.
* ಬೆಂಗಳೂರು-ಮಂಗಳೂರು ಮಾರ್ಗದ ಪ್ರಯಾಣ ಅವಧಿ - 7 1/2 ಗಂಟೆ. ಹೀಗಾಗಿ ಬೆಳಗ್ಗೆ 11.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಮಂಗಳೂರಿಗೆ ಹೊರಡುತ್ತದೆ.
* ಬೆಂಗಳೂರು-ಧಾರವಾಡ ಮಾರ್ಗದ ಪ್ರಯಾಣ ಅವಧಿ - 8 1/2 ಗಂಟೆ. ಹೀಗಾಗಿ ಬೆಳಗ್ಗೆ 10.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಧಾರವಾಡಕ್ಕೆ ಹೊರಡುತ್ತದೆ.
* ಬೆಂಗಳೂರು-ಯಾದಗಿರಿ ಮಾರ್ಗದ ಪ್ರಯಾಣ ಅವಧಿ - 9 1/2 ಗಂಟೆ. ಹೀಗಾಗಿ ಬೆಳಗ್ಗೆ 9.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಯಾದಗಿರಿಗೆ ಹೊರಡುತ್ತದೆ.
* ಬೆಂಗಳೂರು-ವಿಜಯಪುರ ಮಾರ್ಗದ ಪ್ರಯಾಣ ಅವಧಿ - 10 ಗಂಟೆ. ಹೀಗಾಗಿ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಕಡೆಯ ಬಸ್ ವಿಜಯಪುರಕ್ಕೆ ಹೊರಡುತ್ತದೆ.
* ಬೆಂಗಳೂರು-ಕಲಬುರ್ಗಿ ಮಾರ್ಗದ ಪ್ರಯಾಣ ಅವಧಿ - 11 ಗಂಟೆ. ಹೀಗಾಗಿ ಬೆಳಗ್ಗೆ 9.30 ಕ್ಕೆ ಬೆಂಗಳೂರಿನಿಂದ ಕಡೆಯ ಬಸ್ ಕಲಬುರ್ಗಿಗೆ ಹೊರಡುತ್ತದೆ.