ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಕಣ್ಣೀರಾಗಲಿಲ್ಲ ಕಾವೇರಿ: ಸಂತಸ ತಂದ ಸುಪ್ರೀಂ ತೀರ್ಪು

|
Google Oneindia Kannada News

Recommended Video

      ಕಾವೇರಿ ತೀರ್ಪು ಇಂದು : ಮೈಸೂರಿನ ಕೆ ಆರ್ ಎಸ್ ನಲ್ಲಿ ಬಿಗಿ ಭದ್ರತೆ | Oneindia Kannada

      ಬೆಂಗಳೂರು, ಫೆಬ್ರವರಿ 16: ಕನ್ನಡಿಗರ ಜೀವನದಿ ಕಾವೇರಿ ನದಿ ನೀರಿನ ಹಂಚಿಕೆಯ ಕುರಿತು 2007 ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಇಂದು(ಫೆ.16) ಹೊರಬೀಳಲಿದೆ.

      ಈ ವಿಶೇಷ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ 2016 ಅಕ್ಟೋಬರ್ ನಿಂದ ಆರಂಭಿಸಿ, 2017 ಸೆಪ್ಟೆಂಬರ್ ನಲ್ಲಿ ಪೂರ್ಣಗೊಳಿಸಿತ್ತು.

      ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ

      ಕಾವೇರಿ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಅಮಿತ್ ರಾಯ್, ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತ್ತು.

      Live: SC to pronounce Cauvery verdict today

      ಇಂದು ಹೊರಬೀಳಲಿರುವ ಕಾವೇರಿ ತೀರ್ಪಿಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ಇಲ್ಲಿ ನೀಡಲಿದೆ.

      Newest FirstOldest First
      11:32 AM, 16 Feb

      ಕಾವೇರಿ ತೀರ್ಪಿನ ವಿರುದ್ಧ ತಮಿಳುನಾಡಿನಲ್ಲಿ ಆಕ್ರೋಶ.
      11:27 AM, 16 Feb

      "ಈ ತೀರ್ಪು ತಮಿಳುನಾಡಿನ ಜನತೆಗೆ ಅನ್ಯಾಯ ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು" ಎಐಡಿಎಂಕೆ ಮುಖಂಡ ವಿ.ಮೈತ್ರೇಯನ್
      11:24 AM, 16 Feb

      ತೀರ್ಪು ನಮಗೆ ಬೇಸರ ತಂದಿದೆ. ತೀರ್ಪನ್ನು ಸಂಪೂರ್ಣ ಓದಿದ ನಂತರ ನಾವು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಾವು ಕಾನೂನನ್ನು ಗೌರವಿಸುತ್ತೇವೆ. ನಮ್ಮ ಸರ್ಕಾರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಶಕ್ತವಾಗಿದೆ. ನೀರು ಹಂಚಿಕೆ ಕಡಿತಗೊಳಿಸಿರುವುದು ಬೇಸರ ತಂದಿದೆ: ತಮಿಳುನಾಡು ಪರ ವಲೀಕ ನವ್ನೀತ್ ಕೃಷ್ಣನ್
      11:21 AM, 16 Feb

      ನ್ಯಾಯಾಧಿಕರಣ ಕೇರಳ, ಪಾಂಡಿಚೇರಿಗಳಿಗೆ ಹಂಚಿದ ನೀರಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಆ ತೀರ್ಪು ಸರಿಯಾಗಿಯೇ ಇದೆ: ಸುಪ್ರೀಂ
      11:16 AM, 16 Feb

      ತೀರ್ಪು ಸಂತಸ ತಂದಿದೆ. ತೀರ್ಪಿನ ಅನ್ವಯ ಕರ್ನಾಟಕಕ್ಕೆ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ಸಿಕ್ಕಿದೆ. ಇದರಿಂದಾಗಿ ಕರ್ನಾಟಕಕ್ಕೆ ಅನುಕೂಲವಾಗಿದೆ: ಸಿದ್ದರಾಮಯ್ಯ
      11:09 AM, 16 Feb

      1921 ರ ಒಪ್ಪಂದವನ್ನು ಈಗ ಪ್ರಶ್ನಿಸುವುದಕ್ಕೆ ಬರುವುದಿಲ್ಲ. ಏಕೆಂದರೆ ಈ ಒಪ್ಪಂದ 1971 ರಲ್ಲೇ ರದ್ದಾಗಿದೆ: ಸುಪ್ರೀಂ
      11:07 AM, 16 Feb

      ನದಿ ನೀರು ಹಂಚುವಾಗ ತಮಿಳುನಾಡು 20 ಟಿಎಂಸಿ ಅಡಿ ಅಂತರ್ಜಲವನ್ನೂ ಪರಿಗಣಿಸಬೇಕು
      Advertisement
      11:03 AM, 16 Feb

      ನಮಗೆ 14.75 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಉಳಿಸಿಕೊಳ್ಳುವಂತೆ ಸುಪ್ರೀಂ ತೀರ್ಪು ನೀಡಿದೆ. ಕೊನೆಗೂ ನಮಗೆ ನ್ಯಾಯ ಸಿಕ್ಕಿದೆ. ಈ ತೀರ್ಪು ಉಭಯ ರಾಜ್ಯಗಳಲ್ಲೂ ಶಾಂತಿ ನೆಲೆಸುವಂತೆ ಮಾಡಲಿ: ಮೋಹನ್ ಕಾತರಕಿ, ಕರ್ನಾಟಕಪರ ವಕೀಲ
      10:56 AM, 16 Feb

      15 ವರ್ಷದ ನಂತರ ಸುಪ್ರೀಂ ನ ಈ ತೀರ್ಪನ್ನು ಮರುಪರಿಶೀಲಿಸಬಹುದು: ಸುಪ್ರೀಂ
      10:55 AM, 16 Feb

      ಕರ್ನಾಟಕ ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಳ್ಳಬಹುದು.
      10:51 AM, 16 Feb

      ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರದ ಕೆಲಸ ಎಂದ ಸುಪ್ರೀಂ ಕೋರ್ಟ್.
      10:50 AM, 16 Feb

      ಬೆಂಗಳೂರಿಗೆ ಹೆಚ್ಚುವರಿ 4.75 ಟಿಎಂಸಿ ಅಡಿ ನೀರು ಹರಿಸಲು ಸುಪ್ರೀಂ ಆದೇಶ
      Advertisement
      10:46 AM, 16 Feb

      ಈ ಮೊದಲು ಕರ್ನಾಟಕ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಬಿಡುತ್ತಿತ್ತು.
      10:43 AM, 16 Feb

      ತಮಿಳುನಾಡು 20 ಟಿಎಂಸಿ ಅಂತರ್ಜಲ ಪರಿಗಣಿಸಬೇಕು. ಕರ್ನಾಟಕ ಇನ್ನು ಮೇಲೆ ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಬೇಕು- ಸುಪ್ರೀಂ
      10:42 AM, 16 Feb

      ಕರ್ನಾಟಕ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ಉಳಿಸಿಕೊಳ್ಳಬೇಕು- ಸುಪ್ರೀಂ
      10:39 AM, 16 Feb

      ಉಭಯ ರಾಜ್ಯಗಳೂ ಸಮಾನ ಹಂಚಿಕೆಯ ಕ್ರಮ ಅನುಸರಿಸಬೇಕು. ನ್ಯಾಯಾಧಿಕರಣ ಅನುಸರಿಸುವ ಕ್ರಮ ಸರಿಯಾಗಿದೆ- ಸುಪ್ರೀಂ
      10:39 AM, 16 Feb

      ನದಿಗಳು, ರಾಷ್ತ್ರೀಯ ಸಂಪತ್ತು. ಯಾವುದೇ ಒಂದು ನಿರ್ದಿಷ್ಟ ರಾಷಜ್ಯ ನದಿಗಳ ಮೇಲೆ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ- ಸುಪ್ರೀಂ
      10:37 AM, 16 Feb

      ಸಂವಿಧಾನದ ಅಡಿಯಲ್ಲಿ ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಚೌಕಾಸಿ ಮಾಡುವ ಅಧಿಕಾರ ಕರ್ನಾಟಕಕ್ಕಿದೆ- ಸುಪ್ರೀಂ
      10:34 AM, 16 Feb

      ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ. ಕೆಲವೇ ಕ್ಷಣದಲ್ಲಿ ಅಂತಿಮ ತೀರ್ಪು.
      10:32 AM, 16 Feb

      ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಪರ ವಕೀಲರು ಉಪಸ್ಥಿತಿ. ಕರ್ನಾಟಕದ ಪರ ವಕೀಲರಾದ ಎಜಿ ಮಧುಸೂದನ್ ನಾಯಕ್, ಮೋಹನ್ ಕಾತರಕಿ, ಬ್ರಿಜೇಶ್ ಕಾಳಪ್ಪ
      10:31 AM, 16 Feb

      ಸುಪ್ರೀಂ ಕೋರ್ಟ್ ಹಾಲ್ ಗೆ ಆಗಮಿಸಿದ ನ್ಯಾಯಮೂರ್ತಿಗಳು. ಕೆಲವೇ ಕ್ಷಣಗಳಲ್ಲಿ ಹೊರಬೀಳಲಿರುವ ತೀರ್ಪು.
      10:29 AM, 16 Feb

      ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ತೆರಳಿ ಭದ್ರತೆಯ ಕುರಿತು ವರದಿ ಒಪ್ಪಿಸಿದ ಡಿಜಿ - ಐಜಿಪಿ ನೀಲಮಣಿ ರಾಜು.
      10:10 AM, 16 Feb

      ಉಭಯ ರಾಜ್ಯಗಳ ನಡುವೆ ಸಂಚರಿಸುವ ಗೂಡ್ಸ್ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ.
      10:09 AM, 16 Feb

      ಕರ್ನಾಟಕ ಮತ್ತು ತಮಿಳುನಾಡಿನ ಎಲ್ಲಾ ಶಾಲೆ ಮತ್ತು ಹೊಟೇಲ್, ಇನ್ನಿತರ ಕೇಂದ್ರಗಳಲ್ಲಿ ಬಿಗಿಭದ್ರತೆ.
      10:08 AM, 16 Feb

      ತೀರ್ಪಿನ ಹಿನ್ನೆಲೆಯಲ್ಲಿ ದೆಹಲಿಗೆ ದೌಡಾಯಿಸಿದ ಕರ್ನಾಟಕದ ಎಲ್ಲಾ ಪ್ರಮುಖ ಅಧಿಕಾರಿಗಳು.
      10:06 AM, 16 Feb

      ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಎಲ್ಲಾ ಬಸ್ ಗಳನ್ನೂ ಭದ್ರತೆಯ ದೃಷ್ಟಿಯಿಂದ ಹೊಸೂರಿನಲ್ಲೇ ತಡೆಯಲಾಗಿದೆ.
      10:04 AM, 16 Feb

      ಸಮಾರು 10.30 ರ ಸುಮಾರಿಗೆ ತೀರ್ಪು ನೀಡಲಿರುವ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ.
      9:49 AM, 16 Feb

      ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಬಸ್ ಗಳ ಸಂಚಾರ ಸ್ಥಗಿತ. ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ಬಸ್ಸುಗಳು ಎಂದಿನಂತೆ ಕಾರ್ಯನಿರ್ವಹಣೆ
      9:44 AM, 16 Feb

      ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹೊಸೂರಿನಲ್ಲಿ 100 ಪೊಲೀಸರ ನಿಯೋಜನೆ. ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹೆಚ್ಚಿನ ಭದ್ರತೆ.
      9:41 AM, 16 Feb

      ಭದ್ರತೆ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ 8000 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ. ಬೆಂಗಳೂರು ನಗರವೊಂದರಲ್ಲೇ 4000 ಕ್ಕೂ ಹೆಚ್ಚು ಪೊಲೀಸರು.
      READ MORE

      English summary
      Cauvery judgment LIVE : SC to deliver verdict today(Feb 16th): The Cauvery waters verdict will be delivered today by a three judge Bench of the Supreme Court of India. It is a crucial day for the states of Karnataka and Tamil Nadu as a lot would depend on this verdict
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X