Breaking: ಜೆಡಿಎಸ್ ಅಭ್ಯರ್ಥಿಯಾಗಿ ಸರವಣ ನಾಮಪತ್ರ ಸಲ್ಲಿಕೆ
ಬೆಂಗಳೂರು, ಮೇ 24: ವಿಧಾನ ಪರಿಷತ್ತಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ. ಸರವಣ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದರು.
ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಟಿ.ಎ. ಸರವಣ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಪಕ್ಷ ಅಧಿಕೃತ ಘೋಷಣೆ ಮಾಲ್ಲ. ಆದರೂ ಮೌಕಿಕ ಸೂಚನೆ ಮೇರೆಗೆ ಸರವಣ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆ ದಿನವಾಗಿದೆ. ಎರಡು, ಮೂರು ಅಭ್ಯರ್ಥಿಗಳು ಇದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಹೊತ್ತಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದರು.
ಸರವಣ ನಾಮಪತ್ರ ಸಲ್ಲಿಕೆ ವೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಉಪಸ್ಥಿತರಿದ್ದರು.
ಜೆಡಿಎಸ್ ಅಭ್ಯರ್ಥಿಯಾಗಿ ಹಿರಿಯೂರಿನ ವೀರಶೈವ ಸಮಾಜದ ಮುಖಂಡ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಅಂತಿಮವಾಗಿ ಸರವಣ ಅವರಿಗೆ ಟಿಕೆಟ್ ಲಭ್ಯವಾಗಿದೆ.
ಅರ್ಯ
ವೈಶ್ಯ
ಸಮುದಾಯದ
ಶರವಣ
ಅವರಿಗೆ
ಟಿಕೆಟ್:
ನಾಮಪತ್ರ
ಸಲ್ಲಿಕೆಯಾದ
ನಂತರ
ಪಕ್ಷದ
ಶಾಸಕಾಂಗ
ಪಕ್ಷದ
ಕಚೇರಿಯಲ್ಲಿ
ಕುಮಾರಸ್ವಾಮಿ
ಅವರು
ಮಾಧ್ಯಮಗಳ
ಜತೆ
ಮಾತನಾಡಿದರು.
ಸಣ್ಣ ಪ್ರಮಾಣದ ಅರ್ಯ ವೈಶ್ಯ ಸಮುದಾಯದ ಶರವಣ ಅವರಿಗೆ ಟಿಕೆಟ್ ನೀಡಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರ ಸೂಚನೆಯ ಮೇರೆಗೆ ಶರವಣ ಅವರಿಗೆ ಅವಕಾಶ ನೀಡಿದ್ದೇವೆ ಎಂದರು.
ಶರವಣ ಅವರು ಪಕ್ಷಕ್ಕೆ ದುಡಿದಿದ್ದಾರೆ. ಪಕ್ಷದ ಎಲ್ಲ ಆಗುಹೋಗುಗಳಿಗೆ ಸ್ಪಂದಿಸಿದ್ದಾರೆ. ಕಳೆದ ನಾಲ್ಕೈದು ವರ್ಷದಲ್ಲಿ ಬೆಂಗಳೂರು ನಗರದಲ್ಲಿ ಹಾಗೂ ಅವರ ಸಮಾಜದ ವಿಶ್ವಾಸ ಮೂಡಿಸುವಲ್ಲಿ ಕೆಲಸ ಮಾಡಿದ್ದಾರೆ. ಮೈನ್ಯೂಟ್ ಕಮ್ಯುನಿಟಿಗೆ ಅವಕಾಶ ಕೊಡಬೇಕು ಅಂತ ಕೊಟ್ಟಿದ್ದೇವೆ. ಅವರು ಸಕ್ರೀಯವಾಗಿ ಕೆಲಸ ಮಾಡಿದ್ದಾರೆ ಹಾಗೂ ಯಾವುದೇ ಆತಂಕ ಇಲ್ಲದೇ ಪಕ್ಷದ ಪರ ಮಾತಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಶರವಣ ಅವರಿಗೆ ಟಾಸ್ಕ್ ಕೂಡ ನೀಡಲಾಗಿದೆ. ಬಸವನಗುಡಿ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.
ಧನ್ಯವಾದ
ಹೇಳಿದ
ಶರವಣ:
ನಾಮಪತ್ರ
ಸಲ್ಲಿಸಿದ
ನಂತರ
ಸುದ್ದಿಗಾರರ
ಜೊತೆ
ಮಾತನಾಡಿದ
ಟಿ.ಎ.ಶರವಣ
ಅವರು,
ಪಕ್ಷ
ನಿಷ್ಠೆಯನ್ನು
ಗಮನಿಸಿ
ಎರಡನೇ
ಬಾರಿ
ವಿಧಾನ
ಪರಿಷತ್
ನಲ್ಲಿ
ಸೇವೆ
ಸಲ್ಲಿಸಲು
ವರಿಷ್ಠರು
ಅವಕಾಶ
ಕೊಟ್ಟಿದ್ದಾರೆ.
ದೇವೇಗೌಡರಿಗೆ,
ಕುಮಾರಸ್ವಾಮಿ
ಅವರಿಗೆ
ಹಾಗೂ
ಪಕ್ಷದ
ಶಾಸಕರಿಗೆ
ಧನ್ಯವಾದ
ಸಲ್ಲಿಸುವುದಾಗಿ
ಹೇಳಿದರು.
ಸಣ್ಣ ಸಮಾಜದಿಂದ ಬಂದಿದ್ದೇನೆ, ಹಾಗಿದ್ದರೂ ಬೆಳೆಯಲು ಅವಕಾಶ ಕೊಟ್ಟಿದ್ದಾರೆ. ನನ್ನ ಜವಾಬ್ದಾರಿ ಇನ್ನಷ್ಟು ಜಾಸ್ತಿಯಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮೂರನೇ ಬಾರಿಗೆ ಪಟ್ಟಾಭಿಷೇಕ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
Recommended Video