Breaking: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ: ವಿಜಯೇಂದ್ರಗೆ ಇಲ್ಲ ಟಿಕೆಟ್
ಬೆಂಗಳೂರು, ಮೇ 27: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಚಲುವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್, ಎಸ್. ಕೇಶವ ಪ್ರಸಾದ್ ಮತ್ತು ಲಕ್ಷ್ಮಣ ಸವದಿ ಅವರನ್ನು ಆಯ್ಕೆ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಟಿಕೆಟ್ ಘೋಷಿಸಿಲ್ಲ. ಈ ಮೂಲಕ ವಿಜಯೇಂದ್ರ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಅವಕಾಶ ತಪ್ಪಿದಂತಾಗಿದೆ.
ಹೊರಟ್ಟಿಗೆ ಟಿಕೆಟ್
ಇನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಹೊರಟ್ಟಿ ಈಗಾಗಲೇ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿಕೊಂಡು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ನಳಿನ್
ಕುಮಾರ್
ಕಟೀಲ್
ಹೇಳಿಕೆ:
"ರಾಜ್ಯದಿಂದ
ನಾಲ್ಕು
ಜನರ
ಹೆಸರನ್ನು
ಕಳುಹಿಸಲಾಗಿತ್ತು.
ನಾಲ್ಕೂ
ಜನರನ್ನು
ಹೈಕಮಾಂಡ್
ಅಂತಿಮಗೊಳಿಸಿದೆ.
ನಮ್ಮ
ತಂಡದ
ನಾಲ್ಕೂ
ಜನ
ಅಭ್ಯರ್ಥಿಗಳಾಗಿ
ಆಯ್ಕೆಯಾಗಿದ್ದಾರೆ.
ಇದು
ಬಹಳ
ಸಂತೋಷದ
ದಿನ.
ಇದಲ್ಲದೆ,
ಪಶ್ಚಿಮ
ಶಿಕ್ಷಕರ
ಕ್ಷೇತ್ರಕ್ಕೆ
ಬಸವರಾಜ
ಹೊರಟ್ಟಿ
ಅವರು
ಆಯ್ಕೆಯಾಗಿದ್ದು,
ಅವರಿಗೂ
ಅಭಿನಂದನೆ
ಸಲ್ಲಿಸುತ್ತೇನೆ,"
ಎಂದು
ಪಕ್ಷದ
ಕಚೇರಿಯಲ್ಲಿ
ಮಂಗಳವಾರ
ಮಾತನಾಡಿದರು.
ವಿಜಯಯೇಂದ್ರ ಅವರ ಹೆಸರನ್ನು ಸರ್ವ ಸಮ್ಮತಿಯಿಂದ ಶಿಫಾರಸು ಮಾಡಿದ್ದರು. ರಾಷ್ಟ್ರೀಯ ನಾಯಕರು ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಂಡಿರುತ್ತಾರೆ. ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಬೇರೆ ಬೇರೆ ಜವಾಬ್ದದಾರಿಗಳಿವೆ. ಅದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎಂದಷ್ಟೇ ಕಟೀಲು ಹೇಳಿದರು.