ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ
ಬೆಂಗಳೂರು, ಏಪ್ರಿಲ್ 29 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಪರಿಣಾಮ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದು, ಹಲವು ಉದ್ಯಮಗಳು ನಷ್ಟ ಅನುಭವಿಸುತ್ತಿವೆ. ನಷ್ಟದಿಂದ ಹೊರ ಬರಲು ಕಾರ್ಮಿಕರನ್ನು ಬಲಿಪಶು ಮಾಡಲಾಗುತ್ತಿದೆ.
Recommended Video
ಕರ್ನಾಟಕದ ಹಲವಾರು ಉದ್ಯಮಗಳು ಈಗಾಗಲೇ ಕಾರ್ಮಿಕರಿಗೆ ಮನೆಯ ದಾರಿ ತೋರಿಸಿವೆ. ಇನ್ನೂ ಹಲವು ಉದ್ಯಮಗಳು ಕಾರ್ಮಿಕರ ವೇತನಕ್ಕೆ ಕತ್ತರಿ ಹಾಕಿವೆ. ಕಾರ್ಮಿಕರ ಸಂಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಈಗ ಕೆಲಸ ಬಿಟ್ಟರೂ ಬೇರೆ ಕಡೆ ಕೆಲಸ ಸಿಗುವುದಿಲ್ಲ.
ವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರು
ಕಾರ್ಮಿಕರ ರಕ್ಷಣೆಗೆ ಇಲಾಖೆ ಬರಬೇಕು ಎಂದು ಹಲವಾರು ಸಂಘಟನೆಗಳು ಒತ್ತಾಯ ಮಾಡಿದ್ದವು. ಈಗ ಕಾರ್ಮಿಕ ಇಲಾಖೆ ದೂರುಗಳನ್ನು ಆಲಿಸಲು ವೆಬ್ಸೈಟ್ನಲ್ಲಿ ಅವಕಾಶ ನೀಡಿದೆ. ಇಲ್ಲಿಗೆ ಭೇಟಿ ನೀಡುವ ಮೂಲಕ ಕಾರ್ಮಿಕರು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು.
ಲಾಕ್ ಡೌನ್; ವಲಸೆ ಕಾರ್ಮಿಕರು ಸಂಕಷ್ಟದಲ್ಲಿ
ಲಾಕ್ ಡೌನ್ ಸಮಯದಲ್ಲಿ ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆದರೆ, ಹಲವು ಉದ್ಯಮಗಳು ಇದನ್ನು ಪಾಲಿಸುತ್ತಿಲ್ಲ. ಕೆಲವು ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. ವೇತನ ಕೊಡದೇ ಸತಾಯಿಸುತ್ತಿದ್ದಾರೆ.
ಕೊರೊನಾದಿಂದ 40 ಕೋಟಿ ಕಾರ್ಮಿಕರು ಮತ್ತಷ್ಟು ಬಡತನದ ಕೂಪಕ್ಕೆ!
ಕರ್ನಾಟಕದಲ್ಲಿ
ಕಾರ್ಮಿಕರನ್ನು
ಕೆಲಸದಿಂದ
ತೆಗೆದರೆ,
ವೇತನ
ನೀಡದಿದ್ದರೆ,
ವೇತನ
ಕಡಿತ
ಮಾಡಿದರೆ
ದೂರು
ಕೊಡಲು
ವೆಬ್ಸೈಟ್ನಲ್ಲಿ
ಅವಕಾಶವಿದೆ.
ಕಾರ್ಮಿಕರು
ಇದನ್ನು
ಬಳಕೆ
ಮಾಡಿಕೊಳ್ಳಬೇಕು
ಎಂದು
ಎಐಸಿಸಿಟಿಯು
ಕರೆ
ನೀಡಿದೆ.
'ಕಾರ್ಮಿಕ ದೂರು ನೋಂದಣಿ' ಹೆಸರಿನಲ್ಲಿ ಇದನ್ನು ಆರಂಭಿಸಲಾಗಿದೆ. ವೆಬ್ಸೈಟ್ಗೆ ಭೇಟಿ ನೀಡಿದರೆ ಕಾರ್ಮಿಕರ ಹೆಸರು, ಮೊಬೈಲ್ ನಂಬರ್, ವಯಸ್ಸು, ಯಾವ ರಾಜ್ಯ, ಪ್ರಸ್ತುತ ಇರುವ ವಿಳಾಸ ಮುಂತಾದ ವಿವರಗಳನ್ನು ಭರ್ತಿ ಮಾಡಬೇಕು.
ರಾಜ್ಯದಲ್ಲಿ ಗಾರ್ಮೆಂಟ್ಸ್ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳು ಸೇರಿದಂತೆ ವಿವಿಧ ಉದ್ಯಮದ ಕಾರ್ಮಿಕರಿಗೆ ಹಲವಾರು ತೊಂದರೆಗಳಿದ್ದು, ದೂರು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಿದ ಕಾರ್ಮಿಕರ ವಿವರವನ್ನು ಗೌಪ್ಯವಾಗಿಡಲಾಗುತ್ತದೆಯೇ? ಎಂಬುದನ್ನು ಇಲಾಖೆ ಇನ್ನೂ ಸ್ಪಷ್ಟಪಡಿಸಿಲ್ಲ.
ದೂರು ಕೊಡಲು ಇಲ್ಲಿ ಕ್ಲಿಕ್ ಮಾಡಿ