ಪರಮೇಶ್ವರ್ ನಾಯಕ್ ವಿವಾದ, ವರದಿ ಕೇಳಿದ ಹೈಕಮಾಂಡ್!
ಬೆಂಗಳೂರು, ಜನವರಿ 30 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ರಾಜೀನಾಮೆ ಪಡೆಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಅತ್ತ ಕಾಂಗ್ರೆಸ್ ಹೈಕಮಾಂಡ್ ಸಚಿವರ ವಿವಾದದ ಬಗ್ಗೆ ವಿವರವಾದ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಸೂಚನೆ ನೀಡಿದೆ.
ಶನಿವಾರ
ಕೆಪಿಸಿಸಿ
ಅಧ್ಯಕ್ಷ
ಮತ್ತು
ಗೃಹ
ಸಚಿವ
ಡಾ.ಜಿ.ಪರಮೇಶ್ವರ
ಅವರಿಗೆ
ಸೂಚನೆ
ನೀಡಿರುವ
ಕಾಂಗ್ರೆಸ್
ಹೈಕಮಾಂಡ್,
ಕಾರ್ಮಿಕ
ಮತ್ತು
ಬಳ್ಳಾರಿ
ಉಸ್ತುವಾರಿ
ಸಚಿವ
ಪರಮೇಶ್ವರ
ನಾಯಕ್
ಅವರ
ವಿವಾದದ
ಬಗ್ಗೆ
ಸಮಗ್ರವಾದ
ವರದಿ
ನೀಡುವಂತೆ
ಹೇಳಿದೆ.
[ಸಚಿವರನ್ನು
ಸಮರ್ಥಿಸಿಕೊಂಡ
ಸಿದ್ದರಾಮಯ್ಯ]
ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ವರ್ಗಾವಣೆ ವಿಚಾರ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಅನುಪಮಾ ಶೆಣೈ ಅವರ ವರ್ಗಾವಣೆ ರದ್ದುಗೊಳಿಸಿ, ಪರಮೇಶ್ವರ್ ನಾಯಕ್ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿ ಶನಿವಾರ ಕೂಡ್ಲಿಗಿ ಬಂದ್ಗೆ ನಡೆಸಲಾಗುತ್ತಿದೆ. [ಕೂಡ್ಲಿಗಿ ಬಂದ್ ವಿವರಗಳ ಇಲ್ಲಿವೆ]
ಈಗಾಗಲೇ ರಾಜ್ಯಾದ್ಯಂತ ಪರಮೇಶ್ವರ್ ನಾಯಕ್ ಅವರ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ. ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಕು. ಪರಮೇಶ್ವರ ಅವರು ನೀಡುವ ವರದಿಯನ್ನು ಆಧಾರವಾಗಿಟ್ಟುಕೊಂಡು ಸಚಿವರ ರಾಜೀನಾಮೆ ಪಡೆಯುವ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. [ಡಿವೈಎಸ್ಪಿ ಅನುಪಮಾ ಪರಿಚಯ]
ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ತಮ್ಮ ಪೋನ್ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಪರಮೇಶ್ವರ್ ನಾಯಕ್ ಅವರು ತನ್ನ ಪ್ರಭಾವ ಬಳಸಿ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪವಿದೆ. ಅನುಪಮಾ ಶೆಣೈ ಅವರು ಮಾತ್ರವಲ್ಲದೇ ತಮ್ಮ ಕೆಲಸಕ್ಕೆ ಅಡ್ಡಿಪಡಿಸಿದ ಇತರ ಅಧಿಕಾರಿಗಳನ್ನು ಅವರು ಬಳ್ಳಾರಿಯಿಂದ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪಗಳಿವೆ.