ದೀಪಾವಳಿ, ವಿಶೇಷ ಸಾರಿಗೆ ವ್ಯವಸ್ಥೆ: KSRTC ಮಹತ್ವದ ಪ್ರಕಟಣೆ
ಬೆಂಗಳೂರು, ಅ 19: ವಾರಾಂತ್ಯಕ್ಕೆ ಹೊಂದಿಕೊಂಡು ಬರುತ್ತಿರುವ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಿಶೇಷ ಬಸ್ ವ್ಯವಸ್ಥೆಯನ್ನು ಎಂದಿನಂತೆ ಕಲ್ಪಿಸಲಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಎಸ್ಆರ್ಟಿಸಿ, 1600 ಹೆಚ್ಚುವರಿ ಬಸ್ಸುಗಳನ್ನು ಓಡಿಸುವುದಾಗಿ ತಿಳಿಸಿದೆ. ಅಕ್ಟೋಬರ್ 25, 26 ಮತ್ತು 27ರಂದು ಬೆಂಗಳೂರಿನಿಂದ ಬಸ್ ವ್ಯವಸ್ಥೆ ವಿವಿಧ ಪ್ರದೇಶಗಳಿಗೆ ಇರಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಪ್ರಯಾಣಿಕರಿಗೆ ಸಿಹಿ ಸುದ್ದಿ: ದೀಪಾವಳಿಗಾಗಿ KSRTC ಯಿಂದ ಬಂಪರ್ ಆಫರ್
ಕೆಂಪೇಗೌಡ
ಬಸ್
ನಿಲ್ದಾಣದಿಂದ:
ಧರ್ಮಸ್ಥಳ,
ಕುಕ್ಕೇ
ಸುಬ್ರಮಣ್ಯ,
ಶಿವಮೊಗ್ಗ,
ಹಾಸನ,
ಮಂಗಳೂರು,
ಕುಂದಾಪುರ,
ಶೃಂಗೇರಿ,
ಹೊರನಾಡು,
ದಾವಣಗೆರೆ,
ಹುಬ್ಬಳ್ಳಿ,
ಧಾರವಾಡ,
ಬೆಳಗಾವಿ,
ವಿಜಯಪುರ,
ಗೋಕರ್ಣ,
ಶಿರಸಿ,
ಕಾರವಾರ,
ರಾಯಚೂರು,
ಕಲಬುರಗಿ,
ಬಳ್ಳಾರಿ,
ಕೊಪ್ಪಳ,
ಯಾದಗಿರಿ,
ಬೀದರ್,
ತಿರುಪತಿ.
ಮೈಸೂರು
ಸ್ಯಾಟಿಲೈಟ್
ಬಸ್
ನಿಲ್ದಾಣದಿಂದ:
ಮೈಸೂರು,
ಹುಣಸೂರು,
ಪಿರಿಯಾಪಟ್ಟಣ,
ವಿರಾಜಪೇಟೆ,
ಕುಶಾಲನಗರ,
ಮಡಿಕೇರಿ.
ಶಾಂತಿನಗರ
ಬಸ್
ನಿಲ್ದಾಣದಿಂದ:
ತಮಿಳುನಾಡು,
ಆಂಧ್ರ,
ತೆಲಂಗಾಣದ
ಕಡೆಗೆ.
ಮಧುರೈ,
ಕುಂಭಕೋಣಂ,
ತಿರುಚಿ,
ಚೆನ್ನೈ,
ಕೊಯಮುತ್ತೂರು,
ವಿಜಯವಾಡ,
ಹೈದರಾಬಾದ್.
ಬಸವೇಶ್ವರ ಬಸ್ ನಿಲ್ದಾಣ, ಪೀಣ್ಯ, ಜಯನಗರ, ವಿಜಯನಗರ, ಜಾಲಹಳ್ಳಿ, ನವರಂಗ್, ಮಲ್ಲೇಶ್ವರ, ಬನಶಂಕರಿ, ಜೀವನಭೀಮಾ ನಗರ, ಗಂಗಾನಗರ, ಕೆಂಗೇರಿ ಮುಂತಾದ ಸ್ಥಳಗಳಿಂದ ಒತ್ತಡಕ್ಕೆ ಅನುಗುಣವಾಗಿ, ಧರ್ಮಸ್ಥಳ, ಕುಕ್ಕೇ ಸುಬ್ರಮಣ್ಯ, ಶಿವಮೊಗ್ಗ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಕಡೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಕೆಎಸ್ಆರ್ಟಿಸಿ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು
ಹಾಗೆಯೇ, ಅಕ್ಟೋಬರ್ 29ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ ವ್ಯವಸ್ಥೆಯನನು ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.