ಸ್ವಾತಂತ್ರ್ಯ ದಿನಾಚರಣೆ : ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್
ಬೆಂಗಳೂರು, ಆಗಸ್ಟ್ 14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಈ ವಾರಾಂತ್ಯದಲ್ಲಿ ಹೆಚ್ಚುವರಿ ಬಸ್ ಗಳನ್ನು ರಸ್ತೆಗಿಳಿಸಲಿದೆ.
ಆ.14 ಮತ್ತು 15ರಂದು ನಗರದ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜ್ಯದ ವಿವಿಧ ಪ್ರದೇಶಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದೆ.
ಕೆಂಪೇಗೌಡ
ಬಸ್
ನಿಲ್ದಾಣದಲ್ಲಿ
ಮೆಟ್ರೋ
ಕಾಮಗಾರಿ
ನಡೆಯುತ್ತಿದ್ದು,
ಸ್ಥಳದ
ಅಭಾವವಿರುವುದರಿಂದ
ಹಾಗೂ
ಪ್ರಯಾಣಿಕರಿಗೆ
ಅನುಕೂಲಕ್ಕೆ
ನಗರದ
ವಿವಿಧ
ಪಿಕಪ್
ಪಾಯಿಂಟ್ಗಳಿಂದ
ಮುಂಗಡ
ಬುಕ್ಕಿಂಗ್
ವ್ಯವಸ್ಥೆಯ
ವಾಹನಗಳನ್ನು
ಕಾರ್ಯಾಚರಣೆ
ಮಾಡಲು
ಕ್ರಮ
ಕೈಗೊಳ್ಳಲಾಗಿದೆ.
ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮೈಸೂರು ರಸ್ತೆ ಬಸ್ ನಿಲ್ದಾಣ, ಬಸವೇಶ್ವರ ಬಸ್ ನಿಲ್ದಾಣ (ಪೀಣ್ಯ), ಜಯನಗರ ಟಿಟಿಎಂಸಿ, ಗಂಗಾನಗರ, ಮಲ್ಲೇಶ್ವರಂ 18ನೇ ಕ್ರಾಸ್, ಜಯನಗರ 4ನೆ ಬ್ಲಾಕ್ ಸೇರಿ ವಿವಿಧ ಸ್ಥಳಗಳಿಂದ ಕಾರ್ಯಾಚರಣೆ ಮಾಡಲಿವೆ.
ಹೆಚ್ಚುವರಿ
ವಾಹನಗಳಿಗೆ
ಮುಂಗಡ
ಟಿಕೆಟ್
ಪಡೆಯುವ
ಪ್ರಯಾಣಿಕರು
ಆಯಾ
ಸ್ಥಳಗಳಿಂದಲೇ
ಪ್ರಯಾಣಿಸಬಹುದು
ಹಾಗೂ
ಮುಂಗಡ
ರಹಿತ
ವಾಹನಗಳನ್ನು
ಕೆಂಪೇಗೌಡ
ಬಸ್
ನಿಲ್ದಾಣದಿಂದ
ಕಾರ್ಯಾಚರಣೆ
ಮಾಡಲಾಗುವುದು
ಎಂದು
ಕೆಎಸ್ಸಾರ್ಟಿಸಿ
ಹೇಳಿದೆ.
ದಾವಣಗೆರೆ,
ಹುಬ್ಬಳ್ಳಿ,
ಹೊಸಪೇಟೆ,
ಬಳ್ಳಾರಿ,
ಶಿವಮೊಗ್ಗ
ಮಾರ್ಗದ
ಮುಂಗಡ
ರಹಿತ
ಮತ್ತು
ಹೆಚ್ಚುವರಿ
ವಾಹನಗಳನ್ನು
ಮೆಜೆಸ್ಟಿಕ್
ಬಸ್
ನಿಲ್ದಾಣದ
ಮುಂಭಾಗದ
ಬಿಎಂಟಿಸಿ
ಸರ್ವಿಸ್
ರಸ್ತೆಯ
ಮೂಲಕ
ಕಾರ್ಯಾಚರಣೆ
ಮಾಡಲಿವೆ
ಎಂದು
ಪ್ರಕಟಿಸಲಾಗಿದೆ.