ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ನಗರದಿಂದ ಕೆಎಸ್ಆರ್‌ಟಿಸಿ ತಿರುಪತಿ-ತಿರುಮಲ ಪ್ಯಾಕೇಜ್

By Gururaj
|
Google Oneindia Kannada News

ಬೆಂಗಳೂರು, ಜುಲೈ 14 : ಕೆಎಸ್ಆರ್‌ಟಿಸಿಯ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ರಾಜ್ಯದ ವಿವಿಧ ನಗರಗಳಿಂದ ಕೆಎಸ್ಆರ್‌ಟಿಸಿ ಈ ಪ್ಯಾಕೇಜ್‌ ಅನ್ನು ಜು.20ರಿಂದ ಆರಂಭಿಸಲಿದೆ.

2017ರ ಮೇ ತಿಂಗಳಿನಲ್ಲಿ ಕೆಎಸ್‌ಆರ್‌ಟಿಸಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಿತ್ತು. ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಈ ಪ್ಯಾಕೇಜ್ ಆರಂಭಿಸಲಾಗಿತ್ತು. ಪ್ರಯಾಣಿಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಕೆಎಸ್ಆರ್‌ಟಿಸಿ 200 ಹುದ್ದೆ ನೇಮಕಾತಿ : ಅರ್ಜಿ ಸಲ್ಲಿಸುವುದು ಹೇಗೆ?ಕೆಎಸ್ಆರ್‌ಟಿಸಿ 200 ಹುದ್ದೆ ನೇಮಕಾತಿ : ಅರ್ಜಿ ಸಲ್ಲಿಸುವುದು ಹೇಗೆ?

ಆದ್ದರಿಂದ ಕೆಎಸ್ಆರ್‌ಟಿಸಿ ರಾಜ್ಯದ ವಿವಿಧ ನಗರಗಳಿಂದ ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಲಿದೆ. ಜುಲೈ 20ರಂದು ಈ ಪ್ಯಾಕೇಜ್‌ ಟೂರ್‌ಗೆ ಚಾಲನೆ ಸಿಗಲಿದೆ. ಈ ಪ್ಯಾಕೇಜ್‌ನಲ್ಲಿ ಐರಾವತ ಕ್ಲಬ್ ಕ್ಲಾಸ್ ಬಸ್‌ ಮೂಲಕ ಜನರು ತಿರುಪತಿಗೆ ಭೇಟಿ ನೀಡಬಹುದಾಗಿದೆ.

KSRTC

ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನಿಂದ ತಿರುಪತಿಗೆ ಕೆಎಸ್ಆರ್‌ಟಿಸಿ ಟೂರ್ ಪ್ಯಾಕೇಜ್ ಆರಂಭಿಸಲಿದೆ. ಜುಲೈ 20ರಂದು ಏಕಕಾಲಕ್ಕೆ ಈ ಎಲ್ಲಾ ನಗರದಿಂದ ಬಸ್ ಸೇವೆಗೆ ಚಾಲನೆ ನೀಡಲಾಗುತ್ತದೆ.

ಆಗಸ್ಟ್‌ನಲ್ಲಿ 5 ದಿನ ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ!ಆಗಸ್ಟ್‌ನಲ್ಲಿ 5 ದಿನ ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ!

ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನಿಂದ ತಿರುಪತಿಗೆ ಜನರು ಐರಾವತ ಕ್ಲಬ್ ಕ್ಲಾಸ್ ಬಸ್ ಮೂಲಕ ತೆರಳಬಹುದು. ಅದೇ ನಗರಕ್ಕೆ ವಾಪಸ್ ಆಗಬಹುದು. ಆದರೆ, 30 ದಿನದ ಮೊದಲು ಪ್ಯಾಕೇಜ್‌ ಟೂರ್ ಬುಕ್ ಮಾಡಬೇಕಾಗಿದೆ.

ಕೆಎಸ್ಆರ್‌ಟಿಸಿಯ ಅಧಿಕೃತ ಬುಕ್ಕಿಂಗ್ ಕೌಂಟರ್, ಅನೊಮೋದಿತ ಖಾಸಗಿ ಕೌಂಟರ್‌ಗಳಲ್ಲಿ ಪ್ರಯಾಣಿಕರು ಪ್ಯಾಕೇಜ್‌ ಟೂರ್‌ಗಳನ್ನು ಬುಕ್ ಮಾಡಬಹುದಾಗಿದೆ. ಆನ್‌ಲೈನ್ ಮತ್ತು ಮೊಬೈಲ್‌ ಮೂಲಕವೂ ಬುಕ್ಕಿಂಗ್ ಮಾಡಬಹುದಾಗಿದೆ.

English summary
The Karnataka State Road Transport Corporation (KSRTC) will introduce Tirupati-Tirumala package tours from Mangaluru, Davanagere, Shivamogga and Mysuru from July 20, 2018. This package tour includes travel by Airavat Club Class bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X