ಕೆಎಸ್ಆರ್ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, ಪುಣೆಗೆ ಹೊಸ ಬಸ್
ಬೆಂಗಳೂರು, ಸೆಪ್ಟೆಂಬರ್, 3 : ಕೆಎಸ್ಆರ್ಟಿಸಿ ಮಣಿಪಾಲ್ಗೆ ಆರಂಭಿಸಿದ್ದ ಫ್ಲೈ ಬಸ್ ಸೇವೆಯನ್ನು ಕುಂದಾಪುರದ ತನಕ ವಿಸ್ತರಣೆ ಮಾಡಿದೆ. ಬೆಂಗಳೂರು-ಪುಣೆ ನಡುವೆ ನೂತನ ಕರೋನಾ ಸ್ಲೀಪರ ಬಸ್ ಸೇವೆಯನ್ನು ಆರಂಭಿಸಲಿದೆ.
ಕರ್ನಾಟಕ
ರಾಜ್ಯ
ರಸ್ತೆ
ಸಾರಿಗೆ
ಸಂಸ್ಥೆಯು
ಸೆ.11ರ
ಶುಕ್ರವಾರದಿಂದ
ಬೆಂಗಳೂರು-ಪುಣೆ
ನಡುವೆ
ಕರೋನಾ
ಸ್ಲೀಪರ್
ಬಸ್
ಸೇವೆಯನ್ನು
ಆರಂಭಿಸಲಿದೆ.
ಬೆಂಗಳೂರಿನಿಂದ
ಸಂಜೆ
6
ಗಂಟೆಗೆ
ಹೊರಡುವ
ಬಸ್
ಮರುದಿನ
ಬೆಳಗ್ಗೆ
8
ಗಂಟೆಗೆ
ಪುಣೆ
ತಲುಪಲಿದೆ.[ಮಣಿಪಾಲ್-ಬೆಂಗಳೂರು
ಬಸ್
ದರಪಟ್ಟಿ]
ಪುಣೆಯಿಂದ ಸಂಜೆ 6 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 8 ಗಂಟೆಗೆ ಬೆಂಗಳೂರು ತಲುಪಲಿದೆ. ಈ ಮಾರ್ಗದ ಪ್ರಯಾಣ ದರ 1,200 ರೂ.ಗಳು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 080- 49596666 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. [ಟಿಕೆಟ್ ಬುಕ್ ಮಾಡಲು ವಿಳಾಸ]
ಫ್ಲೈ ಬಸ್ ಕುಂದಾಪುರಕ್ಕೆ : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಣಿಪಾಲ್ ನಡುವೆ ಸಂಚಾರ ನಡೆಸುತ್ತಿರುವ ಫ್ಲೈ ಬಸ್ ಸೇವೆಯನ್ನು ಸೆ.27ರಿಂದ ಕುಂದಾಪುರದ ತನಕ ವಿಸ್ತರಣೆ ಮಾಡಲಾಗುತ್ತದೆ.
ಬೆಂಗಳೂರು-ಮಣಿಪಾಲ್ ನಡುವೆ ಆ.20ರಿಂದ ಫ್ಲೈ ಬಸ್ ಸೇವೆ ಆರಂಭಿಸಲಾಗಿತ್ತು. ಇದನ್ನು ಈಗ ಕುಂದಾಪುರದ ತನಕ ವಿಸ್ತರಣೆ ಮಾಡಲಾಗುತ್ತಿದೆ. ಈ ಮಾರ್ಗದ ಪ್ರಯಾಣ ದರ 1,150 ರೂ.ಗಳು.
ಬೆಂಗಳೂರಿನಿಂದ ಹೊರಡುವ ಬಸ್ ಹಾಸನ, ಮಂಗಳೂರು, ಉಡುಪಿ, ಮಣಿಪಾಲ್ ಮೂಲಕ ಕುಂದಾಪುರಕ್ಕೆ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಡುವ ಬಸ್ ಬೆಳಗ್ಗೆ 6.45ಕ್ಕೆ ಕುಂದಾಪುರ ತಲುಪಲಿದೆ. ಕುಂದಾಪುರದಿಂದ ರಾತ್ರಿ 7 ಗಂಟೆಗೆ ಹೊರಟು, ಬೆಳಗ್ಗೆ 4.45ಕ್ಕೆ ಬೆಂಗಳೂರಿಗೆ ತಲುಪಲಿದೆ.