ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ; ಪ್ರಯಾಣಿಕರಿಗೆ ಸೂಚನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 17: ಕೆಎಸ್ಆರ್‌ಟಿಸಿ ಕರ್ನಾಟಕ-ಕೇರಳ ನಡುವೆ ಬಸ್ ಸಂಚಾರವನ್ನು ಆರಂಭಿಸುತ್ತಿದೆ. ಓಣಂ ಹಬ್ಬದ ಪ್ರಯುಕ್ತ ಆಗಸ್ಟ್ 24 ರಿಂದ ಸೆಪ್ಟೆಂಬರ್ 6ರ ತನಕ ಬಸ್‌ಗಳು ಸಂಚಾರ ನಡೆಸಲಿವೆ.

Recommended Video

Lakshmi Hebbalkar ಪುತ್ರನ ನಿಶ್ಚಿತಾರ್ಥಕ್ಕೆ ಎಲ್ಲಾ ಪಕ್ಷದವರಿಗೂ ಆಮಂತ್ರಣ | Oneindia Kannada

ಸೋಮವಾರ ಕೆಎಸ್ಆರ್‌ಟಿಸಿ ಈ ಕುರಿತು ಮಾಹಿತಿ ನೀಡಿದೆ. ಬೆಂಗಳೂರು ಮತ್ತು ಮೈಸೂರಿನಿಂದ ಕೇರಳ ರಾಜ್ಯದ ವಿವಿಧ ಪ್ರದೇಶಗಳಿಗೆ ಬಸ್‌ಗಳು ಸಂಚಾರ ನಡೆಸಲಿವೆ. ಬಸ್‌ನಲ್ಲಿ ಸಂಚಾರ ನಡೆಸುವ ಜನರು ಕೆಲವು ನಿರ್ದೇಶನಗಳನ್ನು ಪಾಲಿಸಬೇಕಿದೆ.

ಆ.25ರಿಂದ ಕೇರಳ-ಕರ್ನಾಟಕ ನಡುವೆ ಬಸ್ ಸೇವೆ ಆ.25ರಿಂದ ಕೇರಳ-ಕರ್ನಾಟಕ ನಡುವೆ ಬಸ್ ಸೇವೆ

ಬೆಂಗಳೂರು ನಗರದಿಂದ ಕಣ್ಣೂರು, ಎರ್ನಾಕುಲಂ, ಕಾನ್ಹಂಗಾಡ್, ಕಾಸರಗೋಡು, ಕೊಟ್ಟಾಯಂ, ಕಲ್ಲಿಕೋಟೆ, ಪಾಲಘಾಟ್, ಶ್ರಿಶೂರು, ತಿರುವನಂತಪುರಂ ಮತ್ತು ವಡಕರಾಗೆ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ

ಮೈಸೂರಿನಿಂದ ತಿರುವನಂತಪುರಂ, ಎರ್ನಾಕುಲಂ, ಕೊಟ್ಟಾಯಂಗೆ ಮತ್ತು ಈ ಸ್ಥಳಗಳಿಂದ ಮೈಸೂರಿಗೆ ಬಸ್‌ಗಳು ಸಂಚಾರ ನಡೆಸಲಿವೆ. ಆಗಸ್ಟ್ 25ರಿಂದ ಸೆಪ್ಟೆಂಬರ್ 6ರ ತನಕ ಕರ್ನಾಟಕಕ್ಕೆ ಬಸ್ ಸಂಚಾರ ನಡೆಸುವುದಾಗಿ ಕೇರಳ ಸಾರಿಗೆ ಇಲಾಖೆಯೂ ಘೋಷಣೆ ಮಾಡಿದೆ.

ಕೆಎಸ್ಆರ್‌ಟಿಸಿ ನೌಕರರ ಬಗ್ಗೆ ಕಾಳಜಿ; ಸಿಎಂಗೆ ಸಿದ್ದರಾಮಯ್ಯ ಪತ್ರ ಕೆಎಸ್ಆರ್‌ಟಿಸಿ ನೌಕರರ ಬಗ್ಗೆ ಕಾಳಜಿ; ಸಿಎಂಗೆ ಸಿದ್ದರಾಮಯ್ಯ ಪತ್ರ

ಕೇರಳಕ್ಕೆ ಹೋಗಲು ಸೂಚನೆಗಳು

ಕೇರಳಕ್ಕೆ ಹೋಗಲು ಸೂಚನೆಗಳು

ಕರ್ನಾಟಕದಿಂದ ಕೇರಳಕ್ಕೆ ಹೋಗುವಾಗ ಕೇರಳ ಸರ್ಕಾರದ ಆದೇಶದ ಅನ್ವಯ ಪ್ರಯಾಣಿಕರು ಕೇರಳ ಸರ್ಕಾರದ ಕೋವಿಡ್ 19 ಜಾಗೃತ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ವೆಬ್ ಸೈಟ್ ವಿಳಾಸ

ನೋಂದಣಿ ಕಡ್ಡಾಯವಾಗಿದೆ

ನೋಂದಣಿ ಕಡ್ಡಾಯವಾಗಿದೆ

ಬಸ್ಸನ್ನು ಹತ್ತುವ ಮುಂಚೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಬಗ್ಗೆ ಪುರಾವೆಯನ್ನು ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ತೋರಿಸಬೇಕು.ಇಲ್ಲವಾದಲ್ಲಿ ಬಸ್ ಹತ್ತಲು ಅವಕಾಶ ನೀಡುವುದಿಲ್ಲ.

ಕೇರಳದಿಂದ ಬರಲು ಸೂಚನೆ

ಕೇರಳದಿಂದ ಬರಲು ಸೂಚನೆ

ಕರ್ನಾಟಕ ಸರ್ಕಾರದ ಸೂಚನೆ ಅನ್ವಯ ಎಲ್ಲಾ ಪ್ರಯಾಣಿಕರು ಕೇರಳದಿಂದ ಬರುವಾಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಬಸ್ ಹತ್ತುವ ಮೊದಲು ಸಿಬ್ಬಂದಿಗೆ ನೋಂದಣಿ ಕುರಿತು ಪುರಾವೆ ತೋರಿಸಬೇಕು. ವಿಳಾಸ

ಕೇರಳದಿಂದಲೂ ಬಸ್ ಸಂಚಾರ

ಕೇರಳದಿಂದಲೂ ಬಸ್ ಸಂಚಾರ

ತಮಿಳುನಾಡು ಮತ್ತು ಕರ್ನಾಟಕಕ್ಕೆ ಬಸ್ ಸಂಚಾರ ನಡೆಸಲಾಗುತ್ತದೆ ಎಂದು ಕೇರಳ ಸಾರಿಗೆ ಇಲಾಖೆಯೂ ಘೋಷಣೆ ಮಾಡಿದೆ. ಬುಕ್ ಮಾಡಿರುವ ಬಸ್‌ಗಳ ಸಂಚಾರ ಯಾವುದಾದರೂ ಕಾರಣಕ್ಕೆ ರದ್ದಾದರೆ ಸಂಪೂರ್ಣ ಹಣವನ್ನು ವಾಪಸ್ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

English summary
KSRTC will run special bus to Kerala from Bengaluru and Mysuru for Onam festival. Bus will run from August 24 to September 6, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X